AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಮದುವೆ ಆಗಿಹೋಗಿದೆ ಅಂತ ಎಲ್ಲರೂ ಹೇಳ್ತಾ ಇದಾರೆ ಎಂದ ಅರವಿಂದ್​ ಕೆಪಿ; ದಿವ್ಯಾ ರಿಯಾಕ್ಷನ್​ ಹೇಗಿತ್ತು?

ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರದಲ್ಲಿ ಅದರ ಜೊತೆಜೊತೆಗೆ ವದಂತಿಗಳು ಹಾಗೂ ಸುಳ್ಳುಸುದ್ದಿಗಳೂ ಅಂಟಿಕೊಳ್ಳುತ್ತವೆ. ಮದುವೆ ವಿಚಾರ, ಪ್ರೀತಿ ವಿಚಾರ, ಕೌಟುಂಬಿಕ ವಿಚಾರದಲ್ಲಿ ಒಂದಷ್ಟು ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ನ

ನನ್ನ ಮದುವೆ ಆಗಿಹೋಗಿದೆ ಅಂತ ಎಲ್ಲರೂ ಹೇಳ್ತಾ ಇದಾರೆ ಎಂದ ಅರವಿಂದ್​ ಕೆಪಿ; ದಿವ್ಯಾ ರಿಯಾಕ್ಷನ್​ ಹೇಗಿತ್ತು?
ಅರವಿಂದ್​ ಕೆಪಿ-ದಿವ್ಯಾ
TV9 Web
| Edited By: |

Updated on: Oct 10, 2021 | 2:03 PM

Share

ಅರವಿಂದ್​ ಕೆ.ಪಿ. ಹಾಗೂ ದಿವ್ಯಾ ಉರುಡುಗ ಬಿಗ್​ ಬಾಸ್ ಕನ್ನಡ ಸೀಸನ್​ 8ರಲ್ಲಿ ತುಂಬಾನೇ ಕ್ಲೋಸ್​ ಆದರು. ಅರವಿಂದ್​ ಅವರ ಕಾರ್ಯಕ್ಷೇತ್ರವೇ ಬೇರೆ, ದಿವ್ಯಾ ಅವರ ಕಾರ್ಯಕ್ಷೇತ್ರವೇ ಬೇರೆ. ಆದರೂ ಇಬ್ಬರೂ ಒಂದು ಕಡೆ ಸೇರೋಕೆ ವೇದಿಕೆ ಮಾಡಿಕೊಟ್ಟಿದ್ದು ಬಿಗ್​ ಬಾಸ್​. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದು ನಂತರ ಪ್ರೀತಿ ಹುಟ್ಟಿತ್ತು. ಇದನ್ನು ಇಬ್ಬರೂ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಮದುವೆ ವಿವಾರದಲ್ಲಿ ಮಾತ್ರ ಇವರು ಮೌನ ತಾಳಿದ್ದಾರೆ. ಎಲ್ಲಿಯೂ ಅವರು ಗುಟ್ಟುಬಿಟ್ಟುಕೊಟ್ಟಿಲ್ಲ. ಆದರೆ, ಇವರ ಮದುವೆ ಆಗಿಯೇ ಹೋಗಿದೆ ಎನ್ನುವ ಗಾಸಿಪ್​ ಹರಿದಾಡುತ್ತಿದೆಯಂತೆ. ಈ ಬಗ್ಗೆ ಅರವಿಂದ್​ ಹೇಳಿಕೊಂಡಿದ್ದಾರೆ.

ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರದಲ್ಲಿ ಅದರ ಜೊತೆಜೊತೆಗೆ ವದಂತಿಗಳು ಹಾಗೂ ಸುಳ್ಳುಸುದ್ದಿಗಳೂ ಅಂಟಿಕೊಳ್ಳುತ್ತವೆ. ಮದುವೆ ವಿಚಾರ, ಪ್ರೀತಿ ವಿಚಾರ, ಕೌಟುಂಬಿಕ ವಿಚಾರದಲ್ಲಿ ಒಂದಷ್ಟು ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ನಟ-ನಟಿಯರಿಗೆ ಅದನ್ನು ನಿಭಾಯಿಸಿಕೊಂಡು ಹೋಗೋದು ಅನಿವಾರ್ಯ. ಈಗ ಅರವಿಂದ್​ ಅವರಿಗೂ ಅದೇ ರೀತಿ ಆಗಿದೆ.

ಅರವಿಂದ್​ ಅವರು ಕಲರ್ಸ್​ ಕನ್ನಡದ ಕಲರ್​​ಫುಲ್​ ವೇದಿಕೆ ಅನುಬಂಧಕ್ಕೆ ಆಗಮಿಸಿದ್ದಾರೆ. ದಿವ್ಯಾ ಉರುಡುಗ ಕೂಡ ಇವರಿಗೆ ಜೊತೆಯಾಗಿದ್ದಾರೆ. ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದ ಶೂಟಿಂಗ್​​ ಈಗಾಲೇ ಪೂರ್ಣಗೊಂಡಿದ್ದು, ಮುಂದಿನ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ. ಈ ಪ್ರೋಮೋಗಳನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಳ್ಳುತ್ತಿದೆ.

ಅರವಿಂದ್ ಕೆ.ಪಿ. ಹಾಗೂ ದಿವ್ಯಾ ಉರುಡುಗ ಅವರು ಅನುಬಂಧ ಅವಾರ್ಡ್ಸ್​​ನಲ್ಲಿ ಆಯೋಜಿಸಿದ್ದ ಕೆಂಪು ಹಾಸಿನ ಮೇಲೆ ನಡೆದಿದ್ದಾರೆ. ಈ ವೇಳೆ ಅವರಿಗೆ ಪ್ರಶ್ನೆ ಒಂದು ಎದುರಾಯಿತು. ಅರವಿಂದ್​ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ ಹೌದಾ ಎಂದು ನಿರೂಪಕಿ ಕೇಳಿದರು. ಹಾಗೇ ಹೇಳೋದಾದ್ರೆ ನನ್ನ ಮದುವೆ ಕೂಡ ಆಗಿದೆ ಎಂದು ಎಲ್ಲರೂ ಹೇಳ್ತಾ ಇದಾರೆ ಎಂದರು ಅರವಿಂದ್​.  ಈ ಮೂಲಕ ಈ ಸುದ್ದಿ ಫೇಕ್​ ಎಂದರು. ಅರವಿಂದ್ ಹೀಗೆ ಹೇಳುತ್ತಿದ್ದಂತೆ ದಿವ್ಯಾ ನಕ್ಕರು.

ಇದನ್ನೂ ಓದಿ: ‘ಮದುವೆ ಯಾವಾಗ’ ಎನ್ನುವ ಪ್ರಶ್ನೆಗೆ ದಿವ್ಯಾ ಉರುಡುಗ ಪಕ್ಕದಲ್ಲೇ ನಿಂತು ಉತ್ತರಿಸಿದ ಅರವಿಂದ್​ ಕೆಪಿ

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್