AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಕೆ ಕಟ್ಟಿಬಿಟ್ಟಿದ್ದ ಗ್ರಾಮದ ದೇವರ ಕುದುರೆ ಸಾವು.. ಊರಿಗೆ ಊರೇ ಸೀಲ್‌ಡೌನ್‌, ಹೆಚ್ಚಾಯ್ತು ಆತಂಕ

ಆ ಗ್ರಾಮದಲ್ಲಿ ಯಾವುದೇ ಮಹಾಮಾರಿ ಕಾಯಿಲೆ ಬಂದ್ರೂ ದೇವರಿಗೆ ಹರಕೆ ಕಟ್ಟಿಕೊಂಡು ದೇವರ ಹೆಸರಿನಲ್ಲಿ ಕುದುರೆಯೊಂದನ್ನ ಊರು ಸಂಚರಿಸಲು ಬಿಡಲಾಗುತ್ತಿತ್ತು. ಹೀಗೆ ಕೊರೊನಾ ತೊಲಗಲೆಂದು ಹರಕೆ ಕಟ್ಟಿಕೊಂಡಿದ್ದ ಗ್ರಾಮಸ್ಥರು ದೇವರ ಹೆಸರಿನಲ್ಲಿ ಕುದುರೆ ಸಂಚರಿಸಲು ಬಿಟ್ಟದ್ರು. ಆದ್ರೆ ಈಗ ಆ ಕುದುರೆ ಸತ್ತಿದ್ದು, ಗ್ರಾಮದಲ್ಲಿ ಆತಂಕ ಎಂದುರಾಗಿದೆ.

ಹರಕೆ ಕಟ್ಟಿಬಿಟ್ಟಿದ್ದ ಗ್ರಾಮದ ದೇವರ ಕುದುರೆ ಸಾವು.. ಊರಿಗೆ ಊರೇ ಸೀಲ್‌ಡೌನ್‌, ಹೆಚ್ಚಾಯ್ತು ಆತಂಕ
ಹರಕೆ ಕಟ್ಟಿಬಿಟ್ಟಿದ್ದ ಗ್ರಾಮದ ದೇವರ ಕುದುರೆ ಸಾವು
ಆಯೇಷಾ ಬಾನು
|

Updated on: May 24, 2021 | 8:35 AM

Share

ಬೆಳಗಾವಿ: ಮೃತಪಟ್ಟ ಕುದುರೆಗೆ ಹೂವುಗಳನ್ನ ಹಾಕಿ ಸ್ವಾಮೀಜಿಗಳಿಂದ ಪೂಜೆ ಪುನಸ್ಕಾರ ಮಾಡಲಾಗಿದೆ. ಕುದುರೆಯನ್ನ ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವ ಮೆರವಣಿಗೆಯಲ್ಲಿ ನೂರಾರು ಜನ ಭಾಗಿಯಾಗಿದ್ದಾರೆ. ಮರವಣಿಗೆ ವೇಳೆ ದೈಹಿಕ ಅಂತರ, ಮಾಸ್ಕ್ ಮರೆತು ಜನರ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ. ಎಲ್ಲವೂ ಮುಗಿದ ಬಳಿಕ ಊರಿಗೆ ಊರೇ ಸೀಲ್ ಡೌನ್ ಆಗಿದೆ. ಪೊಲೀಸರ ಕಾವಲು. ಇಂತಹದೊಂದು ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮರಡಿಮಠ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದೇವರ ಕುದುರೆ ಸಾವು, ಊರಿಗೆ ಊರೇ ಸೀಲ್‌ಡೌನ್‌ ಕುದುರೆ ರಾತ್ರಿ ಇಡೀ ಊರು ಸಂಚಾರ ಮಾಡಿದ್ರೆ ಕೊರೊನಾ ಕಡಿಮೆಯಾಗುತ್ತೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿತ್ತು. ಹೀಗಾಗಿ ದಷ್ಟಪುಷ್ಟವಾದ ಕುದುರೆಯನ್ನ ಮರಡಿಮಠ ಗ್ರಾಮದ ಕಾಡಸಿದ್ದೇಶ್ವರ ದೇವರ ಹೆಸರಿನಲ್ಲಿ ಬಧುವಾರ ಮಧ್ಯರಾತ್ರಿ ಸಂಚರಿಸಲು ಬಿಟ್ಟಿದ್ರು. ಕಳೆದ 51ವರ್ಷದ ಹಿಂದೆ ಮಲೇರಿಯಾ, ಪ್ಲೇಗ್ ಬಂದಾಗ ಇದೇ ರೀತಿ ಕುದುರೆಯನ್ನ ರಾತ್ರಿ ಸಂಚರಿಸಲು ಬಿಟ್ಟು ರೋಗದಿಂದ ಗ್ರಾಮಸ್ಥರು ಬಚಾವ್ ಆಗಿದ್ದರಂತೆ. ಈ ಕಾರಣಕ್ಕೆ ನಾಲ್ಕು ದಿನಗಳಿಂದ ಊರಿನ ಎಲ್ಲಾ ಬೀದಿ ಸುತ್ತುತಿತ್ತು ಈ ದೇವರ ಕುದುರೆ. ಆದ್ರೆ ಇಪ್ಪತ್ತು ವರ್ಷದ ಈ ಕುದುರೆ ನಿನ್ನೆ ಬೆಳಗ್ಗೆ ಏಕಾಏಕಿ ಮೃತಪಟ್ಟಿದೆ. ಕುದುರೆ ಸಾವಿನ ಸುದ್ದಿ ಕೇಳಿದ ಗ್ರಾಮಸ್ಥರು, ಅಕ್ಕಪಕ್ಕದ ಗ್ರಾಮದ ಜನರು ಕುದುರೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ. ನೂರಾರು ಜನರು ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದೇ ಕೊವಿಡ್ ನಿಮಯ ಉಲ್ಲಂಘನೆ ಮಾಡಿ ಕುದುರೆ ಅಂತ್ಯಸಂಸ್ಕಾರ ಮಾಡಿದ್ದಾರೆ.

god horse died

ಕುದುರೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಜನ

ಇನ್ನೂ ಯಾವಾಗ ಕೊವಿಡ್ ನಿಯಮ ಉಲ್ಲಂಘನೆ ಮಾಡಿ ಕುದುರೆ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂಬುದು ಗೊತ್ತಾಯಿತೋ ಕೂಡಲೇ ಸ್ಥಳಕ್ಕೆ ಬಂದ ಗೋಕಾಕ್ ಗ್ರಾಮೀಣ ಪೊಲೀಸರು ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಇತ್ತ ಸ್ಥಳಕ್ಕೆ ಬಂದ ತಹಶೀಲ್ದಾರ್ ಕೂಡಲೇ ಗ್ರಾಮವನ್ನ ಸೀಲ್ ಡೌನ್ ಮಾಡಿಸಿದರು. ಇದರ ಜೊತೆಗೆ ಗ್ರಾಮದ ಯಾರು ಕೂಡ ಹೊರ ಬಾರದಂತೆ ಸೂಚನೆ ನೀಡಿ ಮುಖ್ಯ ದ್ವಾರದಲ್ಲಿ ಪೊಲೀಸರ ಕಾವಲಿಗೆ ನಿಲ್ಲಿಸಿದರು‌. ಇತ್ತ ಗ್ರಾಮದ ಎಲ್ಲರಿಗೂ ತಪಾಸಣೆ ಮಾಡುವಂತೆ ಆದೇಶ ಮಾಡಿದ್ದಾರೆ‌. 15 ಜನ ಕಾರ್ಯಕ್ರಮದ ಆಯೋಜಕರ ಮೇಲೆ ಕೇಸ್ ದಾಖಲಿಸಿ ತನಿಖೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಗ್ರಾಮಕ್ಕೆ ಪೊಲೀಸರು ಬರ್ತಿದ್ದಂತೆ ಮಠದ ಪವಾಡೇಶ್ವರ ಸ್ವಾಮೀಜಿ, ಆಯೋಜಕರು ಊರು ಬಿಟ್ಟಿದ್ದಾರೆ‌‌.

ಒಟ್ನಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದರು ಮರಡಿಮಠ ಗ್ರಾಮದ ಜನ ಕ್ಯಾರೇ ಎನ್ನದೇ ಕೊವಿಡ್ ನಿಮಯ ಗಾಳಿ ತೂರಿ‌ ಕುದುರೆ ಅಂತ್ಯಸಂಸ್ಕಾರ ಮಾಡಿದ್ದು, ಕೊರೊನಾ ಆತಂಕವನ್ನ ಹೆಚ್ಚಿಸಿದೆ.

god horse died

ಊರಿಗೆ ಊರೇ ಸೀಲ್‌ಡೌನ್‌

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; ಬ್ಲ್ಯಾಕ್ ಫಂಗಸ್ ಸೋಂಕಿಗೆ ಎಲ್ಲಾ ಜಿಲ್ಲೆಯಲ್ಲಿ ಸಿಗುತ್ತೆ ಚಿಕಿತ್ಸೆ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ