AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಸಾಗರ ಸೀಳಿ ಹೋರಿಗಳ ಮಿಂಚಿನ ಓಟ: ಕೊಬ್ಬಿದ ಗೂಳಿ ಹಿಡಿಯಲು ಪೈಲ್ವಾನರ ಸಾಹಸ

ಹಾವೇರಿ: ಹೋರಿ ಬೆದರಿಸೋ ಸ್ಪರ್ಧೆ ಅಂದ್ರೆನೇ ಶಕ್ತಿಯ ಪ್ರಶ್ನೆ. ಇಲ್ಲಿ ಕಟ್ ಮಸ್ತಾಗಿರೋ ಹೋರಿಗಳು ಶರವೇಗದಲ್ಲಿ ಓಡ್ತಿದ್ರೆ, ಅವುಗಳನ್ನ ಹಿಡಿಯೋಕೆ ಪೈಲ್ವಾನ್​ಗಳು ಸಿಕ್ಕಾಪಟ್ಟೆ ಹರಸಾಹಸ ಮಾಡ್ತಾರೆ. ಅದ್ರಲ್ಲೂ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಧೂಳಿಕೊಪ್ಪದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಬೆದರಿಸೋ ಸ್ಪರ್ಧೆ ಅಂತೂ ಎಲ್ರಿಗೂ ಖುಷಿ ಕೊಡ್ತು. ಅಲಂಕೃತಗೊಂಡಿದ್ದ ಹೋರಿಗಳು ಅಖಾಡದಲ್ಲಿ ಧೂಳೆಬ್ಬಿಸ್ತಿದ್ರೆ ಶಿಳ್ಳೆ, ಚಪ್ಪಾಳೆಗಳಿಂದ ಜನ ಹುರಿದುಂಬಿಸ್ತಿದ್ರು. ಪೈಲ್ವಾನ್​ಗಳು ಕೂಡ ತಮ್ಮ ಸಾಹಸಕ್ಕೆ ಜನ ಸೈ ಅಂದಿರೋದು ಕಂಡು ಸಂತಸ ವ್ಯಕ್ತಪಡಿಸಿದ್ರು. ಇನ್ನು ಹೋರಿ ಬೆದರಿಸೋ […]

ಜನಸಾಗರ ಸೀಳಿ ಹೋರಿಗಳ ಮಿಂಚಿನ ಓಟ: ಕೊಬ್ಬಿದ ಗೂಳಿ ಹಿಡಿಯಲು ಪೈಲ್ವಾನರ ಸಾಹಸ
ಸಾಧು ಶ್ರೀನಾಥ್​
|

Updated on: Feb 23, 2020 | 8:21 PM

Share

ಹಾವೇರಿ: ಹೋರಿ ಬೆದರಿಸೋ ಸ್ಪರ್ಧೆ ಅಂದ್ರೆನೇ ಶಕ್ತಿಯ ಪ್ರಶ್ನೆ. ಇಲ್ಲಿ ಕಟ್ ಮಸ್ತಾಗಿರೋ ಹೋರಿಗಳು ಶರವೇಗದಲ್ಲಿ ಓಡ್ತಿದ್ರೆ, ಅವುಗಳನ್ನ ಹಿಡಿಯೋಕೆ ಪೈಲ್ವಾನ್​ಗಳು ಸಿಕ್ಕಾಪಟ್ಟೆ ಹರಸಾಹಸ ಮಾಡ್ತಾರೆ. ಅದ್ರಲ್ಲೂ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಧೂಳಿಕೊಪ್ಪದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಬೆದರಿಸೋ ಸ್ಪರ್ಧೆ ಅಂತೂ ಎಲ್ರಿಗೂ ಖುಷಿ ಕೊಡ್ತು.

ಅಲಂಕೃತಗೊಂಡಿದ್ದ ಹೋರಿಗಳು ಅಖಾಡದಲ್ಲಿ ಧೂಳೆಬ್ಬಿಸ್ತಿದ್ರೆ ಶಿಳ್ಳೆ, ಚಪ್ಪಾಳೆಗಳಿಂದ ಜನ ಹುರಿದುಂಬಿಸ್ತಿದ್ರು. ಪೈಲ್ವಾನ್​ಗಳು ಕೂಡ ತಮ್ಮ ಸಾಹಸಕ್ಕೆ ಜನ ಸೈ ಅಂದಿರೋದು ಕಂಡು ಸಂತಸ ವ್ಯಕ್ತಪಡಿಸಿದ್ರು. ಇನ್ನು ಹೋರಿ ಬೆದರಿಸೋ ಸ್ಪರ್ಧೆಯಲ್ಲಿ ಚಿನ್ನ, ನಗದು, ಟಿವಿ, ಫ್ರಿಡ್ಜ್ ಸೇರಿದಂತೆ ಹಲವು ಬಹುಮಾನಗಳನ್ನ ಇಡಲಾಗಿತ್ತು. ಚೆನ್ನಾಗಿ ಓಡಿದ ಹೋರಿ, ಸುಂದರವಾಗಿ ಅಲಂಕೃತಗೊಂಡ ಹೋರಿ ಹಾಗೂ ಪೈಲ್ವಾನರ ಕೈಗೆ ಸಿಗದ ಹೋರಿ.. ಹೀಗೆ ವಿವಿಧ ಹಂತಗಳಲ್ಲಿ ಬಹುಮಾನ ನೀಡಲಾಯ್ತು.

ಹಾವೇರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ವು. ತಮ್ಮ ಹೋರಿಗಳ ತಾಕತ್ತು ನೋಡಿ ಮಾಲೀಕರು ಕೂಡ ಖುಷಿಪಟ್ರು. ಒಟ್ನಲ್ಲಿ, ಹೋರಿ ಬೆದರಿಸೋ ಸ್ಪರ್ಧೆಗೆ ಜನಸಾಗರವೇ ನೆರೆದಿತ್ತು. ಹಳ್ಳಿ ಜನರ ಪಾಲಿಗೆ ಖುಷಿಯ ರಸದೌತಣವನ್ನೇ ಬಡಿಸಿತ್ತು.

ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ