Bigg Boss Kannada Day 1: ಬಿಗ್​ ಬಾಸ್​ ಮನೆಯಲ್ಲಿ ಧನುಶ್ರೀ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ನಿರ್ಮಲಾ

ಧನುಶ್ರೀ ಈ ಸ್ಪರ್ಧೆಯಲ್ಲಿ ಅಷ್ಟಾಗಿ ಆ್ಯಕ್ಟಿವ್​ ಆಗಿ ನಡೆದುಕೊಂಡಿರಲಿಲ್ಲ. ಹೀಗಾಗಿ, ತಂಡ ಸೋಲಲು ಧನುಶ್ರೀಯೇ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು.

Bigg Boss Kannada Day 1: ಬಿಗ್​ ಬಾಸ್​ ಮನೆಯಲ್ಲಿ ಧನುಶ್ರೀ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ನಿರ್ಮಲಾ
ಧನುಶ್ರೀ-ನಿರ್ಮಲಾ
Edited By:

Updated on: Mar 02, 2021 | 3:12 PM

ಬಿಗ್​ ಬಾಸ್​ ಮೊದಲನೇ ದಿನವೇ ಸಾಕಷ್ಟು ಹೈಡ್ರಾಮಾಗಳು ನಡೆದಿವೆ. ಶುಭಾ ಪೂಂಜಾ ಕಣ್ಣೀರಿಟ್ಟರು. ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗರನ್ನು ಎತ್ತಿಕೊಂಡು ಹೋಗಿದ್ದ ವಿಚಾರ ಕೂಡ ಚರ್ಚೆಗೆ ಕಾರಣವಾಗಿತ್ತು. ಈ ಮಧ್ಯೆ, ಧನುಶ್ರೀ ಮಾಡಿದ ತಪ್ಪಿಗೆ ನಿರ್ಮಲಾ ಶಿಕ್ಷೆ ಅನುಭವಿಸಿದ್ದಾರೆ. ಅಷ್ಟಕ್ಕೂ ಬಿಗ್​ ಬಾಸ್​ ಮನೆಯಲ್ಲಿ ಮೊದಲ ದಿನ ಆಗಿದ್ದೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್​ ಬಾಸ್​ ಮನೆಯಲ್ಲಿ ಮೊದಲ ದಿನ 17 ಸದಸ್ಯರು ಮನೆಯೊಳಗೆ ಕೂತಿದ್ದರು. ಈ ವೇಳೆ ಪ್ರತಿಯೊಬ್ಬರಿಗೂ ಒಂದೊಂದು ಬಾಲ್​ಗಳನ್ನು ನೀಡಲಾಯಿತು. ಹೀಗೆ ನೀಡಿದ ಬಾಲ್​ಗಳಲ್ಲಿ ನೀಲಿ, ಕೆಂಪು ಹಸಿರು ಹಾಗೂ ಹಳದಿ ಬಣ್ಣದ ಚಾವಿ ಇತ್ತು. ಬಣ್ಣದ ಆಧಾರದ ಮೇಳೆ ನಾಲ್ಕು ಸದಸ್ಯರ ಒಂದು ಟೀಂ ಮಾಡಲಾಯಿತು. ಶಮಂತ್​ ಅಲಿಯಾಸ್​ ಬ್ರೋ ಗೌಡ ಲೀಡರ್​ ಆದರು. ಈ ವೇಳೆ ಟಾಸ್ಕ್​ ಒಂದನ್ನು ಬಿಗ್​ ಬಾಸ್​ ನೀಡಿತ್ತು.

ಮೂರು ಕಡೆಗಳಲ್ಲಿ ಹಗ್ಗ ಇತ್ತು. ಹಗ್ಗದ ತುದಿ ಸೇರುವ ಜಾಗದಲ್ಲಿ ಒಂದು ಪ್ಲೇಟ್​ ರೀತಿಯ ವಸ್ತು ಇತ್ತು. ಪ್ಲೇಟ್​ ಮೇಲೆ ಸ್ಪಂಜ್​ ಮಾದರಿಯ ಆಯಾತಾಕರದ ವಸ್ತುಗಳನ್ನು ಜೋಡಿಸುತ್ತಾ ಬರಬೇಕು. ಹೀಗೆ ಜೋಡಿಸುವ ಸ್ಪರ್ಧೆಯಲ್ಲಿ, ಶುಭಾ ಪೂಂಜಾ, ನಿರ್ಮಲಾ, ಧನುಶ್ರೀ, ನಿಧಿ ಇದ್ದ ತಂಡ ಸೋತಿತ್ತು.

ಧನುಶ್ರೀ ಈ ಸ್ಪರ್ಧೆಯಲ್ಲಿ ಅಷ್ಟಾಗಿ ಆ್ಯಕ್ಟಿವ್​ ಆಗಿ ನಡೆದುಕೊಂಡಿರಲಿಲ್ಲ. ಹೀಗಾಗಿ, ತಂಡ ಸೋಲಲು ಧನುಶ್ರೀಯೇ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಬಿಗ್​ ಬಾಸ್​ ಆದೇಶದಂತೆ ಸೋಲಿನ ಹೊಣೆಯನ್ನು ತಂಡದ ಓರ್ವ ಸದಸ್ಯ ಮಾತ್ರ ಹೊತ್ತುಕೊಳ್ಳಬೇಕಿತ್ತು. ಆಗ ನಿರ್ಮಲಾ ಸೋಲಿನ ಹೊಣೆಯನ್ನು ತಾವೇ ಹೊತ್ತಿಕೊಳ್ಳುತ್ತೇವೆ ಎಂದರು. ಈ ಕಾರಣಕ್ಕೆ, ಈ ವಾರದ ಎಲಿಮಿನೇಷನ್​ಗೆ ನಿರ್ಮಲಾ ನೇರವಾಗಿ ನಾಮಿನೇಟ್​ ಆದರು.

ಈ ವಾರ ನಾಮಿನೇಟ್​ ಆದವರ ಪಟ್ಟಿ..
ಈ ವಾರದ ಎಲಿಮಿನೇಷನ್​ಗೆ ಒಟ್ಟು ಐದು ಜನರು ನಾಮಿನೇಷನ್​ ಆಗಿದ್ದಾರೆ. ನಿರ್ಮಲಾ ನೇರವಾಗಿ ನಾಮಿನೇಟ್​ ಆದರೆ, ಧನುಶ್ರೀ, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ ಹಾಗೂ ಮಂಜು ಪಾವಗಡ ಅವರನ್ನು ಮನೆಯ ಸದಸ್ಯರು ನಾಮಿನೇಟ್​ ಮಾಡಿದ್ದರು. ಶಂಕರ್​ ಅಶ್ವತ್ಥ್​ ಅವರು ಕೂಡ ನಾಮಿನೇಟ್ ಆಗಿದ್ದರು, ಆದರೆ ಮನೆಯ ಲೀಡರ್​ ಬ್ರೋ ಗೌಡ ಅವರಿಗೆ ಇದ್ದ ಅಧಿಕಾರದಿಂದ ಶಂಕರ್​ ಅವರನ್ನು ಉಳಿಸಿದರು.

ಇದನ್ನೂ ಓದಿ: Bigg Boss Kannada Day 1: ಹ್ಯಾಂಡ್ ಶೇಕ್ ಮಾಡಲು ಬಂದ ದಿವ್ಯಾರನ್ನು ಅನಾಮತ್ತು ಎತ್ತಿಕೊಂಡ ಪ್ರಶಾಂತ್ ಸಂಬರಗಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us