
ಕೋಲಾರ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಮುಳಬಾಗಿಲಿನ ಕಾಂತರಾಜ ಸರ್ಕಲ್ ಬಳಿ ನಡೆದಿದೆ. ಕುರುಬರಹಳ್ಳಿ ಗ್ರಾಮದ ನಿವಾಸಿ ಅಖಿಲ್(30) ಮೃತ ದುರ್ದೈವಿ.
ಲಾಕ್ಡೌನ್ ಹಿನ್ನೆಲೆಯಲ್ಲಿ ವಾಹನ ಸಂಚಾರ ಇಲ್ಲದೆ ಸವಾರನ ಮೃತ ದೇಹ ಹೈವೇ ಮೇಲೆ ಬಹಳ ಹೊತ್ತು ಅನಾಥವಾಗಿ ಬಿದ್ದಿತ್ತು ಎಂದು ತಿಳಿದುಬಂದಿದೆ. ಹೈವೇ ಪೊಲೀಸರು ಗಸ್ತು ತಿರುಗುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
Published On - 11:28 am, Sun, 26 July 20