ಖೋಟಾ ನೋಟು ನೀಡಿ ವಂಚನೆಗೆ ಯತ್ನಿಸಿದ್ದ ಗ್ಯಾಂಗ್ ಅಂದರ್​

ಬೆಳಗಾವಿ: ಇತ್ತೀಚೆಗೆ ಖೋಟಾ ನೋಟು ದಂಧೆಕೋರರ ಹಾವಳಿ ಎಲ್ಲೆಡೆ ಹೆಚ್ಚಾಗಿದೆ. ಹುಕ್ಕೇರಿ ತಾಲೂಕಿನ ಕಮತನೂರ ಬಳಿ ನಕಲಿ ನೋಟು ನೀಡಿ ವಂಚಿಸಲು ಹೋರಟಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಮರ್ ಅಂಬೇಕರ(27), ಧೈರ್ಯಶೀಲ ಪಾಟೀಲ್(42), ಬಾಬಾಸೋ ವಸಂತ ಪಾಟೀಲ(31), ರಾಜೇಶ ಮೋಹಿತೆ(48) ಹಾಗೂ ಅಶೋಕ ತೇಲಿ(50) ಬಂಧಿತ ಆರೋಪಿಗಳು. ಒಂದು ಲಕ್ಷ ರೂಪಾಯಿ ಅಸಲಿ ನೋಟಿಗೆ ಮೂರು ಪಟ್ಟು ನಕಲಿ ನೋಟು ನೀಡಿ ಜನಸಾಮಾನ್ಯರನ್ನು ಖದೀಮರು ವಂಚಿಸುತ್ತಿದ್ದರು. ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ […]

ಖೋಟಾ ನೋಟು ನೀಡಿ ವಂಚನೆಗೆ ಯತ್ನಿಸಿದ್ದ ಗ್ಯಾಂಗ್ ಅಂದರ್​
ಸಾಧು ಶ್ರೀನಾಥ್​

Updated on: Feb 22, 2020 | 11:35 AM

ಬೆಳಗಾವಿ: ಇತ್ತೀಚೆಗೆ ಖೋಟಾ ನೋಟು ದಂಧೆಕೋರರ ಹಾವಳಿ ಎಲ್ಲೆಡೆ ಹೆಚ್ಚಾಗಿದೆ. ಹುಕ್ಕೇರಿ ತಾಲೂಕಿನ ಕಮತನೂರ ಬಳಿ ನಕಲಿ ನೋಟು ನೀಡಿ ವಂಚಿಸಲು ಹೋರಟಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಮರ್ ಅಂಬೇಕರ(27), ಧೈರ್ಯಶೀಲ ಪಾಟೀಲ್(42), ಬಾಬಾಸೋ ವಸಂತ ಪಾಟೀಲ(31), ರಾಜೇಶ ಮೋಹಿತೆ(48) ಹಾಗೂ ಅಶೋಕ ತೇಲಿ(50) ಬಂಧಿತ ಆರೋಪಿಗಳು.

ಒಂದು ಲಕ್ಷ ರೂಪಾಯಿ ಅಸಲಿ ನೋಟಿಗೆ ಮೂರು ಪಟ್ಟು ನಕಲಿ ನೋಟು ನೀಡಿ ಜನಸಾಮಾನ್ಯರನ್ನು ಖದೀಮರು ವಂಚಿಸುತ್ತಿದ್ದರು. ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳಗಾವಿ ಡಿಸಿಬಿ ಪೊಲೀಸರು ಐವರು ವಂಚಕರನ್ನು ಬಂಧಿಸಿದ್ದಾರೆ. ಆರೋಪಿಗಳು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯವರು ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ 12ಸಾವಿರ ರೂ. ಅಸಲಿ ನೋಟುಗಳು ಮತ್ತು 23ಲಕ್ಷ 88ಸಾವಿರ ರೂಪಾಯಿ ಮುಖ ಬೆಲೆಯ ನಕಲಿ ನೋಟುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us