AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಬಳಿಕ ವಿಜಯಪುರದಲ್ಲಿ ನಡೆಯುತ್ತೆ ಶಿವಾಜಿ ಉತ್ಸವ; ಏನಿದರ ವಿಶೇಷ? ಇಲ್ಲಿದೆ ವಿವರ

ದೀಪಾವಳಿ ಬಳಿಕ ನಗರದಲ್ಲಿ ಶಿವಾಜಿ ಮಹಾರಾಜರ ವಿಶೇಷ ಉತ್ಸವ ಆಚರಣೆ ಮಾಡಲಾಗುತ್ತದೆ. ಮರಾಠಾ ಸಮುದಾಯದವರ ಮನೆಯ ಮುಂದೆ ಶಿವಾಜಿ ಮಹಾರಾಜರ ಸಂಸ್ಥಾನ ಹಾಗೂ ಕೋಟೆಗಳ ಮಾದರಿಯನ್ನು ಸ್ಥಾಪಿಸಲಾಗುತ್ತದೆ.

ದೀಪಾವಳಿ ಬಳಿಕ ವಿಜಯಪುರದಲ್ಲಿ ನಡೆಯುತ್ತೆ ಶಿವಾಜಿ ಉತ್ಸವ; ಏನಿದರ ವಿಶೇಷ? ಇಲ್ಲಿದೆ ವಿವರ
ದೀಪಾವಳಿ ಬಳಿಕ ವಿಜಯಪುರದಲ್ಲಿ ನಡೆಯುತ್ತೆ ಶಿವಾಜಿ ಉತ್ಸವ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on:Nov 18, 2023 | 4:42 PM

Share

ವಿಜಯಪುರ, ನವೆಂಬರ್ 18: ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaj) ಹೆಸರು ಯಾರು ತಾನೆ ಕೇಳಿಲ್ಲ ಹೇಳಿ. ಧರ್ಮ ರಕ್ಷಣೆಗಾಗಿ ಹಾಗೂ ಸ್ವರಾಜ್ಯ ನಿರ್ಮಾಣಕ್ಕಾಗಿ ಹೋರಾಡಿದ ಧೀರ ಮಹಾರಾಜರು ಅವರು. ಅಂತಹ ರಾಜನನ್ನು ಮೋಸದಿಂದ ಕೊಲ್ಲಲು ಯತ್ನಿಸಿದ್ದ ಆದಿಲ್ ಶಹಾ ಸಾಮ್ರಾಜ್ಯದ ಮಹಾದಂಡನಾಯಕ ಗಜಗಾತ್ರದ ಅಫ್ಜಲ್ ಖಾನ್​​ನನ್ನು ಉಪಾಯದಿಂದಲೇ ಮುಗಿಸಿದ ಚಾಣಾಕ್ಷ ಈ ಶಿವಾಜಿ. ಇಂತಹ ಶಿವಾಜಿ ಅತಿಹೆಚ್ಚು ಕೋಟೆಗಳನ್ನು ವಶ ಪಡಿಸಿಕೊಳ್ಳಲು ಯುದ್ಧಕ್ಕೆ ಸನ್ನದ್ದವಾಗಿದ್ದು ದೀಪಾವಳಿ ನಂತರ ಎನ್ನಲಾಗಿದೆ. ಹಾಗಾಗಿ ಶಿವಾಜಿಯ ಶೌರ್ಯ, ಬುದ್ದಿಶಕ್ತಿ, ಚಾಣಾಕ್ಷತನ ಮುಂದಿನ ಯುವ ಪೀಳಿಗೆಗೆ ತಿಳಿಯಲಿ ಎಂದು ದೀಪಾವಳಿ ನಂತರ ವಿಜಯಪುರದಲ್ಲಿ ವಿಶಿಷ್ಟ ಆಚರಣೆ ಮಾಡಲಾಗುತ್ತಿದೆ.

ದೀಪಾವಳಿ ಬಳಿಕ ನಗರದಲ್ಲಿ ನಡೆಯುತ್ತೆ ಶಿವಾಜಿ ಮಹಾರಾಜರ ವಿಶೇಷ ಉತ್ಸವ ಆಚರಣೆ ಮಾಡಲಾಗುತ್ತದೆ. ಮರಾಠಾ ಸಮುದಾಯದವರ ಮನೆಯ ಮುಂದೆ ಶಿವಾಜಿ ಮಹಾರಾಜರ ಸಂಸ್ಥಾನ ಹಾಗೂ ಕೋಟೆಗಳ ಮಾದರಿಯನ್ನು ಸ್ಥಾಪಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಆಡಳಿತ ಹೊಂದಿದ ಹಾಗೂ ಧರ್ಮ ರಕ್ಷಣೆ, ಸ್ವರಾಜ್ಯ ನಿರ್ಮಾಣ ಮಾಡಿದ ಛತ್ರಪತಿ ಶಿವಾಜಿಯನ್ನು ಇಂದಿಗೂ ಸಹ ವಿಜಯಪುರದಲ್ಲಿ ನೆನೆಸಲಾಗುತ್ತಿದೆ. ವಿಜಯಪುರ ಶಿವಾಜಿ ಸರ್ಕಲ್ ಬಳಿ ಇರುವ ಶಿವಾಜಿ ಪೇಟೆ, ಡೋಬಳೆ ಗಲ್ಲಿಯ ಪ್ರತಿಯೊಂದು ಮನೆಯ ಮುಂದೆ ಶಿವಾಜಿಯ ಸಂಸ್ಥಾನದ ರೂಪಕ ನಿರ್ಮಿಸಿರುವುದು ಕಾಣಬಹುದು. ಮಹಾನ್ ಧೀರನೂ ಹಾಗೂ ಶೂರನು ಆಗಿದ್ದ ಶಿವಾಜಿಯ ಆಡಳಿತ ಹಾಗೂ ಕಾರ್ಯ ವೈಖರಿ ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಹೀಗಾಗಿಯೇ ಇಲ್ಲಿ ಪ್ರತಿವರ್ಷ ದಿಪಾವಳಿಯಿಂದ ಬಳಿಕ ಶಿವಾಜಿ ಕೋಟೆಯ ಮಾದರಿಗಳನ್ನು ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತದೆ. ಮುಸ್ಲೀಂ ಪ್ರಾಭಲ್ಯದಲ್ಲಿ ಹಿಂದೂ ರಾಜರುಗಳು ಸಾಮ್ರಾಟರು ತಮ್ಮ ರಾಜ್ಯಗಳನ್ನು ಕಳೆದುಕೊಂಡಿದ್ದರು. ಇಂಥ ರಾಜ್ಯಗಳನ್ನು ಕೋಟೆ ಕೊತ್ತಲುಗಳನ್ನು ವಾಪಸ್ ಪಡೆಯು ಶಿವಾಜಿ ಮಹಾರಾಜ ಯುದ್ದವನ್ನು ಆರಂಭಿಸಿದ್ದರು.

ದೀಪಾವಳಿಯ ಬಳಿಕ ಯುದ್ದವನ್ನು ಆರಂಭಿಸಿದ್ದ ಶಿವಾಜಿ ಮಹಾರಾಜ ಒಂದೊಂದೇ ಕೋಟೆಗಳನ್ನು ವಶ ಪಡಿಸಿಕೊಳ್ಳುತ್ತಾ ಗೆಲುವಿನ ನಗೆ ಬೀರಿದ್ದರು. ದೀಪಾವಳಿಯ ಬಳಿಕ ಮುಸ್ಲಿಂ ರಾಜ್ಯರುಗಳ ಆಧೀನದಲ್ಲಿದ್ದ 13 ಕೋಟೆಗಳನ್ನು ಗೆದ್ದಿದ್ದ ಶಿವಾಜಿಯ ಶೌರ್ಯ ಹಾಗೂ ಧೈರ್ಯ ಎಲ್ಲರಿಗೂ ಮಾದರಿಯಾಗಿದೆ. ಶಿವಾಜಿಯ ವೀರತನ, ಪರಾಕ್ರಮಗಳ ಕುರಿತು ಇಂದಿನ ಪೀಳಿಗೆಗೆ ಅರಿವು ಮೂಡಿಸುವ ಸಲುವಾಗಿ ಶಿವಾಜಿಪೇಟೆ ಹಾಗೂ ಡೊಬಳೆ ಗಲ್ಲಿಯಲ್ಲಿ 50 ಕ್ಕೂ ಹೆಚ್ಚು ಮನೆಗಳ ಮುಂದೆ ಶಿವಾಜಿಯ ಪ್ರತಿಮೆ, ಅವರ ಆಡಳಿತ ಶೈಲಿ, ಕೋಟೆ, ಸೈನಿಕರು, ಕಾರ್ಯಾಚರಣೆ, ಗುಪ್ತಚರ ಕಾರ್ಯಗಳ ಬಗ್ಗೆ ಗೊಂಬೆಗಳನ್ನು ಮಾಡಿ ಮನೆಯ ಮುಂದೆ ಶಿವಾಜಿ ಕೋಟೆಯ ರೂಪುರೇಷೆ ನಿರ್ಮಿಸಲಾಗಿರುತ್ತದೆ.

ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಹೈನೋದ್ಯಮ ಮಾಡುವ ಗೌಳಿಗರು ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸುತ್ತಾರೆ! ಏನದರ ವಿಶೇಷ?

ಛತ್ರಪತಿ ಶಿವಾಜಿ ಮಹಾರಾಜರನ್ನು ಹೇಗಾದರೂ ಮಾಡಿ ಕೊಲ್ಲಬೇಕು ಎಂಬ ದುರುದ್ದೇಶದಿಂದ ಪ್ಲಾನ್ ಮಾಡಿದ್ದ ಆದಿಲ್ ಶಹಾ ಸಾಮ್ರಾಜ್ಯದ ಮಹಾದಂಡನಾಯಕ ಅಫ್ಜಲ್ ಖಾನ್ ಕುತಂತ್ರ ಮಾಡಿರುತ್ತಾನೆ. 1659 ನವ್ಹೆಂಬರ್ 10 ರಂದು ಪ್ರತಾಪಗಢದ ಪ್ರದೇಶದಲ್ಲಿ ಶಿವಾಜಿಯನ್ನು ಆಲಂಗಿಸಿ ಕೊಲೆ ಮಾಡಲು ಯತ್ನಿಸಿದಾಗ ಈ ಕುರಿತು ಮೊದಲೆ ಸಂಶಯಗೊಂಡಿದ್ದ ಶಿವಾಜಿ ಅಫ್ಜಲ್ ಖಾನನ ಕುತಂತ್ರಕ್ಕೆ ಬಗ್ಗದೆ ಪ್ರತಿರೋಧ ಒಡ್ಡಿ ಉಪಾಯದಿಂದ ಆತನನ್ನೇ ಮುಗಿಸಿ ಬಿಡುತ್ತಾನೆ. ಈ ರೀತಿ ಹಿಂದೂ ಸಾಮ್ರಾಜ್ಯ ಸ್ಥಾಪಿಸಿದ ಶಿವಾಜಿ ತನ್ನ ಶೌರ್ಯದಿಂದಲೇ ಯುದ್ಧಗಳನ್ನು ಗೆಲ್ಲುತ್ತಿದ್ದುದು ವಿಶೇಷವಾಗಿತ್ತು. ಹೀಗಾಗಿ ಆತನ ಸಾಧನೆಗಳ ಕುರಿತು ಜನರಲ್ಲಿ ಮೂಡಿಸುವ ಕೆಲಸ ವಿಜಯಪುರದಲ್ಲಿ ನಡೆಯುತ್ತಿದೆ. ಅಂದಿನಿಂದಲೂ ಸಹ ಡೋಬಳೆ ಗಲ್ಲಿಯ, ಶಿವಾಜಿ ಪೇಟೆಯ ಮನೆಗಳ ಮುಂದೆ ಶಿವಾಜಿ ಆಸ್ಥಾನವನ್ನು, ಕೋಟೆಗಳನ್ನು ಸ್ಥಾಪಿಸಿ ಪೂಜೆ ನಡೆಸಲಾಗುತ್ತದೆ. ಈ ಮೂಲಕ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಶೌರ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಶಿವಾಜಿ ಮಹಾರಾಜರ ರಾಜಧಾನಿಯಾಗಿದ್ದ ರಾಯಘಡ ಕೋಟೆ, ಪ್ರತಾಪಘಡ ಕೋಟೆ, ಶಿವನೇರಿ ಕೋಟೆ, ಸಿಂಹಘಡ ಕೋಟೆ ಮುಂತಾದವುಗಳನ್ನು ಇಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿರುತ್ತದೆ. ಮನೆಗಳ ಮುಂದೆ ಶಿವಾಜಿ ಮಹಾರಾಜರ ಕುತಂತ್ರಿಗಳನ್ನು ಬಗ್ಗುಬಡಿದು ಆಸ್ಥಾನಗಳನ್ನು ವಶಕ್ಕೆ ಪಡೆದು ವಿಜಯಿ ಶಾಲಿಯಾಗುತ್ತಿದ್ದ ಶಿವಾಜಿ ಮಹಾರಾಜರ ಕುರಿತು ಅರಿವು ಮೂಡಿಸುವ ಕೆಲಸ ಇಲ್ಲಿ ನಡೆದುಕೊಂಡು ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Sat, 18 November 23

Follow Us
Ashok Yadalli
Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!