AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ತಂದೆ ತಾಯಿ ತೀರಿಕೊಂಡಾಗಲೂ ಇಷ್ಟು ನೋವಾಗಿರಲಿಲ್ಲ.. BSYಗೆ ಬುದ್ಧಿ ಕಲಿಸ್ತೇವೆ -ವಾಟಾಳ್​ ಗುಡುಗು

ನನ್ನ ತಂದೆ ತಾಯಿ ತೀರಿಕೊಂಡಾಗ್ಲು ನನ್ನಗೆ ನೋವು ಆಗಿರಲಿಲ್ಲ. ಇವತ್ತು ಯಡಿಯೂರಪ್ಪ ತುಂಬಾ ನೋವು ಮಾಡಿದ್ದಾರೆ. ಈ ಯಡಿಯೂರಪ್ಪಗೆ ಬುದ್ಧಿ ಕಲಿಸ್ತೇವೆ ಎಂದು ವಾಟಾಳ್ ನಾಗಾರಾಜ್ ಸಿಟ್ಟಾದರು.

ನನ್ನ ತಂದೆ ತಾಯಿ ತೀರಿಕೊಂಡಾಗಲೂ ಇಷ್ಟು ನೋವಾಗಿರಲಿಲ್ಲ.. BSYಗೆ ಬುದ್ಧಿ ಕಲಿಸ್ತೇವೆ -ವಾಟಾಳ್​ ಗುಡುಗು
BSYಗೆ ಬುದ್ಧಿ ಕಲಿಸ್ತೇವ -ವಾಟಾಳ್​ ಗುಡುಗು
KUSHAL V
| Updated By: ಸಾಧು ಶ್ರೀನಾಥ್​|

Updated on:Dec 05, 2020 | 2:39 PM

Share

ಬೆಂಗಳೂರು: 25 ಸಾವಿರ ಕನ್ನಡ ಪರ ಕಾರ್ಯಕರ್ತರನ್ನ ಬಂಧಿಸಿದ್ದಾರೆ. ಪೊಲೀಸರು ಮಫ್ತಿಯಲ್ಲಿ ಹೋಗಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಪ್ರತಿಭಟನಾನಿರತ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.

ಈ ರಾಜ್ಯಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಮೋಸಗಾರ. ಯಡಿಯೂರಪ್ಪ ಮಾಡಿದ ಮೋಸದಿಂದ ನೋವಾಗಿದೆ. ಕನ್ನಡಿಗರನ್ನು ತುಳಿದು ಬೇರೆಯವರಿಗೆ ಪಟ್ಟ ಕಟ್ಟುತ್ತಿದ್ದಾರೆ. ತಮಿಳು, ತೆಲುಗು, ಮರಾಠಿಗರಿಗೆ ಪಟ್ಟ ಕಟ್ಟಲು ಮುಂದಾಗಿದ್ದಾರೆ ಎಂದು ವಾಟಾಳ್​ ಕಿಡಿಕಾರಿದರು. ನಾವು ಬಂದ್‌ಗೆ ಅನುಮತಿಯನ್ನು ಪಡೆಯಬೇಕಾ? ಕರ್ನಾಟಕ ಬಂದ್ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಜೈಲ್ ಭರೋ ಚಳವಳಿಗೆ ಬುಧವಾರ ಸಭೆ ಕರೆದಿದ್ದೇವೆ ಎಂದು ಟಿವಿ9ಗೆ ವಾಟಾಳ್ ನಾಗರಾಜ್ ಹೇಳಿದರು.

‘ಸಿಎಂ B.S.ಯಡಿಯೂರಪ್ಪ ಪರಭಾಷಾ ಏಜೆಂಟ್’ ಸಿಎಂ ಬಿ.ಎಸ್.ಯಡಿಯೂರಪ್ಪ ಒಬ್ಬ ದ್ರೋಹಿ. ಸಿಎಂ ಬಿ.ಎಸ್.ಯಡಿಯೂರಪ್ಪ ಈ ದೇಶದ ಹಿಟ್ಲರ್. ಸಿಎಂ B.S.ಯಡಿಯೂರಪ್ಪ ಪರಭಾಷಾ ಏಜೆಂಟ್. ಬಿಜೆಪಿ, RSS ಕನ್ನಡ ವಿರೋಧಿಯಾಗಿವೆ ಎಂದು ವಾಟಾಳ್ ನಾಗರಾಜ್ ತಮ್ಮ ಆಕ್ರೋಶ ಹೊರಹಾಕಿದರು. ನನ್ನ ತಂದೆ ತಾಯಿ ತೀರಿಕೊಂಡಾಗ್ಲು ನನ್ನಗೆ ನೋವು ಆಗಿರಲಿಲ್ಲ. ಇವತ್ತು ಯಡಿಯೂರಪ್ಪ ತುಂಬಾ ನೋವು ಮಾಡಿದ್ದಾರೆ. ಈ ಯಡಿಯೂರಪ್ಪಗೆ ಬುದ್ಧಿ ಕಲಿಸ್ತೇವೆ ಎಂದು ವಾಟಾಳ್ ನಾಗಾರಾಜ್ ಸಿಟ್ಟಾದರು.

ಟೌನ್ ಹಾಲ್​ನತ್ತ ಹೊರಟ ವಾಟಾಳ್ ನಾಗಾರಾಜ್ ಕಾರ್ಪೋರೇಷನ್ ಮುಂಭಾಗದ ರಸ್ತೆಯಲ್ಲಿ ತಮ್ಮ ಸಹ ಕನ್ನಡ ಪರ ಹೋರಾಟಗಾರರೊಂದಿಗೆ ಸಾಗಿದರು. ಈ ನಡುವೆ, ವಾಟಾಳ್ ನಾಗರಾಜ್ ಮತ್ತು ಪೊಲೀಸರ ಮಧ್ಯೆ ವಾಗ್ವಾದ ಸಹ ನಡೆಯಿತು. ಆಗ, ವಾಟಾಳ್ ಹಾಗೂ ಇತರ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಕಾರ್ಪೊರೇಷನ್ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಸಹ ಉಂಟಾಯಿತು.

Published On - 11:37 am, Sat, 5 December 20

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ