AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾರ್​ಗಳತ್ತ ತಲೆ ಹಾಕುತ್ತಿಲ್ಲ ಎಣ್ಣೆಪ್ರಿಯರು, ಈ ಜಿಲ್ಲೆಯಲ್ಲಿ ಮದ್ಯ ಮಾರಾಟ ಭಾರಿ ಕುಸಿತ!

ಮಂಡ್ಯ: ಲಾಕ್​ಡೌನ್​​ನಲ್ಲಿ ಮದ್ಯಪ್ರಿಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಣ್ಣೆ ಸಿಗದೆ ಎರಡೆರಡು ತಿಂಗಳು ಪರದಾಡಿದ್ರು. ಅದೆಷ್ಟೋ ಕುಡುಕರು ಮದ್ಯಕ್ಕಾಗಿ ಜೀವತೆತ್ತರು. ಆದ್ರೀಗ ಸಕ್ಕರೆನಾಡಲ್ಲಿ ಜನರು ಬಾರ್​ಗಳತ್ತ ಸುಳಿತಾನೇ ಇಲ್ಲ. ಮೇ 4.. ಲಾಕ್​ಡೌನ್ ತೆರವುಗೊಳಿಸಿದ ಬಳಿಕ ಮದ್ಯಪ್ರಿಯರು ನಿಟ್ಟುಸಿರು ಬಿಟ್ಟ ದಿನ. ಎಣ್ಣೆ ಅಂಗಡಿಗಳ ಮುಂದೆ ಉದ್ದುದ್ದ ಕ್ಯೂ ನಿಂತಿದ್ದ ದಿನ.. ಮದ್ಯಕ್ಕಾಗಿ ಜನ ಮುಗಿಬಿದ್ದು ದಾಂದಲೆ ನಡೆಸಿದ ದಿನ.. ಮದ್ಯಪ್ರಿಯರ ಕುಡಿತದ ಚಟ ನೋಡಿ ದೇಶದ ಜನರೇ ಬೆಚ್ಚಿಬಿದ್ದಿದ್ದ ದಿನ.. ಆದ್ರೀಗ ಕೆಲವೆಡೆ ಈ ಸೀನ್ […]

ಬಾರ್​ಗಳತ್ತ ತಲೆ ಹಾಕುತ್ತಿಲ್ಲ ಎಣ್ಣೆಪ್ರಿಯರು, ಈ ಜಿಲ್ಲೆಯಲ್ಲಿ ಮದ್ಯ ಮಾರಾಟ ಭಾರಿ ಕುಸಿತ!
ಆಯೇಷಾ ಬಾನು
|

Updated on: Aug 04, 2020 | 6:45 AM

Share

ಮಂಡ್ಯ: ಲಾಕ್​ಡೌನ್​​ನಲ್ಲಿ ಮದ್ಯಪ್ರಿಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಣ್ಣೆ ಸಿಗದೆ ಎರಡೆರಡು ತಿಂಗಳು ಪರದಾಡಿದ್ರು. ಅದೆಷ್ಟೋ ಕುಡುಕರು ಮದ್ಯಕ್ಕಾಗಿ ಜೀವತೆತ್ತರು. ಆದ್ರೀಗ ಸಕ್ಕರೆನಾಡಲ್ಲಿ ಜನರು ಬಾರ್​ಗಳತ್ತ ಸುಳಿತಾನೇ ಇಲ್ಲ.

ಮೇ 4.. ಲಾಕ್​ಡೌನ್ ತೆರವುಗೊಳಿಸಿದ ಬಳಿಕ ಮದ್ಯಪ್ರಿಯರು ನಿಟ್ಟುಸಿರು ಬಿಟ್ಟ ದಿನ. ಎಣ್ಣೆ ಅಂಗಡಿಗಳ ಮುಂದೆ ಉದ್ದುದ್ದ ಕ್ಯೂ ನಿಂತಿದ್ದ ದಿನ.. ಮದ್ಯಕ್ಕಾಗಿ ಜನ ಮುಗಿಬಿದ್ದು ದಾಂದಲೆ ನಡೆಸಿದ ದಿನ.. ಮದ್ಯಪ್ರಿಯರ ಕುಡಿತದ ಚಟ ನೋಡಿ ದೇಶದ ಜನರೇ ಬೆಚ್ಚಿಬಿದ್ದಿದ್ದ ದಿನ.. ಆದ್ರೀಗ ಕೆಲವೆಡೆ ಈ ಸೀನ್ ಕಂಪ್ಲೀಟ್ ಉಲ್ಟಾ ಆಗಿದೆ.

ಬಾರ್​ಗಳತ್ತ ತಲೆ ಹಾಕುತ್ತಿಲ್ಲ ಎಣ್ಣೆಪ್ರಿಯರು! ಲಾಕ್​ಡೌನ್​ನಲ್ಲಿ ಮದ್ಯ ಮಾರಾಟವನ್ನ ನಿಷೇಧಿಸಲಾಗಿತ್ತು. ಎರಡು ತಿಂಗಳಿಗೂ ಹೆಚ್ಚು ಕಾಲ ಎಣ್ಣೆಪ್ರಿಯರು ಮದ್ಯ ಸಿಗದೆ ಪರದಾಡಿದ್ರು. ತೊಟ್ಟು ಎಣ್ಣೆಗಾಗಿ ಕಂಡ ಕಂಡವರ ಬಳಿ ಮನವಿ ಮಾಡ್ಕೊಂಡ್ರು. ಅದ್ರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಕದ್ದುಮುಚ್ಚಿ ಮಾರಾಟ ಮಾಡಲಾಗ್ತಿದೆ ಅನ್ನೋ ಆರೋಪಗಳು ಸಹ ಕೇಳಿ ಬಂದಿದ್ವು.

ಆಗ ಮಂಡ್ಯದ ಉಪವಿಭಾಗಾಧಿಕಾರಿ ಸೂರಜ್ & ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್​ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಆದ್ರೆ ಮೇ 4ರಂದು ಎಣ್ಣೆ ಅಂಗಡಿ ತೆಗೆದಿದ್ದೇ ತಡ, ಮಂಡ್ಯದಲ್ಲಿ ನಾ ಮುಂದು ತಾ ಮುಂದು ಅಂತಾ ಎಣ್ಣೆಗಾಗಿ ಮುಗಿಬಿದ್ದಿದ್ರು. ತದನಂತ್ರ ಬಾರ್​ಗಳತ್ತ ಮದ್ಯಪ್ರಿಯರು ಬಾರ್​ಗಳತ್ತ ತಲೆನೇ ಹಾಕ್ತಿಲ್ಲ. ಇದ್ರಿಂದ ಸ್ಟಾಕ್ ಹಾಗೇ ಇದ್ದು, ಮೂರು ತಿಂಗಳಲ್ಲಿ ಮದ್ಯ ಮಾರಾಟ ಶೇ.30ರಷ್ಟು ಕುಸಿದಿದೆ.

ಇನ್ನು ಲಾಕ್​ಡೌನ್ ಬಳಿಕ ಎಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಕೈಯಲ್ಲಿ ದುಡ್ಡಿಲ್ಲದೆ, ಮಾಡೋಕೆ ಕೆಲ್ಸನೂ ಇಲ್ಲದೆ ಆರ್ಥಿಕ ಸಂಕಷ್ಟದಿಂದ ಪರದಾಡ್ತಿದ್ದಾರೆ. ಇದ್ರ ಜೊತೆಗೆ ಕೊರೊನಾ ಭೀತಿ ಇರೋದ್ರಿಂದ ಜನ ಬಾರ್​ಗಳತ್ತ ಬರ್ತಿಲ್ಲ. ಇದ್ರಿಂದ ಕುಡುಕರ ಸಂಖ್ಯೆ ಕಮ್ಮಿಯಾಗಿದೆ ಎನ್ನಲಾಗ್ತಿದೆ.

ಒಟ್ನಲ್ಲಿ ಕ್ರೂರಿ ಕೊರೊನಾ ಹಾವಳಿ ಉದ್ಯಮಗಳ ಮೇಲೆ ಅಷ್ಟೇ ಅಲ್ಲದೆ ಸದ್ಯ ಮದ್ಯ ಮಾರಾಟದ ಮೇಲೆಯೂ ತೀವ್ರ ಪರಿಣಾಮ ಬೀರಿದೆ. ಇದ್ರಿಂದ ಸದಾ ಲಾಭದಲ್ಲಿ ಇರ್ತಿದ್ದ ಬಾರ್ ಮಾಲೀಕರು ಇರೋ ಸ್ಟಾಕ್ ಕ್ಲಿಯರ್ ಆಗದೆ ಚಿಂತೆಗೀಡಾಗಿದ್ದಾರೆ.

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಕಾಕ್ರೋಚ್‌ ಪಕ್ಷದ ಸಂಸ್ಥಾಪಕ ಯಾರು?ಭಾರತದ ಬಗ್ಗೆ ಧ್ವನಿ ಎತ್ತಿದ್ದೇಕೆ?
ಕಾಕ್ರೋಚ್‌ ಪಕ್ಷದ ಸಂಸ್ಥಾಪಕ ಯಾರು?ಭಾರತದ ಬಗ್ಗೆ ಧ್ವನಿ ಎತ್ತಿದ್ದೇಕೆ?
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ