AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರಾವೆ ಇಲ್ಲದ ರಾಚೇಶ್ವರರ ಹೆಸರಲ್ಲಿ ಮೋಸ ಆರೋಪ, ಕೊಡೆಕಲ್ ವಿರಕ್ತಮಠದ ಶ್ರೀಗಳ ಪ್ರವಚನಕ್ಕೆ ಬ್ರೇಕ್

ಕೊಡಕಲ್ ರಾಚೇಶ್ವರ ಮಹಾ ಶಿವಯೋಗಿಗಳ 555ನೇ ಪುಣ್ಯ ಸ್ಮರಣೆ ಹಾಗೂ ಶ್ರಾವಣ ಮಾಸ ಹಿನ್ನೆಲೆ ವಿರಕ್ತಮಠದ ನೀಲಕಂಠ ಸ್ವಾಮೀಜಿ ಅವರು ಪ್ರವಚನ ನಡೆಸಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಹುಣಸಗಿ ತಹಶೀಲ್ದಾರ್ ಅವರು ಶ್ರೀಗಳ ಪ್ರವಚನಕ್ಕೆ ತಡೆ ನೀಡಿದ್ದಾರೆ.

ಪುರಾವೆ ಇಲ್ಲದ ರಾಚೇಶ್ವರರ ಹೆಸರಲ್ಲಿ ಮೋಸ ಆರೋಪ, ಕೊಡೆಕಲ್ ವಿರಕ್ತಮಠದ ಶ್ರೀಗಳ ಪ್ರವಚನಕ್ಕೆ ಬ್ರೇಕ್
ಕೊಡೆಕಲ್ ವಿರಕ್ತಮಠದ ಶ್ರೀಗಳ ಪ್ರವಚನಕ್ಕೆ ತಡೆ ನೀಡಿದ ಹುಣಸಗಿ ತಹಶೀಲ್ದಾರ್
Follow us
ಅಮೀನ್​ ಸಾಬ್​
| Updated By: Rakesh Nayak Manchi

Updated on: Aug 17, 2023 | 7:07 PM

ಯಾದಗಿರಿ, ಆಗಸ್ಟ್ 17: ಕೊಡಕಲ್ ರಾಚೇಶ್ವರ ಮಹಾ ಶಿವಯೋಗಿಗಳ 555ನೇ ಪುಣ್ಯ ಸ್ಮರಣೆ ಹಾಗೂ ಶ್ರಾವಣ ಮಾಸ ಹಿನ್ನೆಲೆ ವಿರಕ್ತಮಠದ ನೀಲಕಂಠ ಸ್ವಾಮೀಜಿ ಅವರು ಪ್ರವಚನ ನಡೆಸಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ವೀರಶೈವ ಲಿಂಗಾಯತ (Veerashaiva Lingayat) ಸಂಘಟನಾ ವೇದಿಕೆಯಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಹುಣಸಗಿ ತಹಶೀಲ್ದಾರ್ ಅವರು ಶ್ರೀಗಳ ಪ್ರವಚನಕ್ಕೆ ತಡೆ ನೀಡಿದ್ದಾರೆ. ಅಲ್ಲದೆ, ಪ್ರವಚನ ಮಾಡುವ ಕಡೆಗಳಲೆಲ್ಲ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ರಾಚೇಶ್ವರ ಮಹಾ ಶಿವಯೋಗಿಗಳ ಪುಣ್ಯ ಸ್ಮರಣೆ ಮತ್ತು ಶ್ರಾವಣ ಮಾಸ ಹಿನ್ನೆಲೆ ನೀಲಕಂಠ ಸ್ವಾಮೀಜಿ ಪ್ರವಚನಕ್ಕೆ ಮುಂದಾಗಿದ್ದರು. ಗ್ರಾಮಗಳಿಗೆ ಹೋಗಿ ಪ್ರವಚನ ನಡೆಸುವುದರ ಜೊತೆಗೆ ಮದ್ಯ ಸೇವನೆ ಮಾಡುವವರ ಮನ ಪರಿವರ್ತನೆ ಮಾಡಲು ಪ್ಲಾನ್ ಹಾಕಿಕೊಂಡಿದ್ದರು. ಆದರೆ, ಇದಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.

ನೀಲಕಂಠ ಅವರು ಪುರಾವೆ ಇಲ್ಲದ ರಾಚೇಶ್ವರರ ಹೆಸರಲ್ಲಿ ಮೋಸ ಮಾಡುತ್ತಿದ್ದಾರೆ. ನೀಲಕಂಠ ಎರಡು ಮದುವೆಯಾಗಿದ್ದು ವಿರಕ್ತದ ಯಾವುದೇ ನಿಯಮ ಪಾಲನೆ ಮಾಡಿಲ್ಲ.‌ ಜನರಿಗೆ ಮೋಸ ಮಾಡುತ್ತಿದ್ದಾರೆ, ಪ್ರವಚನಕ್ಕೆ ಅವಕಾಶ ಕೊಡಬಾರದು ಎಂದು ಹುಣಸಗಿ ತಹಶೀಲ್ದಾರ್ ಅವರಿಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ದೂರು ನೀಡಿತ್ತು.

ಇದನ್ನೂ ಓದಿ: ಸ್ಮಶಾಣದಲ್ಲಿ ಪಿಶಾಚಿ ಕುಣಿದಂತೆ ಆಗುತ್ತೆ -ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ಹೇಳಿದ ಕೋಡಿಮಠ ಸ್ವಾಮೀಜಿ

ದೂರು ಆಧರಿಸಿ ಪ್ರವಚನಕ್ಕೆ ಅವಕಾಶ ನೀಡದ ತಹಶೀಲ್ದಾರ್ ಅವರು, ಸಹಾಯಕ ಆಯುಕ್ತರ ಗಮನಕ್ಕೆ ತಂದ ಬಳಿಕ ಪ್ರವಚನ ನಡೆಸಲು ಯೋಜಿಸಿದ ಸ್ಥಳಗಳೆಲ್ಲಾ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಮಾರಿ ಆಗಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ಆಗಸ್ಟ್ 17 ರಿಂದ ಸೆಪ್ಟೆಂಬರ್ 17 ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಆದೇಶ ಹೊರಡಿಸಿದ್ದಾರೆ. ಹುಣಸಗಿ ತಾಲೂಕಿನ ಮಾರನಾಳ್ ಗ್ರಾಮದಲ್ಲಿ ಅಗಸ್ಟ್ 17 ರಿಂದ 21 ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದರೆ, ಬೂದಿಹಾಳ್ ಗ್ರಾಮದಲ್ಲಿ ಆಗಸ್ಟ್ 22 ರಿಂದ 26 ವರೆಗೆ, ಹಗರಟಗಿಯಲ್ಲಿ 27 ರಿಂದ 31 ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಸೆಪ್ಟೆಂಬರ್ 1 ರಿಂದ 5 ವರೆಗೆ ರಾಜನಕೊಳೂರ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, 6 ರಿಂದ 10 ರ ವರೆಗೆ ಯಣ್ಣಿ ವಡಗೇರ ಹಾಗೂ ಕೊಡೆಕಲ್ ಗ್ರಾಮದಲ್ಲಿ 11 ರಿಂದ 17 ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಇದೇ ವಿಚಾರವಾಗಿ ಸುರಪುರದ ಮಾಜಿ ಶಾಸಕ ರಾಜುಗೌಡ ಬೆಂಬಲಿಗರು ಹಾಗೂ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಬೆಂಬಲಿಗರು ಎಂಟ್ರಿ ಕೊಡುವ ಸಾಧ್ಯತೆ ಇದೆ. ನೀಲಕಂಠ ಸ್ವಾಮಿ ಪರ ರಾಜುಗೌಡ ಬೆಂಬಲಿಗರು, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪರ ರಾಜಾ ವೆಂಕಟಪ್ಪ ನಾಯಕ ಬೆಂಬಲಿಗರು ಬೆಂಬಲ ಕೊಡುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು
Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ
ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!