AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ತಂದೆ ತಾಯಿ ತೀರಿಕೊಂಡಾಗಲೂ ಇಷ್ಟು ನೋವಾಗಿರಲಿಲ್ಲ.. BSYಗೆ ಬುದ್ಧಿ ಕಲಿಸ್ತೇವೆ -ವಾಟಾಳ್​ ಗುಡುಗು

ನನ್ನ ತಂದೆ ತಾಯಿ ತೀರಿಕೊಂಡಾಗ್ಲು ನನ್ನಗೆ ನೋವು ಆಗಿರಲಿಲ್ಲ. ಇವತ್ತು ಯಡಿಯೂರಪ್ಪ ತುಂಬಾ ನೋವು ಮಾಡಿದ್ದಾರೆ. ಈ ಯಡಿಯೂರಪ್ಪಗೆ ಬುದ್ಧಿ ಕಲಿಸ್ತೇವೆ ಎಂದು ವಾಟಾಳ್ ನಾಗಾರಾಜ್ ಸಿಟ್ಟಾದರು.

ನನ್ನ ತಂದೆ ತಾಯಿ ತೀರಿಕೊಂಡಾಗಲೂ ಇಷ್ಟು ನೋವಾಗಿರಲಿಲ್ಲ.. BSYಗೆ ಬುದ್ಧಿ ಕಲಿಸ್ತೇವೆ -ವಾಟಾಳ್​ ಗುಡುಗು
BSYಗೆ ಬುದ್ಧಿ ಕಲಿಸ್ತೇವ -ವಾಟಾಳ್​ ಗುಡುಗು
KUSHAL V
| Edited By: |

Updated on:Dec 05, 2020 | 2:39 PM

Share

ಬೆಂಗಳೂರು: 25 ಸಾವಿರ ಕನ್ನಡ ಪರ ಕಾರ್ಯಕರ್ತರನ್ನ ಬಂಧಿಸಿದ್ದಾರೆ. ಪೊಲೀಸರು ಮಫ್ತಿಯಲ್ಲಿ ಹೋಗಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಪ್ರತಿಭಟನಾನಿರತ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.

ಈ ರಾಜ್ಯಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಮೋಸಗಾರ. ಯಡಿಯೂರಪ್ಪ ಮಾಡಿದ ಮೋಸದಿಂದ ನೋವಾಗಿದೆ. ಕನ್ನಡಿಗರನ್ನು ತುಳಿದು ಬೇರೆಯವರಿಗೆ ಪಟ್ಟ ಕಟ್ಟುತ್ತಿದ್ದಾರೆ. ತಮಿಳು, ತೆಲುಗು, ಮರಾಠಿಗರಿಗೆ ಪಟ್ಟ ಕಟ್ಟಲು ಮುಂದಾಗಿದ್ದಾರೆ ಎಂದು ವಾಟಾಳ್​ ಕಿಡಿಕಾರಿದರು. ನಾವು ಬಂದ್‌ಗೆ ಅನುಮತಿಯನ್ನು ಪಡೆಯಬೇಕಾ? ಕರ್ನಾಟಕ ಬಂದ್ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಜೈಲ್ ಭರೋ ಚಳವಳಿಗೆ ಬುಧವಾರ ಸಭೆ ಕರೆದಿದ್ದೇವೆ ಎಂದು ಟಿವಿ9ಗೆ ವಾಟಾಳ್ ನಾಗರಾಜ್ ಹೇಳಿದರು.

‘ಸಿಎಂ B.S.ಯಡಿಯೂರಪ್ಪ ಪರಭಾಷಾ ಏಜೆಂಟ್’ ಸಿಎಂ ಬಿ.ಎಸ್.ಯಡಿಯೂರಪ್ಪ ಒಬ್ಬ ದ್ರೋಹಿ. ಸಿಎಂ ಬಿ.ಎಸ್.ಯಡಿಯೂರಪ್ಪ ಈ ದೇಶದ ಹಿಟ್ಲರ್. ಸಿಎಂ B.S.ಯಡಿಯೂರಪ್ಪ ಪರಭಾಷಾ ಏಜೆಂಟ್. ಬಿಜೆಪಿ, RSS ಕನ್ನಡ ವಿರೋಧಿಯಾಗಿವೆ ಎಂದು ವಾಟಾಳ್ ನಾಗರಾಜ್ ತಮ್ಮ ಆಕ್ರೋಶ ಹೊರಹಾಕಿದರು. ನನ್ನ ತಂದೆ ತಾಯಿ ತೀರಿಕೊಂಡಾಗ್ಲು ನನ್ನಗೆ ನೋವು ಆಗಿರಲಿಲ್ಲ. ಇವತ್ತು ಯಡಿಯೂರಪ್ಪ ತುಂಬಾ ನೋವು ಮಾಡಿದ್ದಾರೆ. ಈ ಯಡಿಯೂರಪ್ಪಗೆ ಬುದ್ಧಿ ಕಲಿಸ್ತೇವೆ ಎಂದು ವಾಟಾಳ್ ನಾಗಾರಾಜ್ ಸಿಟ್ಟಾದರು.

ಟೌನ್ ಹಾಲ್​ನತ್ತ ಹೊರಟ ವಾಟಾಳ್ ನಾಗಾರಾಜ್ ಕಾರ್ಪೋರೇಷನ್ ಮುಂಭಾಗದ ರಸ್ತೆಯಲ್ಲಿ ತಮ್ಮ ಸಹ ಕನ್ನಡ ಪರ ಹೋರಾಟಗಾರರೊಂದಿಗೆ ಸಾಗಿದರು. ಈ ನಡುವೆ, ವಾಟಾಳ್ ನಾಗರಾಜ್ ಮತ್ತು ಪೊಲೀಸರ ಮಧ್ಯೆ ವಾಗ್ವಾದ ಸಹ ನಡೆಯಿತು. ಆಗ, ವಾಟಾಳ್ ಹಾಗೂ ಇತರ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಕಾರ್ಪೊರೇಷನ್ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಸಹ ಉಂಟಾಯಿತು.

Published On - 11:37 am, Sat, 5 December 20

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು