AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada Day 2: ಶಂಕರ್​ ಅಶ್ವತ್ಥ್​ ಪತ್ನಿ ಮಾಡಿದ ಅಡುಗೆ ತಿಂದು 10-15 ಜನ ಸತ್ತಹೋಗಿದ್ರಾ? ಇಲ್ಲಿದೆ ಅಸಲಿ ವಿಷಯ!

Bigg Boss Kannada Day 2 Updates: ಬಿಗ್​ ಬಾಸ್​ ಮನೆಯೊಳಗಿರುವ ಸದಸ್ಯರು ತಮ್ಮ ಖಾಸಗಿ ಬದುಕಿನ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಿರಿಯ ನಟ ಶಂಕರ್​ ಅಶ್ವತ್ಥ್​​ ಅವರು ತಮ್ಮ ಪತ್ನಿಯ ಅಡುಗೆ ಬಗ್ಗೆ ಹೇಳಿದ ಮಾತು ಕೇಳಿ ಇನ್ನುಳಿದ ಸ್ಪರ್ಧಿಗಳೆಲ್ಲ ಅಚ್ಚರಿಪಟ್ಟಿದ್ದಾರೆ.

Bigg Boss Kannada Day 2: ಶಂಕರ್​ ಅಶ್ವತ್ಥ್​ ಪತ್ನಿ ಮಾಡಿದ ಅಡುಗೆ ತಿಂದು 10-15 ಜನ ಸತ್ತಹೋಗಿದ್ರಾ? ಇಲ್ಲಿದೆ ಅಸಲಿ ವಿಷಯ!
ಶಂಕರ್​ ಅಶ್ವತ್ಥ್​
ರಾಜೇಶ್ ದುಗ್ಗುಮನೆ
| Edited By: |

Updated on:Mar 03, 2021 | 3:34 PM

Share

‘ಮದುವೆ ಆದಾಗ ನನ್ನ ಹೆಂಡತಿಗೆ ಒಂದು ಕಾಫಿ ಮಾಡಲು ಕೂಡ ಬರುತ್ತಿರಲಿಲ್ಲ. ಆದರೆ ಈಗ 300 ಜನಕ್ಕೆ ಒಬ್ಬಳೇ ಅಡುಗೆ ಮಾಡುತ್ತಾಳೆ. ಕ್ಯಾಟರಿಂಗ್​ ಮಾಡುತ್ತಾಳೆ. ಕಳೆದ 11 ವರ್ಷಗಳಲ್ಲಿ ನನ್ನ ಹೆಂಡತಿ ಕೊಟ್ಟ ಊಟವನ್ನು ತಿಂದವರ ಪೈಕಿ ಸುಮಾರು 10-15 ಜನ ಸತ್ತುಹೋಗಿದ್ದಾರೆ’ ಎಂದು ಹೇಳುವ ಮೂಲಕ ಶಂಕರ್ ಅಶ್ವತ್ಥ್​ ಅವರು ಒಂದು ಕ್ಷಣ ಎಲ್ಲರನ್ನೂ ದಂಗಾಗಿಸಿದರು. ಅಷ್ಟಕ್ಕೂ ಅವರ ಮಾತಿನ ಅರ್ಥವೇನು? ನಿಜಕ್ಕೂ ಅವರ ಹೆಂಡತಿಯ ಅಡುಗೆ ತಿಂದವರು ಸತ್ತು ಹೋಗಿದ್ದಾರಾ? ಇಂಥ ಪ್ರಶ್ನೆ ಮೂಡುವುದು ಸಹಜ. ಹಾಗಾಗಿ ಮರುಕ್ಷಣವೇ ಅಸಲಿ ವಿಚಾರ ಏನು ಎಂಬುದನ್ನು ಎಳೆಎಳೆಯಾಗಿ ವಿವರಿಸಿದರು.

‘ನಾನು ನೇರವಾಗಿ ಹೇಳುತ್ತೇನೆ. ನಾವು ದುಡಿದು ಬದುಕಬೇಕು ಎಂದು ನಮ್ಮ ತಂದೆ ಕಲಿಸಿದ್ದಾರೆ. ಕೂತು ತಿಂದರೆ ಎಷ್ಟಿದ್ದರೂ ಸಾಲದು. ರೋಗವೂ ಬರುತ್ತದೆ. ನನ್ನ ಹೆಂಡತಿ ಕ್ಯಾಟರಿಂಗ್​ ಮಾಡುತ್ತಾಳೆ. ನಾನು ಈಗ ಹೇಳುವುದು ಕೇಳಿ ಎಲ್ಲರೂ ತಪ್ಪು ತಿಳಿದುಕೊಳ್ಳುತ್ತಾರೆ. ಆದರೆ ನಿಧಾನವಾಗಿ ಗ್ರಹಿಸಬೇಕು. ನನ್ನ ಹೆಂಡತಿಯ ಊಟ ತಿಂದು 10-15 ಜನರು ಸತ್ತು ಹೋಗಿದ್ದಾರೆ. ಅಂದರೆ ಅಷ್ಟು ಕೆಟ್ಟದಾಗಿ ಅಡುಗೆ ಮಾಡುತ್ತಾರೆ ಅಂತ ನೀವೆಲ್ಲ ಅಂದುಕೊಳ್ಳುತ್ತೀರಿ. ಆದರೆ ವಿಷಯ ಅದಲ್ಲ. 10-15 ಜನರು ಸಾಯುವ ಕೊನೇ ಕಾಲದಲ್ಲಿ ಇವಳು ಊಟ ಕೊಟ್ಟಿದ್ದಾಳೆ’ ಎಂದು ಶಂಕರ್​ ಅಶ್ವತ್ಥ್​ ವಿವರಿಸಿದಾಗ ಅವರ ಮಾತಿನ ಅರ್ಥ ಎಲ್ಲರಿಗೂ ತಿಳಿಯಿತು.

‘ಹಾಸಿಗೆ ಹಿಡಿದ ಅನೇಕರಿಗೆ ಅವಳು ಊಟ ನೀಡಿದ್ದಾಳೆ. ನೀವು ನಂಬುವುದಿಲ್ಲ. ಅವಳು ಮಾಡಿದ ಸಹಾಯವನ್ನು ನೆನೆದು, ಅವಳನ್ನು ಕರೆದು ಎಷ್ಟೋ ಕಡೆ ಬಾಗಿನ ನೀಡಿದ್ದಾರೆ. ಯಾರಾದರೂ ಕಷ್ಟಪಡುತ್ತಿದ್ದಾರೆ ಎಂಬುದು ಗೊತ್ತಾದರೆ ನನ್ನ ಹೆಂಡತಿ ಅಳುತ್ತಾಳೆ’ ಎಂದಿದ್ದಾರೆ ಶಂಕರ್​ ಅಶ್ವತ್ಥ್​.

ಇನ್ನು, ಅಡುಗೆಗೆ ಸಂಬಂಧಿಸಿದಂತೆ ಬಿಗ್​ ಬಾಸ್​ ಮನೆಯಲ್ಲಿ ಭಾರಿ ಚೆರ್ಚೆ ನಡೆದಿದೆ. ಈ ಹಿಂದಿನ ಸೀಸನ್​ಗಳಲ್ಲಿ ಎಷ್ಟೋ ಬಾರಿ ಜಗಳ ಆರಂಭ ಆಗಿದ್ದು ಅಡುಗೆ ಮನೆಯಿಂದಲೇ! ಬಿಗ್​ ಬಾಸ್​ಗೆ ಎಂಟ್ರಿ ನೀಡುವುದಕ್ಕೂ ಮುನ್ನ ‘ನಿಮಗೆ ಅಡುಗೆ ಮಾಡೋಕೆ ಬರುತ್ತಾ’ ಎಂಬ ಪ್ರಶ್ನೆಯನ್ನು ಸುದೀಪ್​ ಎಲ್ಲರಿಗೂ ಕೇಳಿದ್ದರು. ಸ್ವತಃ ಸುದೀಪ್​ ಅವರಿಗೂ ಅಡುಗೆ ಬಗ್ಗೆ ಅಪಾರ ಆಸಕ್ತಿ ಇದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲೇ ಮದುವೆಯಾದ ಮಂಜು ಪಾವಗಡ – ದಿವ್ಯಾ ಸುರೇಶ್​!

Published On - 2:53 pm, Wed, 3 March 21

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್