AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್​ ಸಿಟಿಯಲ್ಲಿ BMTC ಬಸ್​ಗಳ ಮೇಲೆ ಕಲ್ಲು ತೂರಾಟ

ಹೊಸೂರು ರಸ್ತೆಯ ಹಳೆ ಚಂದಾಪುರ ಬಳಿ ಬಿಎಂಟಿಸಿ ಬಸ್​ ಮೇಲೆ ಕಲ್ಲು ತೂರಾಟ ನಡೆದಿದೆ. ಡಿಪೋ ನಂಬರ್ 32ಕ್ಕೆ ಸೇರಿದ ರೂಟ್ ನಂಬರ್ 600ರ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಬಸ್​ನ ಹಿಂಬದಿಯ ಗಾಜು ಹಾಗೂ ಸೈಡ್ ಮಿರರ್ ಪುಡಿ ಪುಡಿಯಾಗಿದೆ.

ಸಿಲಿಕಾನ್​ ಸಿಟಿಯಲ್ಲಿ BMTC ಬಸ್​ಗಳ ಮೇಲೆ ಕಲ್ಲು ತೂರಾಟ
BMTC ಬಸ್​ ಮೇಲೆ ಕಲ್ಲು ತೂರಾಟ
KUSHAL V
| Updated By: ganapathi bhat|

Updated on:Dec 05, 2020 | 10:41 AM

Share

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕರ್ನಾಟಕ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಬೃಹತ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ.

ಈ ನಡುವೆ, ಹೊಸೂರು ರಸ್ತೆಯ ಹಳೆ ಚಂದಾಪುರ ಬಳಿ ಬಿಎಂಟಿಸಿ ಬಸ್​ ಮೇಲೆ ಕಲ್ಲು ತೂರಾಟ ನಡೆದಿದೆ. ಡಿಪೋ ನಂಬರ್ 32ಕ್ಕೆ ಸೇರಿದ ರೂಟ್ ನಂಬರ್ 600ರ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಬಸ್​ನ ಹಿಂಬದಿಯ ಗಾಜು ಹಾಗೂ ಸೈಡ್ ಮಿರರ್ ಪುಡಿ ಪುಡಿಯಾಗಿದೆ.

ಇತ್ತ, ನಗರದ ಪೈ ಲೇಔಟ್​ನಲ್ಲಿ ಸಹ ಬಿಎಂಟಿಸಿ ಬಸ್​ ಮೇಲೆ ಕಲ್ಲುತೂರಾಟ ನಡೆದಿದೆ. ಕೆ.ಆರ್​.ಪುರಂನ ಪೈ ಲೇಔಟ್​ನಲ್ಲಿ ಘಟನೆ ನಡೆದಿದೆ.

Published On - 7:43 am, Sat, 5 December 20