AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಸಾಗರ ಸೀಳಿ ಹೋರಿಗಳ ಮಿಂಚಿನ ಓಟ: ಕೊಬ್ಬಿದ ಗೂಳಿ ಹಿಡಿಯಲು ಪೈಲ್ವಾನರ ಸಾಹಸ

ಹಾವೇರಿ: ಹೋರಿ ಬೆದರಿಸೋ ಸ್ಪರ್ಧೆ ಅಂದ್ರೆನೇ ಶಕ್ತಿಯ ಪ್ರಶ್ನೆ. ಇಲ್ಲಿ ಕಟ್ ಮಸ್ತಾಗಿರೋ ಹೋರಿಗಳು ಶರವೇಗದಲ್ಲಿ ಓಡ್ತಿದ್ರೆ, ಅವುಗಳನ್ನ ಹಿಡಿಯೋಕೆ ಪೈಲ್ವಾನ್​ಗಳು ಸಿಕ್ಕಾಪಟ್ಟೆ ಹರಸಾಹಸ ಮಾಡ್ತಾರೆ. ಅದ್ರಲ್ಲೂ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಧೂಳಿಕೊಪ್ಪದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಬೆದರಿಸೋ ಸ್ಪರ್ಧೆ ಅಂತೂ ಎಲ್ರಿಗೂ ಖುಷಿ ಕೊಡ್ತು. ಅಲಂಕೃತಗೊಂಡಿದ್ದ ಹೋರಿಗಳು ಅಖಾಡದಲ್ಲಿ ಧೂಳೆಬ್ಬಿಸ್ತಿದ್ರೆ ಶಿಳ್ಳೆ, ಚಪ್ಪಾಳೆಗಳಿಂದ ಜನ ಹುರಿದುಂಬಿಸ್ತಿದ್ರು. ಪೈಲ್ವಾನ್​ಗಳು ಕೂಡ ತಮ್ಮ ಸಾಹಸಕ್ಕೆ ಜನ ಸೈ ಅಂದಿರೋದು ಕಂಡು ಸಂತಸ ವ್ಯಕ್ತಪಡಿಸಿದ್ರು. ಇನ್ನು ಹೋರಿ ಬೆದರಿಸೋ […]

ಜನಸಾಗರ ಸೀಳಿ ಹೋರಿಗಳ ಮಿಂಚಿನ ಓಟ: ಕೊಬ್ಬಿದ ಗೂಳಿ ಹಿಡಿಯಲು ಪೈಲ್ವಾನರ ಸಾಹಸ
ಸಾಧು ಶ್ರೀನಾಥ್​
|

Updated on: Feb 23, 2020 | 8:21 PM

Share

ಹಾವೇರಿ: ಹೋರಿ ಬೆದರಿಸೋ ಸ್ಪರ್ಧೆ ಅಂದ್ರೆನೇ ಶಕ್ತಿಯ ಪ್ರಶ್ನೆ. ಇಲ್ಲಿ ಕಟ್ ಮಸ್ತಾಗಿರೋ ಹೋರಿಗಳು ಶರವೇಗದಲ್ಲಿ ಓಡ್ತಿದ್ರೆ, ಅವುಗಳನ್ನ ಹಿಡಿಯೋಕೆ ಪೈಲ್ವಾನ್​ಗಳು ಸಿಕ್ಕಾಪಟ್ಟೆ ಹರಸಾಹಸ ಮಾಡ್ತಾರೆ. ಅದ್ರಲ್ಲೂ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಧೂಳಿಕೊಪ್ಪದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಬೆದರಿಸೋ ಸ್ಪರ್ಧೆ ಅಂತೂ ಎಲ್ರಿಗೂ ಖುಷಿ ಕೊಡ್ತು.

ಅಲಂಕೃತಗೊಂಡಿದ್ದ ಹೋರಿಗಳು ಅಖಾಡದಲ್ಲಿ ಧೂಳೆಬ್ಬಿಸ್ತಿದ್ರೆ ಶಿಳ್ಳೆ, ಚಪ್ಪಾಳೆಗಳಿಂದ ಜನ ಹುರಿದುಂಬಿಸ್ತಿದ್ರು. ಪೈಲ್ವಾನ್​ಗಳು ಕೂಡ ತಮ್ಮ ಸಾಹಸಕ್ಕೆ ಜನ ಸೈ ಅಂದಿರೋದು ಕಂಡು ಸಂತಸ ವ್ಯಕ್ತಪಡಿಸಿದ್ರು. ಇನ್ನು ಹೋರಿ ಬೆದರಿಸೋ ಸ್ಪರ್ಧೆಯಲ್ಲಿ ಚಿನ್ನ, ನಗದು, ಟಿವಿ, ಫ್ರಿಡ್ಜ್ ಸೇರಿದಂತೆ ಹಲವು ಬಹುಮಾನಗಳನ್ನ ಇಡಲಾಗಿತ್ತು. ಚೆನ್ನಾಗಿ ಓಡಿದ ಹೋರಿ, ಸುಂದರವಾಗಿ ಅಲಂಕೃತಗೊಂಡ ಹೋರಿ ಹಾಗೂ ಪೈಲ್ವಾನರ ಕೈಗೆ ಸಿಗದ ಹೋರಿ.. ಹೀಗೆ ವಿವಿಧ ಹಂತಗಳಲ್ಲಿ ಬಹುಮಾನ ನೀಡಲಾಯ್ತು.

ಹಾವೇರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ವು. ತಮ್ಮ ಹೋರಿಗಳ ತಾಕತ್ತು ನೋಡಿ ಮಾಲೀಕರು ಕೂಡ ಖುಷಿಪಟ್ರು. ಒಟ್ನಲ್ಲಿ, ಹೋರಿ ಬೆದರಿಸೋ ಸ್ಪರ್ಧೆಗೆ ಜನಸಾಗರವೇ ನೆರೆದಿತ್ತು. ಹಳ್ಳಿ ಜನರ ಪಾಲಿಗೆ ಖುಷಿಯ ರಸದೌತಣವನ್ನೇ ಬಡಿಸಿತ್ತು.

ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ
ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ
ಮೊಬೈಲ್ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಮಹಿಳೆ
ಮೊಬೈಲ್ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಮಹಿಳೆ