
ದಾವಣಗೆರೆ: ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್ ಅವರ ಮೊಮ್ಮಗನ ಕಾರು ಅಪಘಾತವಾಗಿರುವ ಘಟನೆ ತಡರಾತ್ರಿ ಹೊರವಲಯದ ಶಾಮನೂರಿನಲ್ಲಿ ನಡೆದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಬಳಿಕ ಮನೆಗೆ ಕಾರು ಗುದ್ದಿದೆ. ಇದನ್ನು ಪ್ರಶ್ನಿಸಿದವರ ಮೇಲೆ ಶಾಸಕರ ಮೊಮ್ಮಗ ಅರುಣಕುಮಾರ ಹಲ್ಲೆಗೆ ಮುಂದಾಗಿದ್ದರು ಎನ್ನಲಾಗಿದೆ.
ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ರವೀಂದ್ರನಾಥ್ ಅವರ ಪುತ್ರಿ ವೀಣಾ ನಂಜಪ್ಪ ಪುತ್ರ ಅರುಣಕುಮಾರ ಆಗಿದ್ದಾರೆ. ವೀಣಾ ನಂಜಪ್ಪ ಅವರು ದಾವಣಗೆರೆ ಪಾಲಿಕೆ ಸದಸ್ಯೆಯೂ ಆಗಿದ್ದಾರೆ. ಶಾಸಕರ ಮೊಮ್ಮಗನ ಕಾರು ಅಪಘಾತಕ್ಕೆ ಸಂಬಂಧಿಸಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಅರುಣಕುಮಾರ ಅವರನ್ನ ಕರೆಸುವಂತೆ ಆಗ್ರಹಿಸುತ್ತಿದ್ದಾರೆ.
Published On - 10:13 am, Mon, 24 February 20