ಅ.28ರಂದು ಮುಡಾ ಕೇಸ್​​ಗೆ ಹೊಸ ರೂಪ: ಹೊಸ ಬಾಂಬ್ ಸಿಡಿಸಿದ ದೂರುದಾರ ಅಬ್ರಾಹಂ!

ಮುಡಾ ಹಗರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದಸರಾ ಉದ್ಘಾಟನೆ ವೇದಿಕೆಯಲ್ಲಿ ಮುಡಾ ರಾಜಕೀಯ ಮಾತನಾಡಿದ್ದನ್ನ ವಿಪಕ್ಷಗಳು ಖಂಡಿಸಿದ್ದು, ಸಿಎಂ ಪರ ಜಿಟಿ ದೇವೇಗೌಡ ಆಡಿದ ಮಾತನ್ನೂ ವಿರೋಧಿಸಿವೆ. ಈ ಮಧ್ಯೆ ದೂರುದಾರ ಸ್ನಹಮಯಿ ಕೃಷ್ಣ ಪ್ರತಿಕ್ರಿಯಿಸಿ, ಮುಡಾದಲ್ಲಿ ಜಿ.ಟಿ.ದೇವೇಗೌಡರದ್ದೂ ಅಕ್ರಮ ಇರಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದೆಲ್ಲರದ ಮಧ್ಯ ಇದೀಗ ಮತ್ತೋರ್ವ ದೂರುದಾರ ಟಿ.ಜೆ ಅಬ್ರಾಹಂ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಅ.28ರಂದು ಮುಡಾ ಕೇಸ್​​ಗೆ ಹೊಸ ರೂಪ: ಹೊಸ ಬಾಂಬ್ ಸಿಡಿಸಿದ ದೂರುದಾರ ಅಬ್ರಾಹಂ!
ಸಿದ್ದರಾಮಯ್ಯ-ಟಿಜೆ ಅಬ್ರಾಹಂ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Oct 04, 2024 | 6:57 PM

ಬೆಂಗಳೂರು, (ಅಕ್ಟೋಬರ್ 04): ಮುಡಾ ಹಗರಣದ ಕೇಂದ್ರ ಬಿಂದವೇ ಮೈಸೂರಿನ ವಿಜಯನಗರದಲ್ಲಿರೋ ಈ 14 ಸೈಟ್‌ಗಳು. ಇದೀಗ ಸಿಎಂ ಪತ್ನಿ ಪಾರ್ವತಿ ಹೆಸರಿನಲ್ಲಿ ಇದ್ದ ಇದೇ ನಿವೇಶನಗಳ ಮರಳಿ ಮುಡಾ ಪಾಲಾಗಿವೆ. ಆದ್ರೆ, ತನಿಖೆ ಮಾತ್ರ ಮುಂದುವರಿದಿದೆ. ಇಂದು ಲೋಕಾಯುಕ್ತ ಎಸ್‌ಪಿ ಟಿ.ಜೆ ಉದೇಶ್‌ ನೇತೃತ್ವದಲ್ಲಿ 14 ಸೈಟ್‌ಗಳ ಮಹಜರು ನಡೆಯಲಾಯ್ತು. ದೂರುದಾರ ಸ್ನೇಹಿಮಯಿ ಕೃಷ್ಣ ಸಮ್ಮುಖದಲ್ಲೇ ಸ್ಥಳ ಮಹಜರು ಆಗಿತ್ತು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಟಿ.ಜೆ ಅಬ್ರಾಹಂ ಪ್ರತಿಕ್ರಿಯಿಸಿ, ಅಕ್ಟೋಬರ್ 28ರಂದು ಪ್ರಕರಣಕ್ಕೆ ನಾವು ಹೊಸ ರೂಪ ಕೊಡುತ್ತಿದ್ದೇವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಬಗ್ಗೆ ಇಂದು(ಅ.04) ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ,ನಾನು ಸಿಎಂ ಪತ್ನಿ ವಾಪಸ್ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿಲ್ಲ. ಮುಡಾ ವಾಪಸ್ ಪಡೆದಿರೋದಕ್ಕೆ ಧನ್ಯವಾದ ಹೇಳಿದ್ದೇನೆ. ಸೈಟ್ ವಾಪಸ್ ಕೊಟ್ಟಿದ್ದಕ್ಕೆ ಹೋರಾಟ ನಿಲ್ಲಿಸುವುದಿಲ್ಲ. ದಾಖಲೆಗಳು ಇದೆ. ತಲೆ ಕೆಳಗೆ ನಿಂತರೂ ಕೇಸ್ ಬೀಳುವುದಿಲ್ಲ. ದಾಖಲೆಗಳ ಮೇಲೆ ಕೋರ್ಟ್ ಆದೇಶ ಕೊಟ್ಟಿದೆ. ಅಕ್ಟೋಬರ್ 28ರಂದ ಕೇಸ್ ಗೆ ಹೊಸ ರೂಪ ಕೊಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಮುಡಾ ಹಗರಣ: ಪ್ರಕರಣ ಎಲ್ಲಿಗೆ ಬಂತು? ಇಂದಿನ ಬೆಳವಣಿಗೆಯ ಡಿಟೇಲ್ಸ್ ಇಲ್ಲಿದೆ

ಸಿಬಿಐನವರಿಗೆ ಕೊಂಬಿದ್ಯಾ? ಆಕಾಶದಿಂದ ಬರುತ್ತಾರಾ?

ಸ್ನೇಹಮಯಿ ಕೃಷ್ಣ ಹೊರಾಟದ ಬಗ್ಗೆ ನಾನು ಮಾತನಾಡುವುದಿಲ್ಲ. ಹೈಕೊರ್ಟ್ ಆದೇಶ ನನ್ನ ದೂರಿನ ಮೇಲೆ ಕೊಟ್ಟಿದೆ. ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಒಂದು ತಿಂಗಳು ಟೈಮ್ ಕೇಳಿದ್ದೆ. ಲೋಕಯುಕ್ತ ಪೊಲೀಸರು ನಮ್ಮವರು. ಸಿಬಿಐನವರು ಯಾರು, ದಾಖಲೆಗಳು ಆರ್ ಟಿಸಿ, ದಾನ‌ಪತ್ರ ಕನ್ನಡದಲ್ಲಿವೆ. ಇದನ್ನ ಓದುವವರು ಕರ್ನಾಟಕದ ಅಧಿಕಾರಿಗಳು. ಸಿಬಿಐನವರಿಗೆ ಕೊಂಬಿದ್ಯಾ? ಆಕಾಶದಿಂದ ಬರುತ್ತಾರಾ? ಸಿಬಿಐ ಸೋತಿರುವ ಕೇಸ್ ಗಳನ್ನ ಲೋಕಾಯುಕ್ತಕ್ಕೆ ಕೊಡಲಿ. ಲೋಕಾಯುಕ್ತ ಪೊಲೀಸ್ ಅನ್ನೋದು ಡಿಫರೆಂಟ್ ವಿಂಗ್. ಅವರು ಸಿಎಂ, ಗೃಹ ಸಚಿವರಿಗೆ ರಿಪೊರ್ಟ್ ಮಾಡಬೇಕಂತ ಇಲ್ಲ. ಲೋಕಾಯುಕ್ತದಲ್ಲಿ ಒಳ್ಳೆ ಅಧಿಕಾರಿಗಳಿದ್ದಾರೆ. ನಮ್ಮಲ್ಲಿ ಆಗದಿದ್ದನ್ನ ಹಿಂದಿ ಬರೋರು ಏನ್ ಮಾಡ್ತಾರೆ? ಎಂದು ಪ್ರಶ್ನಿಸಿದರು. ಈ ಮೂಲಕ ಅಬ್ರಾಹಂ ಲೋಕಾಯುಕ್ತ ತನಿಖೆ ಸೂಕ್ತ ಎಂದು ಸ್ಪಷ್ಟಪಡಿಸಿದ್ದು, ಸಿಬಿಐ ತನಿಖೆಗೆ ವಿರೋಧಿಸಿದ್ದಾರೆ.

ವಿಪಕ್ಷಗಳು ಹಾಗೂ ಈ ಪ್ರಕರಣದ ಮತ್ತೋರ್ವ ದೂರುದಾರ ಸ್ನೇಹಮಣಿ ಕೃಷ್ಣ ಅವರು ಇಡಿ ಮತ್ತು ಸಿಬಿಐ ತನಿಖೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ. ಆದ್ರೆ, ಇನ್ನೋರ್ವ ದೂರುದಾರ ಟಿಜೆ ಅಬ್ರಾಹಂ ಸಿಬಿಐ ತನಿಖೆಗೆ ಆಕ್ಷೇಪ ವ್ಯಕ್ತಡಿಸಿದ್ದು, ಲೋಕಾಯುಕ್ತ ತನಿಖೆ ಸಾಕು ಎನ್ನುವ ಅರ್ಥದಲ್ಲಿ ಹೇಳಿದ್ದು, ಅಬ್ರಾಹಂ ಅವರ ಈ ನಡೆ ಅಚ್ಚರಿಗೆ ಕಾರಣವಾಗಿದೆ.

ಇನ್ನು ಅಕ್ಟೋಬರ್ 28ರಂದು ಮುಡಾ ಕೇಸ್​ಗೆ ಹೊಸ ರೂಪ ಕೊಡುತ್ತೇವೆ ಎಂದಿರುವ ಭಾರೀ ಸಂಚಲನಕ್ಕೆ ಕಾರಣವಾಗಿದ್ದು ಆ ಹೊಸ ರೂಪ ಏನು ಎನ್ನುವುದೇ ಕುತೂಹಲ ಮೂಡಿಸಿದೆ. ಅಬ್ರಾಹಂ ಅವರ ಹೊಸ ರೂಪದಿಂದ ಸಿಎಂಗೆ ಏನಾದರೂ ಕಂಟಕ ಎದುರಾಗುತ್ತಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ವಿಡಿಯೋ: ಅಲ್ಲೂರಿ ಜಿಲ್ಲೆಯ ನದಿಯಲ್ಲಿ ತೇಲಿಬಂದ ಆಂಜನೇಯ ಸ್ವಾಮಿ ವಿಗ್ರಹ!
ವಿಡಿಯೋ: ಅಲ್ಲೂರಿ ಜಿಲ್ಲೆಯ ನದಿಯಲ್ಲಿ ತೇಲಿಬಂದ ಆಂಜನೇಯ ಸ್ವಾಮಿ ವಿಗ್ರಹ!
ಕುಮಾರಸ್ವಾಮಿ ವಿರುದ್ಧ ಎಫ್​ಐಆರ್: ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದೇನು?
ಕುಮಾರಸ್ವಾಮಿ ವಿರುದ್ಧ ಎಫ್​ಐಆರ್: ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದೇನು?
ಮೈಸೂರು ದಸರಾ: ಹೇಗಿದೆ ನೋಡಿ ಹಳೇ ಬೈಕ್​ಗಳ ಸವಾರಿ!
ಮೈಸೂರು ದಸರಾ: ಹೇಗಿದೆ ನೋಡಿ ಹಳೇ ಬೈಕ್​ಗಳ ಸವಾರಿ!
ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀತಿ ಪಾಠ
ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀತಿ ಪಾಠ