AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada Day 2: ಶಂಕರ್​ ಅಶ್ವತ್ಥ್​ ಪತ್ನಿ ಮಾಡಿದ ಅಡುಗೆ ತಿಂದು 10-15 ಜನ ಸತ್ತಹೋಗಿದ್ರಾ? ಇಲ್ಲಿದೆ ಅಸಲಿ ವಿಷಯ!

Bigg Boss Kannada Day 2 Updates: ಬಿಗ್​ ಬಾಸ್​ ಮನೆಯೊಳಗಿರುವ ಸದಸ್ಯರು ತಮ್ಮ ಖಾಸಗಿ ಬದುಕಿನ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಿರಿಯ ನಟ ಶಂಕರ್​ ಅಶ್ವತ್ಥ್​​ ಅವರು ತಮ್ಮ ಪತ್ನಿಯ ಅಡುಗೆ ಬಗ್ಗೆ ಹೇಳಿದ ಮಾತು ಕೇಳಿ ಇನ್ನುಳಿದ ಸ್ಪರ್ಧಿಗಳೆಲ್ಲ ಅಚ್ಚರಿಪಟ್ಟಿದ್ದಾರೆ.

Bigg Boss Kannada Day 2: ಶಂಕರ್​ ಅಶ್ವತ್ಥ್​ ಪತ್ನಿ ಮಾಡಿದ ಅಡುಗೆ ತಿಂದು 10-15 ಜನ ಸತ್ತಹೋಗಿದ್ರಾ? ಇಲ್ಲಿದೆ ಅಸಲಿ ವಿಷಯ!
ಶಂಕರ್​ ಅಶ್ವತ್ಥ್​
ರಾಜೇಶ್ ದುಗ್ಗುಮನೆ
| Edited By: |

Updated on:Mar 03, 2021 | 3:34 PM

Share

‘ಮದುವೆ ಆದಾಗ ನನ್ನ ಹೆಂಡತಿಗೆ ಒಂದು ಕಾಫಿ ಮಾಡಲು ಕೂಡ ಬರುತ್ತಿರಲಿಲ್ಲ. ಆದರೆ ಈಗ 300 ಜನಕ್ಕೆ ಒಬ್ಬಳೇ ಅಡುಗೆ ಮಾಡುತ್ತಾಳೆ. ಕ್ಯಾಟರಿಂಗ್​ ಮಾಡುತ್ತಾಳೆ. ಕಳೆದ 11 ವರ್ಷಗಳಲ್ಲಿ ನನ್ನ ಹೆಂಡತಿ ಕೊಟ್ಟ ಊಟವನ್ನು ತಿಂದವರ ಪೈಕಿ ಸುಮಾರು 10-15 ಜನ ಸತ್ತುಹೋಗಿದ್ದಾರೆ’ ಎಂದು ಹೇಳುವ ಮೂಲಕ ಶಂಕರ್ ಅಶ್ವತ್ಥ್​ ಅವರು ಒಂದು ಕ್ಷಣ ಎಲ್ಲರನ್ನೂ ದಂಗಾಗಿಸಿದರು. ಅಷ್ಟಕ್ಕೂ ಅವರ ಮಾತಿನ ಅರ್ಥವೇನು? ನಿಜಕ್ಕೂ ಅವರ ಹೆಂಡತಿಯ ಅಡುಗೆ ತಿಂದವರು ಸತ್ತು ಹೋಗಿದ್ದಾರಾ? ಇಂಥ ಪ್ರಶ್ನೆ ಮೂಡುವುದು ಸಹಜ. ಹಾಗಾಗಿ ಮರುಕ್ಷಣವೇ ಅಸಲಿ ವಿಚಾರ ಏನು ಎಂಬುದನ್ನು ಎಳೆಎಳೆಯಾಗಿ ವಿವರಿಸಿದರು.

‘ನಾನು ನೇರವಾಗಿ ಹೇಳುತ್ತೇನೆ. ನಾವು ದುಡಿದು ಬದುಕಬೇಕು ಎಂದು ನಮ್ಮ ತಂದೆ ಕಲಿಸಿದ್ದಾರೆ. ಕೂತು ತಿಂದರೆ ಎಷ್ಟಿದ್ದರೂ ಸಾಲದು. ರೋಗವೂ ಬರುತ್ತದೆ. ನನ್ನ ಹೆಂಡತಿ ಕ್ಯಾಟರಿಂಗ್​ ಮಾಡುತ್ತಾಳೆ. ನಾನು ಈಗ ಹೇಳುವುದು ಕೇಳಿ ಎಲ್ಲರೂ ತಪ್ಪು ತಿಳಿದುಕೊಳ್ಳುತ್ತಾರೆ. ಆದರೆ ನಿಧಾನವಾಗಿ ಗ್ರಹಿಸಬೇಕು. ನನ್ನ ಹೆಂಡತಿಯ ಊಟ ತಿಂದು 10-15 ಜನರು ಸತ್ತು ಹೋಗಿದ್ದಾರೆ. ಅಂದರೆ ಅಷ್ಟು ಕೆಟ್ಟದಾಗಿ ಅಡುಗೆ ಮಾಡುತ್ತಾರೆ ಅಂತ ನೀವೆಲ್ಲ ಅಂದುಕೊಳ್ಳುತ್ತೀರಿ. ಆದರೆ ವಿಷಯ ಅದಲ್ಲ. 10-15 ಜನರು ಸಾಯುವ ಕೊನೇ ಕಾಲದಲ್ಲಿ ಇವಳು ಊಟ ಕೊಟ್ಟಿದ್ದಾಳೆ’ ಎಂದು ಶಂಕರ್​ ಅಶ್ವತ್ಥ್​ ವಿವರಿಸಿದಾಗ ಅವರ ಮಾತಿನ ಅರ್ಥ ಎಲ್ಲರಿಗೂ ತಿಳಿಯಿತು.

‘ಹಾಸಿಗೆ ಹಿಡಿದ ಅನೇಕರಿಗೆ ಅವಳು ಊಟ ನೀಡಿದ್ದಾಳೆ. ನೀವು ನಂಬುವುದಿಲ್ಲ. ಅವಳು ಮಾಡಿದ ಸಹಾಯವನ್ನು ನೆನೆದು, ಅವಳನ್ನು ಕರೆದು ಎಷ್ಟೋ ಕಡೆ ಬಾಗಿನ ನೀಡಿದ್ದಾರೆ. ಯಾರಾದರೂ ಕಷ್ಟಪಡುತ್ತಿದ್ದಾರೆ ಎಂಬುದು ಗೊತ್ತಾದರೆ ನನ್ನ ಹೆಂಡತಿ ಅಳುತ್ತಾಳೆ’ ಎಂದಿದ್ದಾರೆ ಶಂಕರ್​ ಅಶ್ವತ್ಥ್​.

ಇನ್ನು, ಅಡುಗೆಗೆ ಸಂಬಂಧಿಸಿದಂತೆ ಬಿಗ್​ ಬಾಸ್​ ಮನೆಯಲ್ಲಿ ಭಾರಿ ಚೆರ್ಚೆ ನಡೆದಿದೆ. ಈ ಹಿಂದಿನ ಸೀಸನ್​ಗಳಲ್ಲಿ ಎಷ್ಟೋ ಬಾರಿ ಜಗಳ ಆರಂಭ ಆಗಿದ್ದು ಅಡುಗೆ ಮನೆಯಿಂದಲೇ! ಬಿಗ್​ ಬಾಸ್​ಗೆ ಎಂಟ್ರಿ ನೀಡುವುದಕ್ಕೂ ಮುನ್ನ ‘ನಿಮಗೆ ಅಡುಗೆ ಮಾಡೋಕೆ ಬರುತ್ತಾ’ ಎಂಬ ಪ್ರಶ್ನೆಯನ್ನು ಸುದೀಪ್​ ಎಲ್ಲರಿಗೂ ಕೇಳಿದ್ದರು. ಸ್ವತಃ ಸುದೀಪ್​ ಅವರಿಗೂ ಅಡುಗೆ ಬಗ್ಗೆ ಅಪಾರ ಆಸಕ್ತಿ ಇದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲೇ ಮದುವೆಯಾದ ಮಂಜು ಪಾವಗಡ – ದಿವ್ಯಾ ಸುರೇಶ್​!

Published On - 2:53 pm, Wed, 3 March 21

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು