AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಘಾಟನೆಗೂ ಮುನ್ನ ಕಟ್ಟಡದ ಗೋಡೆಗಳಲ್ಲಿ ನೀರು ಸೋರಿಕೆ; ಕಳಪೆ ಕಾಮಗಾರಿ ‌ನಡುವೆ ಪಾರ್ಕಿಂಗ್ ನಿರ್ವಹಣೆ ಟೆಂಡರ್ ಕರೆದ ಬಿಬಿಎಂಪಿ

ಉದ್ಘಾಟನೆಗೂ ಮುನ್ನ ಪಾರ್ಕಿಂಗ್ ಕಟ್ಟಡದ ಗೋಡೆಗಳಲ್ಲಿ ನೀರು ಸೋರಿಕೆಯಾಗಲು ಪ್ರಾರಂಭವಾಗಿದೆ. ಈ ನಡುವೆ ಪಾರ್ಕಿಂಗ್ ನಿರ್ವಹಣೆಗಾಗಿ ಬಿಬಿಎಂಪಿ ಟೆಂಡರ್​ ಕರೆದಿದ್ದು, ನೀರು ಸೋರಿಕೆ ವಿಚಾರ ತಿಳಿದು ಕಂಪನಿಗಳು ಅರ್ಜಿಗಳನ್ನು ಹಿಂಪಡೆದಿವೆ.

ಉದ್ಘಾಟನೆಗೂ ಮುನ್ನ ಕಟ್ಟಡದ ಗೋಡೆಗಳಲ್ಲಿ ನೀರು ಸೋರಿಕೆ; ಕಳಪೆ ಕಾಮಗಾರಿ ‌ನಡುವೆ ಪಾರ್ಕಿಂಗ್ ನಿರ್ವಹಣೆ ಟೆಂಡರ್ ಕರೆದ ಬಿಬಿಎಂಪಿ
ಪಾರ್ಕಿಂಗ್ ಕಟ್ಟಡದಲ್ಲಿ ನೀರು ಸೋರಿಕೆ ಮತ್ತು ಬಿರುಕು
TV9 Web
| Updated By: Rakesh Nayak Manchi|

Updated on:Jul 23, 2022 | 11:41 AM

Share

ಬೆಂಗಳೂರು: ಉದ್ಘಾಟನೆಗೂ ಮುನ್ನ ಕಟ್ಟಡದ ಗೋಡೆಗಳಲ್ಲಿ ಬಿರುಕು ಕಂಡು ನೀರು ಸೋರಿಕೆಯಾಗಲು ಪ್ರಾರಂಭವಾಗಿರುವುದನ್ನು ನೋಡಿದಾಗ ಬಿಬಿಎಂಪಿ ಕಾಮಗಾರಿ ಗುಣಮಟ್ಟ ಎಷ್ಟಿದೆ ಎಂಬುದನ್ನು ಪ್ರಶ್ನಿಸಬೇಕಿದೆ. ಪಾರ್ಕಿಂಗ್ ಕಟ್ಟಡ ನಿರ್ಮಾಣ ಹಿನ್ನೆಲೆ 80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬಹುಮಹಡಿ ಕಟ್ಟಡ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದಿವೆ. ಇದೀಗ ಆ ಕಟ್ಟಡದಲ್ಲಿ ಸೋರಿಕೆ ಕಾಣಿಸಿಕೊಂಡಿದ್ದು,  ಸೋರಿಕೆ ಆಗುತ್ತಿರುವ ಗೋಡೆಗಳಿಗೆ ಸಿಬ್ಬಂದಿಗಳಿಂದ ತೇಪೆ ಹಚ್ಚುವ ಕೆಲಸ ನಡೆಯುತ್ತಿದೆ.

ಸ್ವಾತಂತ್ರ್ಯ ಉದ್ಯಾನವನ (ಫ್ರೀಡಂ ಪಾರ್ಕ್) ಬಳಿ ಬಹುಮಹಡಿ ಕಟ್ಟಡ ‌ನಿರ್ಮಾಣ ಮಾಡುವ ನಿಟ್ಟಿನಲ್ಲಿ 2015ರಲ್ಲಿ ಬಿಬಿಎಂಪಿ ಟೆಂಡರ್ ಕರೆದಿತ್ತು. ಅದರಂತೆ 80 ಕೋಟಿ ರೂಪಾಯಿಗೆ ಟೆಂಡರ್ ಪಡೆದುಕೊಂಡ ಖಾಸಗಿ ಕಂಪನಿ ಕೆ.ಎಂ.ವಿ ಪಾರ್ಕಿಂಗ್ ಕಟ್ಟಡ ನಿರ್ಮಾಣದ ಕಾಮಗಾರಿ ಆರಂಭಿಸಿತ್ತು. ಹೀಗೆ ಆರಂಭವಾದ ಕಟ್ಟಡ ಕಾಮಗಾರಿ ಕಳೆದ 8 ತಿಂಗಳ ಹಿಂದೆ ಪೂರ್ಣಗೊಂಡಿದ್ದು, ಈವರೆಗೆ ಉದ್ಘಾಟನೆಗೊಂಡಿರಲಿಲ್ಲ. ಈ ನಡುವೆ ಆ ಕಟ್ಟಡದಲ್ಲಿ ಸೋರಿಕೆ ಕಂಡುಬಂದು ಕಳಪೆ ಕಾಮಗಾರಿ ನಡೆದಿರುವುದು ತಿಳಿದುಬಂದಿದೆ.

ಕಾಮಗಾರಿ ಬಾಕಿ ಹಣ ಉಳಿಸಿಕೊಂಡ ಬಿಬಿಎಂಪಿ

ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಇದೀಗ ಸೋರಿಕೆ ಸಮಸ್ಯೆ ಕಂಡುಬಂದಿರುವ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಬಿಬಿಎಂಪಿಯು ಕಟ್ಟಡ ಕಾಮಗಾರಿಯ ಬಾಕಿ ಹಣವನ್ನು ಉಳಿಸಿಕೊಂಡಿದೆ. ಎಲ್ಲವೂ ಸಿದ್ಧವಾಗಿದೆ ಬಣ್ಣ ಹೊಡೆದು ಕಟ್ಟಡದ ಕೀ ಹಸ್ತಾಂತರ ಒಂದೇ ಬಾಕಿ ಇದೆ. ಆದರೆ ಗುತ್ತಿಗೆದಾರರಿಗೆ ಬಿಬಿಎಂಪಿ ನೀಡಬೇಕಿದ್ದ 30 ಕೋಟಿ ಟೆಂಡರ್​ನ ಹಣವನ್ನು ಬಾಕಿ ಇರಿಸಿದೆ. ಹೀಗಾಗಿ ಬಾಕಿ ನೀಡದ ಹೊರತಾಗಿ ನಾವು ಜಾಗ ಖಾಲಿ ಮಾಡಲ್ಲ ಎಂದು ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ.

ಬಾಕಿ ಹಣ ಉಳಿಕೊಂಡಿರುವ ಬಗ್ಗೆ ಮಾತನಾಡಿದ ಕೆ.ಎಂ.ವಿ.ಕಂಪನಿಯ ವಿವೇಕ್, ಸಣ್ಣಪುಟ್ಟ ‌ಕೆಲಸಗಳು ಬಾಕಿ ಇವೆ, ಅದರ ಕೆಲಸಗಳು ನಡೆಯುತ್ತಿದೆ. ಪಾಲಿಕೆಯು ನಮಗೆ‌ ಮೊದಲು ಬಾಕಿ ಹಣ ಪಾವತಿ ಮಾಡಲಿ. ಬಾಕಿ ಹಣ ಕೊಡದೇ ನಾವು ‌ಕೀ ಕೊಡುವುದಿಲ್ಲ, ಕೋರ್ಟ್ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ.

ಕಳಪೆ ಕಾಮಗಾರಿ ‌ನಡುವೆ ಪಾರ್ಕಿಂಗ್ ನಿರ್ವಹಣೆ ಟೆಂಡರ್ ಕರೆದ BBMP

ಫ್ರೀಡಂಪಾರ್ಕ್ ಬಳಿಯಿರುವ ಬಹುಮಹಡಿ ಪಾರ್ಕಿಂಗ್ ಕಟ್ಟಡದ ಐದು ವರ್ಷಗಳ ಕಾಲ ನಿರ್ವಹಣೆಗಾಗಿ ಬಿಬಿಎಂಪಿಯು ಪಾರ್ಕಿಂಗ್ ನಿರ್ವಹಣೆಯ ಟೆಂಡರ್ ಕರೆದಿದೆ. 2 ಕೋಟಿ ರೂ. ಡೆಪಾಸಿಟ್ ನೀಡಿ 5 ವರ್ಷಗಳ ಕಾಲ ಪಾರ್ಕಿಂಗ್ ನಿರ್ವಹಣೆ ಮಾಡಲು ಟೆಂಡರ್ ಆಹ್ವಾನಿಸಲಾಗಿದ್ದು, 4 ಖಾಸಗಿ ಏಜೆನ್ಸಿ ಕಂಪನಿಗಳು ಅರ್ಜಿ ಸಲ್ಲಿಸಿವೆ. ಆದರೆ ಕಟ್ಟಡದಲ್ಲಿ ನೀರು ಸೋರಿಕೆಯಾಗುತ್ತಿರುವ ವಿಚಾರ ತಿಳಿದು ಕಂಪನಿಗಳು ಅರ್ಜಿಯನ್ನು ವಾಪಸ್ ಪಡೆದುಕೊಂಡಿವೆ.

Published On - 11:41 am, Sat, 23 July 22

ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ