AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಕರ್ಫ್ಯೂ ಮುಂದುವರಿಕೆ ಬಗ್ಗೆ ತೀರ್ಮಾನ; ಸಚಿವ ಡಾ.ಸುಧಾಕರ್

Karnataka Curfew: ಸರ್ಕಾರದ ಎಲ್ಲಾ ಸಚಿcವರೂ ಅಯಾ ಜಿಲ್ಲೆಗಳಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಜನರ ಜೀವ ಉಳಿಸಲು ಕಾರ್ಯ ನಿರತರಾಗಿದ್ದಾರೆ. ಹಿಂದಿನ ಮೂರು ನಾಲ್ಕು ದಿನಗಳಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲು ಜೀವ ಉಳಿಸುವ ಕೆಲಸ ಆಗಬೇಕು; ಸಚಿವ ಡಾ. ಸುಧಾಕರ್

ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಕರ್ಫ್ಯೂ ಮುಂದುವರಿಕೆ ಬಗ್ಗೆ ತೀರ್ಮಾನ; ಸಚಿವ ಡಾ.ಸುಧಾಕರ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ
guruganesh bhat
|

Updated on: Apr 25, 2021 | 10:49 PM

Share

ಬೆಂಗಳೂರು: ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಕರ್ಫ್ಯೂ ಮುಂದುವರಿಕೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ತಿಳಿಸಿದರು. ತಾಂತ್ರಿಕ ಸಮೀತಿ ನಿರ್ಬಂಧ ವಿಧಿಸುವುದು ಸೂಕ್ತ ಎಂದಿದೆ. ಎಲ್ಲಾ ಸಾಧಕ ಬಾಧಕಗಳನ್ನು ಅವಲೋಕಿಸಿ ನೋಡಿ ಮುಖ್ಯಮಂತ್ರಿ ಬಿ.ಸ್.ಯಡಿಯೂರಪ್ಪ ನಿರ್ಧಾರ ಕೈಗೊಳ್ಳುತ್ತಾರೆ ಎಂದು ರಾಜ್ಯ ಸರ್ಕಾರ ವಾರಾಮತ್ಯದ ಕರ್ಫ್ಯೂವನ್ನು ಮುಂದುವರೆಸಲಿದೆ ಎಂಬ ಊಹಾಪೋಹಗಳ ಕುರಿತು ಸ್ಪಷ್ಟಪಡಿಸಿದರು.

ಇಂದು ಡ್ರಗ್ ಕಂಟ್ರೋಲರ್ ಕಛೇರಿಗೆ ಭೇಟಿ ನೀಡಿದ್ದೇನೆ. ಆಕ್ಸಿಜನ್, ರೆಮಿಡಿಸಿವರ್ ಔಷಧ ಬೇಕಾದವರು ಇಲ್ಲಿಗೆ ಕರೆ ಮಾಡುತ್ತಾರೆ. ಆಯಾ ಜೋವಲಯದ ಔಷಧ, ಆಕ್ಸಿಜನ್ ಅಧಿಕಾರಿಗಳು ಸರಬರಾಜು ಮಾಡುತ್ತಾರೆ. ಸದ್ಯ ಆಕ್ಸಿಜನ್ ಸಮಸ್ಯೆ ನೀಗಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ದ್ರವ ಆಮ್ಲಜನಕದ ಕೊರತೆ ಆಗದಂತೆ ಹಗಲಿರುಳು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಹೆಚ್ಚುವರಿ ಡ್ರಗ್ ಕಂಟ್ರೋಲರ್ ಕೂಡ ಇಲ್ಲೇ ಇರುತ್ತಾರೆ. ರೆಮ್​ಡೆಸಿವರ್ ಔಷಧ ಸರಬರಾಜು, ನ್ಯೂನ್ಯತೆ, ವಿತರಣೆಗಳ ಬಗ್ಗೆ ಇನ್ನೂ ಉತ್ತಮ ರೀತಿಯಲ್ಲಿ ಮಾಹಿತಿ ಪಡೆಯಲಾಗಿದೆ. ಇರುವ ಇತಿ ಮಿತಿಯಲ್ಲಿ ಸಾಕಷ್ಟು ಶ್ರಮ ವಹಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಸರ್ಕಾರದ ಎಲ್ಲಾ ಸಚಿವರೂ ಅಯಾ ಜಿಲ್ಲೆಗಳಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಜನರ ಜೀವ ಉಳಿಸಲು ಕಾರ್ಯ ನಿರತರಾಗಿದ್ದಾರೆ. ಹಿಂದಿನ ಮೂರು ನಾಲ್ಕು ದಿನಗಳಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲು ಜೀವ ಉಳಿಸುವ ಕೆಲಸ ಆಗಬೇಕು. ಜೀವ ಭಧ್ರತೆ ಮುಖ್ಯ, ನಂತರ ಜೀವನದ ಭದ್ರತೆ ಮುಖ್ಯವಾಗುತ್ತದೆ. ಸದ್ಯ ಎಲ್ಲ ಉದ್ಯಮಗಳೂ ಸ್ಥಗಿತವಾಗಿವೆ. ಮುಂದಿನ ಎಲ್ಲಾ ಕ್ರಮಗಳ ಬಗ್ಗೆ ನಾಳೆ ತೀರ್ಮಾನ ಮಾಡಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?

Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ

Covid 19 Treatment in Bengaluru: ಬೆಂಗಳೂರಿನಲ್ಲಿ ತುರ್ತು ಕೊರೊನಾ ಆರೋಗ್ಯ ಸೇವೆಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ

(Will take final decition on curfew continuation at tomorrow’s cabinet meeting says Health Minister Dr K Sudhakar)K