AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ ಮಾರ್ಕೆಟ್​ನಿಂದ ಕರೆದೊಯ್ದು, ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ

ವೀರೇಶ್​ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೃತ ಯುವಕ ಕಲಬುರಗಿಯ ಸೂಪರ್ ಮಾರ್ಕೆಟ್​ನಲ್ಲಿ ಕೆಲಸ ಮಾಡುತ್ತಿದ್ದ.

ಸೂಪರ್ ಮಾರ್ಕೆಟ್​ನಿಂದ ಕರೆದೊಯ್ದು, ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ
ವೀರೇಶ್​ (ಒಳಚಿತ್ರ); ಯುವಕ ಕೊಲೆಯಾದ ಸ್ಥಳ
Follow us
KUSHAL V
|

Updated on: Feb 11, 2021 | 10:11 PM

ಕಲಬುರಗಿ: ಜಿಲ್ಲೆಯ ಸಿಂದಗಿ ಹೊರವಲಯದಲ್ಲಿ ಯುವಕನನ್ನ ಭೀಕರವಾಗಿ ಕೊಲೆಗೈದಿರುವ ಘಟನೆ ವರದಿಯಾಗಿದೆ. ಪಟ್ಟಣದ ದುಬೈ ಕಾಲೋನಿ ನಿವಾಸಿ ವೀರೇಶ್ ಭೀಮಳ್ಳಿ(28) ಕೊಲೆಯಾದ ಯುವಕ. ವೀರೇಶ್​ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೃತ ಯುವಕ ಕಲಬುರಗಿಯ ಸೂಪರ್ ಮಾರ್ಕೆಟ್​ನಲ್ಲಿ ಕೆಲಸ ಮಾಡುತ್ತಿದ್ದ.

ನಿನ್ನೆ ಸೂಪರ್ ಮಾರ್ಕೆಟ್​ನಿಂದ ವೀರೇಶ್​ನನ್ನು ಕರೆದೊಯ್ದಿದ್ದ ಮೂವರು ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ಶವ ಎಸೆದು ಪರಾರಿಯಾಗಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ, ಚೌಕ್ ಠಾಣೆ ಪೊಲೀಸರಿಗೆ ಪೋಷಕರು ಮಾಹಿತಿ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ, ಕಲಬುರಗಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂಗಡಿಯಲ್ಲಿ ಸಾಲ ನೀಡದಿದ್ದಕ್ಕೆ ವೃದ್ಧನನ್ನು ಕೊಂದಿದ್ದವರು ಅರೆಸ್ಟ್ ಇತ್ತ, ಅಂಗಡಿಯಲ್ಲಿ ಸಾಲ ನೀಡದಿದ್ದಕ್ಕೆ ವೃದ್ಧನನ್ನು ಕೊಂದಿದ್ದವರವನ್ನು ಕೊನೆಗೂ ಅಂದರ್​ ಆಗಿರುವ ಪ್ರಕರಣ ದಾವಣಗೆರೆ ಜಿಲ್ಲೆ ನ್ಯಾಮತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಟಿ.ಮಂಜಾ ನಾಯ್ಕ್(31), ಎನ್.ಮಂಜಾ ನಾಯ್ಕ್(27), ಸಿದ್ದೇಶ್ ನಾಯ್ಕ್‌(21) ಮತ್ತು ನಾಗರಾಜ ನಾಯ್ಕ್‌(35) ಬಂಧಿತ ಆರೋಪಿಗಗಳು.

ಏನಿದು ಪ್ರಕರಣ? ಜಿಲ್ಲೆಯ ನ್ಯಾಮತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಫೆ.4ರಂದು ಆರೋಪಿಗಳು ಸಿಗರೇಟ್‌, ದಿನಸಿ ಸಾಲ ಕೊಡದಿದ್ದಕ್ಕೆ ವೃದ್ಧ ದಂಪತಿ ಮೇಲೆ ಹಲ್ಲೆಗೈದಿದ್ದರು. ರಾಡ್‌ನಿಂದ ವಿರೂಪಾಕ್ಷಪ್ಪ ಹಾಗೂ ಅವರ ಪತ್ನಿ ಪಾರ್ವತಮ್ಮ ಮೇಲೆ ಹಲ್ಲೆಮಾಡಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೀಗ, ಚಿಕಿತ್ಸೆ ಫಲಿಸದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವಿರೂಪಾಕ್ಷಪ್ಪ ಸಾವನ್ನಪ್ಪಿದ್ದಾರೆ. ಇತ್ತ, ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ವೃದ್ಧೆ ಪಾರ್ವತಮ್ಮಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Audi R8 ಕಾರಿನಲ್ಲಿ ಬಂದು.. ಆಟೋಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕ ಪತ್ತೆ