AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದ ಲಾಕ್​ಡೌನ್ ಮುಕ್ತಾಯ, ನಾಳೆಯಿಂದ ಮತ್ತೆ ಲಾಕ್ ಆಗುತ್ತಾ ರಾಜಧಾನಿ?

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನ ನಾಳೆ ಬೆಳಗ್ಗೆ ಕಣ್ಣು ಬಿಡೋ ಹೊತ್ತಿಗೆ ಒಂದು ವಾರದ ಲಾಕ್​ಡೌನ್ ಮುಗಿಯುತ್ತದೆ. ಆದ್ರೆ, ನಿಜವಾಗಿಯೂ ನಾಳೆಗೆ ಲಾಕ್​ಡೌನ್ ಮುಗಿಯುತ್ತಾ? ಮುಂದುವರಿಯುತ್ತಾ ಅನ್ನೋ ಗೊಂದಲ ಮಾತ್ರ ಇನ್ನೂ ಹಾಗೇ ಉಳಿದಿದೆ. ಸರ್ಕಾರ ಲಾಕ್​ಡೌನ್ ಬೇಡ ಅನ್ನೋ ಬಲವಾದ ನಿಲುವು ಹೊಂದಿದೆ. ಹೀಗಾಗಿ ಇಂದು ಸಿಎಂ ಬಿಎಸ್​ವೈ ಏನು ನಿರ್ಧಾರ ತೆಗೆದುಕೊಳ್ತಾರೆ ಅನ್ನೋದ್ರ ಮೇಲೆ ಜನರ ಚಿತ್ತ ನೆಟ್ಟಿದೆ. ನೋ ಲಾಕ್​ಡೌನ್.. ನೋ ಲಾಕ್​ಡೌನ್.. ನೋ ಲಾಕ್​ಡೌನ್ ಅಂತಾ ಭಯಂಕರ ವಿಶ್ವಾಸದಲ್ಲಿ ಸಚಿವ ಆರ್.ಅಶೋಕ್ […]

ವಾರದ ಲಾಕ್​ಡೌನ್ ಮುಕ್ತಾಯ, ನಾಳೆಯಿಂದ ಮತ್ತೆ ಲಾಕ್ ಆಗುತ್ತಾ ರಾಜಧಾನಿ?
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Jul 21, 2020 | 9:17 AM

Share

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನ ನಾಳೆ ಬೆಳಗ್ಗೆ ಕಣ್ಣು ಬಿಡೋ ಹೊತ್ತಿಗೆ ಒಂದು ವಾರದ ಲಾಕ್​ಡೌನ್ ಮುಗಿಯುತ್ತದೆ. ಆದ್ರೆ, ನಿಜವಾಗಿಯೂ ನಾಳೆಗೆ ಲಾಕ್​ಡೌನ್ ಮುಗಿಯುತ್ತಾ? ಮುಂದುವರಿಯುತ್ತಾ ಅನ್ನೋ ಗೊಂದಲ ಮಾತ್ರ ಇನ್ನೂ ಹಾಗೇ ಉಳಿದಿದೆ. ಸರ್ಕಾರ ಲಾಕ್​ಡೌನ್ ಬೇಡ ಅನ್ನೋ ಬಲವಾದ ನಿಲುವು ಹೊಂದಿದೆ. ಹೀಗಾಗಿ ಇಂದು ಸಿಎಂ ಬಿಎಸ್​ವೈ ಏನು ನಿರ್ಧಾರ ತೆಗೆದುಕೊಳ್ತಾರೆ ಅನ್ನೋದ್ರ ಮೇಲೆ ಜನರ ಚಿತ್ತ ನೆಟ್ಟಿದೆ.

ನೋ ಲಾಕ್​ಡೌನ್.. ನೋ ಲಾಕ್​ಡೌನ್.. ನೋ ಲಾಕ್​ಡೌನ್ ಅಂತಾ ಭಯಂಕರ ವಿಶ್ವಾಸದಲ್ಲಿ ಸಚಿವ ಆರ್.ಅಶೋಕ್ ಹೇಳಿದ್ರು. ಇದಾದ ಕೇವಲ ಹದಿನೈದೇ ದಿನಕ್ಕೆ ಬೆಂಗಳೂರನ್ನ ಲಾಕ್​ ಮಾಡ್ತಿದ್ದೀವಿ ಅಂತಾ ಸಿಎಂ ಯಡಿಯೂರಪ್ಪ ಘೋಷಣೆ ಮಾಡೇಬಿಟ್ರು. ಈ ರೀತಿಯ ಯುಟರ್ನ್​ಗಳಿಂದಲೇ ಬೆಂಗಳೂರಲ್ಲಿ ಲಾಕ್​ಡೌನ್ ಎಂಡ್ ಆಗುತ್ತಾ.. ಮುಂದುವರಿಯುತ್ತಾ ಅನ್ನೋ ಪ್ರಶ್ನೆ ಜನಸಾಮಾನ್ಯರಿಗೆ ಬಿಟ್ಟೂ ಬಿಡದೆ ಕಾಡ್ತಿದೆ.

ಹಿಂದಿನ ಆದೇಶದಂತೆ ಸರ್ಕಾರ ನಡೆದುಕೊಂಡ್ರೆ ನಾಳೆ ಇಷ್ಟೊತ್ತಿಗಾಗಲೇ ಬೆಂಗಳೂರು ಫ್ರೀಡೌನ್ ಆಗಿರುತ್ತೆ. ಆದ್ರೆ, ಸರ್ಕಾರ ಏನಾದ್ರೂ ಲಾಕ್​ಡೌನ್ ಕಂಟಿನ್ಯೂ ಮಾಡಿದ್ರೆ. ಬೆಂಗಳೂರಿನಲ್ಲಿ ಈಗಿರೋ ದಿನಗಳು ಮತ್ತಷ್ಟು ದಿನ ಮುಂದುವರಿಯುತ್ತೆ. ಲಾಕ್​ಡೌನ್ ಮುಗಿಯುತ್ತಾ, ಮುಂದುವರಿಯುತ್ತಾ ಅನ್ನೋ ಪ್ರಶ್ನೆಗೆ ನಿನ್ನೆಯ ಟಾಸ್ಕ್​ಫೋರ್ಸ್ ಮೀಟಿಂಗ್​ನಲ್ಲೇ ಉತ್ತರ ಸಿಗಬೇಕಿತ್ತು. ಆದ್ರೆ, ಅದು ಅರ್ಧಕ್ಕೆ ನಿಂತ ಪರಿಣಾಮ, ಜನರಲ್ಲಿ ಉಂಟಾಗಿರೋ ಗೊಂದಲ ಇನ್ನೂ ಮುಂದುವರಿದಿದೆ. ಬೆಂಗಳೂರು ಲಾಕ್​ಡೌನ್ ಕಂಟಿನ್ಯೂ ಕುರಿತು ಇವತ್ತು ಸಿಎಂ ಬಿಎಸ್​ವೈ ಅಧಿಕೃತವಾಗಿ ಘೋಷಿಸಲಿದ್ದಾರೆ. ಹೀಗಾಗಿ ಬೆಂಗಳೂರಿನ ಜನರ ಚಿತ್ತ ಯಡಿಯೂರಪ್ಪರತ್ತ ನೆಟ್ಟಿದೆ.

ಬೆಂಗಳೂರಿನ ‘ಲಾಕ್’ ಓಪನ್ ಆಗುತ್ತಾ..? ಇಲ್ವಾ..? ರಾಜಧಾನಿಯಲ್ಲಿ ಕೊರೊನಾ ನಿಯಂತ್ರಣ ತಪ್ಪಿ, ಸಿಲಿಕಾನ್ ಸಿಟಿ ಕೊವಿಡ್ ಕ್ಯಾಪಿಟಲ್ ಆಗಿ ಬದಲಾಗುವ ಹಂತ ತಲುಪಿದಾಗ, ಕೊರೊನಾ ಚೈನ್ ಬ್ರೇಕ್ ಮಾಡೋ ಉದ್ದೇಶದಿಂದ ಸರ್ಕಾರ ಒಂದು ವಾರದ ಲಾಕ್​ಡೌನ್ ಘೋಷಿಸಿತ್ತು. ಒಂದು ವಾರ ಲಾಕ್​ಡೌನ್ ಆದ್ರೂ ಬೆಂಗಳೂರಿನಲ್ಲಿ ಕೊರೊನಾ ಇನ್ನೂ ತನ್ನ ಅಟ್ಟಹಾಸ ನಿಲ್ಲಿಸಿಲ್ಲ. ಜೊತೆಗೆ ಸರ್ಕಾರ ಲಾಕ್​ಡೌನ್ ವೇಳೆ ಅನೇಕ ವಿನಾಯ್ತಿಗಳನ್ನ ನೀಡಿತ್ತು. ಇದ್ರಿಂದ ಬೆಂಗಳೂರಿನಲ್ಲಿ ಲಾಕ್​ಡೌನ್ ಇದ್ಯಾ..? ಇಲ್ವಾ..? ಅನ್ನೋ ಅನುಮಾನ ಬರುವ ಮಟ್ಟಿಗೆ ಜನ ಸಂಚಾರ ಇತ್ತು. ಇವೆರಡು ಕಾರಣಗಳನ್ನ ಸರ್ಕಾರ ಪರಿಗಣಿಸಿದ್ರೆ ಲಾಕ್​ಡೌನ್ ಕಂಟಿನ್ಯೂ ಮಾಡೋ ಯೋಚನೆ ಮಾಡಿದಂತಿಲ್ಲ.

ಬೆಂಗಳೂರು ಲಾಕ್​ಡೌನ್ ವೇಳೆ ಸರ್ಕಾರ ಕೊವಿಡ್ ಕೇರ್ ಸೆಂಟರ್​ಗಳು ಸೇರಿ ಆರೋಗ್ಯ ವಲಯದ ಮೂಲ ಸೌಕರ್ಯ ಹೆಚ್ಚಿಸಲು ಆದ್ಯತೆ ನೀಡಿತ್ತು. ಇದರಲ್ಲಿ ಅಲ್ಪ ಯಶಸ್ಸು ಕಂಡು ಬಂದಂತೆ ಕಾಣ್ತಿದೆ. ಇದನ್ನ ಪರಿಗಣಿಸಿದ್ರೆ ಲಾಕ್​ಡೌನ್ ಕಂಟಿನ್ಯೂ ಮಾಡೋ ಸಾಧ್ಯತೆ ಇದೆ. ಬೆಂಗಳೂರಿನ ಅಷ್ಟ ದಿಕ್ಪಾಲಕರಾಗಲಿ, ಆರೋಗ್ಯ ಸಚಿವರಾಗಲಿ ಅಥವಾ ಬೇಱವ ಸಚಿವರನ್ನೇ ಕೇಳಿದ್ರೂ.. ಲಾಕ್​ಡೌನ್ ಕಂಟಿನ್ಯೂ ಮಾಡೋದು ಸಿಎಂ ಯಡಿಯೂರಪ್ಪಗೆ ಬಿಟ್ಟ ವಿಚಾರ ಅಂತಾ ಹೇಳ್ತಿದ್ದಾರೆ. ಹೀಗಾಗಿ ಯಡಿಯೂರಪ್ಪ ಇವತ್ತು ಕೈಗೊಳ್ಳೋ ನಿರ್ಧಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಲಾಕ್​ಡೌನ್ ಮಾಡಿದ್ರೂ, ಬೆಂಗಳೂರಿನ ಪರಿಸ್ಥಿತಿ ಕಂಟ್ರೋಲ್​ಗೆ ಬರುವಂತೆ ಕಾಣಿಸ್ತಿಲ್ಲ. ಇದೇ ಕಾರಣಕ್ಕೆ ಸಿಎಂ ಯಡಿಯೂರಪ್ಪ ಬುಧವಾರ, ಗುರುವಾರ ಅಷ್ಟ ದಿಕ್ಪಾಲಕರ ಜೊತೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ವಲಯವಾರು ಸಚಿವರು, ಸಂಸದರು, ಶಾಸಕರ, ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ನಿನ್ನೆ ಅಪೂರ್ಣವಾಗಿದ್ದ ಟಾಸ್ಕ್​ಫೋರ್ಸ್ ಸಭೆ ಇಂದು ಕಂಟಿನ್ಯೂ ಆಗಲಿದೆ. ಈ ಟಾಸ್ಕ್​ಫೋರ್ಸ್ ಸಭೆಯಲ್ಲಿ ಬೆಂಗಳೂರು ಲಾಕ್​ಡೌನ್​ ಕುರಿತು ಅಂತಿಮ ತೀರ್ಮಾನಕ್ಕೆ ಬರೋ ಸಾಧ್ಯತೆ. ಬಹುತೇಕ ಸಚಿವರು ಲಾಕ್​ಡೌನ್ ಮಾಡದೆ ಕೊರೊನಾ ಕಂಟ್ರೋಲ್​ಗೆ ತರಬೇಕು ಅನ್ನೋ ನಿಲುವು ಹೊಂದಿದ್ದಾರೆ ಅಂತಾ ಗೊತ್ತಾಗಿದೆ. ಆದ್ರೆ, ಸಿಎಂ ಯಡಿಯೂರಪ್ಪರ ಮನಸಿನಲ್ಲಿ ಏನಿದೆ ಅನ್ನೋ ಮಾತ್ರ ಇನ್ನೂ ನಿಗೂಢವಾಗಿದೆ. ಇದೇ ರೀತಿ ಬೆಂಗಳೂರಿನಲ್ಲಿ ಲಾಕ್​ಡೌನ್ ಮುಗಿಯುತ್ತಾ..? ಮುಂದುವರಿಯುತ್ತೋ..? ಅನ್ನೋ ಪ್ರಶ್ನೆಗೆ ಉತ್ತರವೂ ಇನ್ನೂ ನಿಗೂಢವಾಗಿಯೇ ಇದೆ.

Published On - 7:34 am, Tue, 21 July 20

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್