AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ನಿಂದ ಗುಣಮುಖರಾದವರಿಂದ ಗಿಡ ನೆಟ್ಟು ಪರಿಸರ ಸಂರಕ್ಷಣೆ ಶಪಥ; ವಿಶ್ವ ಪರಿಸರ ದಿನದಂದು ಮಾದರಿ ಕಾರ್ಯ

ಕೊವಿಡ್ ಮಹಾಮಾರಿಯಿಂದ ಇದೀಗ ಪ್ರಾಣವಾಯುವಿನ ಮಹತ್ವದ ಅರಿವಾಗಿದ್ದು, ನಾವು ಇನ್ನಷ್ಟು ಗಿಡಗಳನ್ನು ನೆಟ್ಟು ಸೂಕ್ತ ರೀತಿಯಲ್ಲಿ ಪರಿಸರ ಸಂರಕ್ಷಿಸಬೇಕು. ಎಲ್ಲರ ಸಹಕಾರದಿಂದ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ಸೋಂಕಿನಿಂದ ಗುಣಮುಖರಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಕೊವಿಡ್​ನಿಂದ ಗುಣಮುಖರಾದವರಿಂದ ಗಿಡ ನೆಟ್ಟು ಪರಿಸರ ಸಂರಕ್ಷಣೆ ಶಪಥ; ವಿಶ್ವ ಪರಿಸರ ದಿನದಂದು ಮಾದರಿ ಕಾರ್ಯ
ಕೊವಿಡ್​ನಿಂದ ಗುಣಮುಖರಾದವರಿಂದ ಗಿಡ ನೆಟ್ಟು ಪರಿಸರ ಸಂರಕ್ಷಣೆ ಶಪಥ
TV9 Web
| Updated By: preethi shettigar|

Updated on: Jun 05, 2021 | 4:22 PM

Share

ನೆಲಮಂಗಲ: ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹಸಿರನ್ನು ಉಳಿಸುವ ಉದ್ದೇಶದಿಂದ ಈ ಆಚರಣೆಯನ್ನು ಚಾಲ್ತಿಗೆ ತರಲಾಗಿದೆ. ಸಾಲು ಮರದ ತಿಮ್ಮಕ್ಕನಂತಹ ಅದೆಷ್ಟೋ ಪರಿಸರ ಪ್ರೇಮಿಗಳು ಇದಕ್ಕೆ ಸ್ಪೂರ್ತಿ. ಆದರೆ ಕರ್ನಾಟಕದಲ್ಲಿ ಕೊವಿಡ್ ಸೋಂಕು ಕಡಿಮೆಯಾಗದ ಕಾರಣ ಜೂನ್ 5ರಂದು ರಾಜ್ಯ ಸರ್ಕಾರದ ವತಿಯಿಂದ ಆಚರಿಸಬೇಕಿದ್ದ, ವಿಶ್ವ ಪರಿಸರ ದಿನಾಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆದರೆ ಈ ಬಾರಿಯ ವನಮಹೋತ್ಸವ ದಿನವನ್ನು ಸಾಧ್ಯವಾದಷ್ಟು ಮಟ್ಟಿಗೆ ಸೂರ್ತಿದಾಯಕವನ್ನಾಗಿ ಮಾಡುವ ನಿಟ್ಟಿನಲ್ಲಿ ಸಪ್ತಗಿರಿ ಆಸ್ಪತ್ರೆ ವೈದ್ಯರುಗಳು ಕೊವಿಡ್​ನಿಂದ ಗುಣಮುಖರಾದ ಪೇಷೆಂಟ್​ಗಳಿಂದ ಗಿಡ ನೆಡುವ ಮೂಲಕ ಹಾಗೂ ಗಿಡಗಳನ್ನು ನೀಡಿ ಪರಿಸರ ಉಳಿಸಿ ಪರಿಸರ ಬೆಳೆಸಿ ಎಂಬ ವಿನೂತನ ಜಾಗೃತಿಯನ್ನು ಮಾಡಿದ್ದಾರೆ.

ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಉತ್ತಮ ಆಮ್ಲಜನಕ ಸಿಗಲಿ ಎಂಬ ಸದುದ್ದೇಶದಿಂದ ಸಪ್ತಗಿರಿ ಆಸ್ಪತ್ರೆಯ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಎಂದರೆ ಕೊವಿಡ್ ಸೋಂಕಿನಿಂದ ಬಳಲಿ ಆಮ್ಲಜನಕದ ನೆರವಿನಿಂದ ಗುಣಮುಖರಾದವರು ಗಿಡ ನೆಟ್ಟು ಧನ್ಯತಾಭಾವ ಮೆರೆದರು. ಜತೆಗ ಪರಿಸರ ಸಂಕ್ಷರಣೆಗೆ ಶಪಥ ಮಾಡಿದರು.

ಕೊವಿಡ್ ಮಹಾಮಾರಿಯಿಂದ ಇದೀಗ ಪ್ರಾಣವಾಯುವಿನ ಮಹತ್ವದ ಅರಿವಾಗಿದ್ದು, ನಾವು ಇನ್ನಷ್ಟು ಗಿಡಗಳನ್ನು ನೆಟ್ಟು ಸೂಕ್ತ ರೀತಿಯಲ್ಲಿ ಪರಿಸರ ಸಂರಕ್ಷಿಸಬೇಕು. ಎಲ್ಲರ ಸಹಕಾರದಿಂದ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ಸೋಂಕಿನಿಂದ ಗುಣಮುಖರಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಸಪ್ತಗಿರಿ ಆಸ್ಪತ್ರೆಯ ಪ್ರಾಂಶುಪಾಲರಾದ ತಜ್ಞ ವೈದ್ಯೆ ಡಾ .ಜಯಂತಿ ಈ ಸಂದರ್ಭದಲ್ಲಿ ಮಾತನಾಡಿದ್ದು, ಬೆಂಗಳೂರಿನ ಜನ ಸಂಖ್ಯೆಗೆ ಪ್ರತಿಯೊಬ್ಬ ಮನುಷ್ಯನಿಗೆ ಕನಿಷ್ಠ ಏಳು ಮರಗಳು ಇರಬೇಕಾಗಿತ್ತು. ಆದರೆ ಕೇವಲ ಒಬ್ಬ ವ್ಯಕ್ತಿಗೆ ಒಂದು ಮರ ಮಾತ್ರ ಇದೆ. ನೀಲಗಿರಿ, ಅಕೇಶಿಯಾದಂತಹ ಮರಗಳು ಪರಿಸರಕ್ಕೆ ಮಾರಕವಾಗಿದ್ದು, ವಾತಾವರಣವನ್ನು ತಂಪಾಗಿಸುವ, ಹೊಂಗೆ, ಹಣ್ಣು ಬಿಡುವ ವಿವಿಧ ಜಾತಿಯ ಮರಗಳನ್ನು ಬೆಳೆಸಬೇಕು. ಇದರಿಂದ ಪ್ರಾಣಿ ಪಕ್ಷಿಗಳ ಸಂತತಿಯನ್ನು ಸಲಹಲು ಅನುಕೂಲವಾಗಲಿದೆ ಎಂದು ಹೇಳಿದರು.

ಕೊವಿಡ್ ಸಂಕಷ್ಟ ಎದುರಾದ ನಂತರ ನಮಗೆ ಔಷಧೀಯ ಸಸ್ಯಗಳ ಮಹತ್ವದ ಅರಿವಾಗುತ್ತಿದೆ. ವೈವಿದ್ಯಮಯ ಸಸ್ಯ ಸಂಕುಲ ಜೀವ ವೈವಿದ್ಯತೆಯ ರಕ್ಷಣೆಗೆ ಸಹಕಾರಿಯಾಗಲಿದೆ. ಪ್ರತಿಯೊಂದು ಆಸ್ಪತ್ರೆ, ಪಂಚಾಯತಿ ಕಚೇರಿಗಳು, ಶಾಲೆಗಳಲ್ಲಿ ಕಿರು ಅರಣ್ಯ ಮಾದರಿಯಲ್ಲಿ ಗಿಡ, ಮರಗಳನ್ನು ನೆಡುವ ಪರಿಸರ ಮುಖಿ ಕೆಲಸ ಆಗಬೇಕು ಎಂದು ತಜ್ಞ ವೈದ್ಯ ಗಿರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ:

World Environment Day 2021: ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವ ಆಚರಣೆಗಳು ಯಾವುವು?

World Environment Day: ಜೂನ್ 5ರಂದು ನಡೆಯಬೇಕಿದ್ದ ವಿಶ್ವ ಪರಿಸರ ದಿನ ಆಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಸರ್ಕಾರ