AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾರ್​ಗಳತ್ತ ತಲೆ ಹಾಕುತ್ತಿಲ್ಲ ಎಣ್ಣೆಪ್ರಿಯರು, ಈ ಜಿಲ್ಲೆಯಲ್ಲಿ ಮದ್ಯ ಮಾರಾಟ ಭಾರಿ ಕುಸಿತ!

ಮಂಡ್ಯ: ಲಾಕ್​ಡೌನ್​​ನಲ್ಲಿ ಮದ್ಯಪ್ರಿಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಣ್ಣೆ ಸಿಗದೆ ಎರಡೆರಡು ತಿಂಗಳು ಪರದಾಡಿದ್ರು. ಅದೆಷ್ಟೋ ಕುಡುಕರು ಮದ್ಯಕ್ಕಾಗಿ ಜೀವತೆತ್ತರು. ಆದ್ರೀಗ ಸಕ್ಕರೆನಾಡಲ್ಲಿ ಜನರು ಬಾರ್​ಗಳತ್ತ ಸುಳಿತಾನೇ ಇಲ್ಲ. ಮೇ 4.. ಲಾಕ್​ಡೌನ್ ತೆರವುಗೊಳಿಸಿದ ಬಳಿಕ ಮದ್ಯಪ್ರಿಯರು ನಿಟ್ಟುಸಿರು ಬಿಟ್ಟ ದಿನ. ಎಣ್ಣೆ ಅಂಗಡಿಗಳ ಮುಂದೆ ಉದ್ದುದ್ದ ಕ್ಯೂ ನಿಂತಿದ್ದ ದಿನ.. ಮದ್ಯಕ್ಕಾಗಿ ಜನ ಮುಗಿಬಿದ್ದು ದಾಂದಲೆ ನಡೆಸಿದ ದಿನ.. ಮದ್ಯಪ್ರಿಯರ ಕುಡಿತದ ಚಟ ನೋಡಿ ದೇಶದ ಜನರೇ ಬೆಚ್ಚಿಬಿದ್ದಿದ್ದ ದಿನ.. ಆದ್ರೀಗ ಕೆಲವೆಡೆ ಈ ಸೀನ್ […]

ಬಾರ್​ಗಳತ್ತ ತಲೆ ಹಾಕುತ್ತಿಲ್ಲ ಎಣ್ಣೆಪ್ರಿಯರು, ಈ ಜಿಲ್ಲೆಯಲ್ಲಿ ಮದ್ಯ ಮಾರಾಟ ಭಾರಿ ಕುಸಿತ!
ಆಯೇಷಾ ಬಾನು
|

Updated on: Aug 04, 2020 | 6:45 AM

Share

ಮಂಡ್ಯ: ಲಾಕ್​ಡೌನ್​​ನಲ್ಲಿ ಮದ್ಯಪ್ರಿಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಣ್ಣೆ ಸಿಗದೆ ಎರಡೆರಡು ತಿಂಗಳು ಪರದಾಡಿದ್ರು. ಅದೆಷ್ಟೋ ಕುಡುಕರು ಮದ್ಯಕ್ಕಾಗಿ ಜೀವತೆತ್ತರು. ಆದ್ರೀಗ ಸಕ್ಕರೆನಾಡಲ್ಲಿ ಜನರು ಬಾರ್​ಗಳತ್ತ ಸುಳಿತಾನೇ ಇಲ್ಲ.

ಮೇ 4.. ಲಾಕ್​ಡೌನ್ ತೆರವುಗೊಳಿಸಿದ ಬಳಿಕ ಮದ್ಯಪ್ರಿಯರು ನಿಟ್ಟುಸಿರು ಬಿಟ್ಟ ದಿನ. ಎಣ್ಣೆ ಅಂಗಡಿಗಳ ಮುಂದೆ ಉದ್ದುದ್ದ ಕ್ಯೂ ನಿಂತಿದ್ದ ದಿನ.. ಮದ್ಯಕ್ಕಾಗಿ ಜನ ಮುಗಿಬಿದ್ದು ದಾಂದಲೆ ನಡೆಸಿದ ದಿನ.. ಮದ್ಯಪ್ರಿಯರ ಕುಡಿತದ ಚಟ ನೋಡಿ ದೇಶದ ಜನರೇ ಬೆಚ್ಚಿಬಿದ್ದಿದ್ದ ದಿನ.. ಆದ್ರೀಗ ಕೆಲವೆಡೆ ಈ ಸೀನ್ ಕಂಪ್ಲೀಟ್ ಉಲ್ಟಾ ಆಗಿದೆ.

ಬಾರ್​ಗಳತ್ತ ತಲೆ ಹಾಕುತ್ತಿಲ್ಲ ಎಣ್ಣೆಪ್ರಿಯರು! ಲಾಕ್​ಡೌನ್​ನಲ್ಲಿ ಮದ್ಯ ಮಾರಾಟವನ್ನ ನಿಷೇಧಿಸಲಾಗಿತ್ತು. ಎರಡು ತಿಂಗಳಿಗೂ ಹೆಚ್ಚು ಕಾಲ ಎಣ್ಣೆಪ್ರಿಯರು ಮದ್ಯ ಸಿಗದೆ ಪರದಾಡಿದ್ರು. ತೊಟ್ಟು ಎಣ್ಣೆಗಾಗಿ ಕಂಡ ಕಂಡವರ ಬಳಿ ಮನವಿ ಮಾಡ್ಕೊಂಡ್ರು. ಅದ್ರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಕದ್ದುಮುಚ್ಚಿ ಮಾರಾಟ ಮಾಡಲಾಗ್ತಿದೆ ಅನ್ನೋ ಆರೋಪಗಳು ಸಹ ಕೇಳಿ ಬಂದಿದ್ವು.

ಆಗ ಮಂಡ್ಯದ ಉಪವಿಭಾಗಾಧಿಕಾರಿ ಸೂರಜ್ & ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್​ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಆದ್ರೆ ಮೇ 4ರಂದು ಎಣ್ಣೆ ಅಂಗಡಿ ತೆಗೆದಿದ್ದೇ ತಡ, ಮಂಡ್ಯದಲ್ಲಿ ನಾ ಮುಂದು ತಾ ಮುಂದು ಅಂತಾ ಎಣ್ಣೆಗಾಗಿ ಮುಗಿಬಿದ್ದಿದ್ರು. ತದನಂತ್ರ ಬಾರ್​ಗಳತ್ತ ಮದ್ಯಪ್ರಿಯರು ಬಾರ್​ಗಳತ್ತ ತಲೆನೇ ಹಾಕ್ತಿಲ್ಲ. ಇದ್ರಿಂದ ಸ್ಟಾಕ್ ಹಾಗೇ ಇದ್ದು, ಮೂರು ತಿಂಗಳಲ್ಲಿ ಮದ್ಯ ಮಾರಾಟ ಶೇ.30ರಷ್ಟು ಕುಸಿದಿದೆ.

ಇನ್ನು ಲಾಕ್​ಡೌನ್ ಬಳಿಕ ಎಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಕೈಯಲ್ಲಿ ದುಡ್ಡಿಲ್ಲದೆ, ಮಾಡೋಕೆ ಕೆಲ್ಸನೂ ಇಲ್ಲದೆ ಆರ್ಥಿಕ ಸಂಕಷ್ಟದಿಂದ ಪರದಾಡ್ತಿದ್ದಾರೆ. ಇದ್ರ ಜೊತೆಗೆ ಕೊರೊನಾ ಭೀತಿ ಇರೋದ್ರಿಂದ ಜನ ಬಾರ್​ಗಳತ್ತ ಬರ್ತಿಲ್ಲ. ಇದ್ರಿಂದ ಕುಡುಕರ ಸಂಖ್ಯೆ ಕಮ್ಮಿಯಾಗಿದೆ ಎನ್ನಲಾಗ್ತಿದೆ.

ಒಟ್ನಲ್ಲಿ ಕ್ರೂರಿ ಕೊರೊನಾ ಹಾವಳಿ ಉದ್ಯಮಗಳ ಮೇಲೆ ಅಷ್ಟೇ ಅಲ್ಲದೆ ಸದ್ಯ ಮದ್ಯ ಮಾರಾಟದ ಮೇಲೆಯೂ ತೀವ್ರ ಪರಿಣಾಮ ಬೀರಿದೆ. ಇದ್ರಿಂದ ಸದಾ ಲಾಭದಲ್ಲಿ ಇರ್ತಿದ್ದ ಬಾರ್ ಮಾಲೀಕರು ಇರೋ ಸ್ಟಾಕ್ ಕ್ಲಿಯರ್ ಆಗದೆ ಚಿಂತೆಗೀಡಾಗಿದ್ದಾರೆ.

ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ