ಸಂಪರ್ಕಕ್ಕೆ ಸಿಗುತ್ತಿಲ್ಲ 2 ಸಾವಿರ BMTC ಸಿಬ್ಬಂದಿ.. ಶಿಸ್ತು ಕ್ರಮ ಕೈಗೊಳ್ಳಲು ನಿಗಮಾ ನಿರ್ಧಾರ

BMTC ಮಹಾಮಾರಿ ಕೊರೊನಾ ಬಳಿಕ BMTCಯಲ್ಲಿ ಸುಮಾರು 2 ಸಾವಿರ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಇಲಾಖೆಗೆ ಮಾಹಿತಿ ನೀಡದೆ ರಜೆಗೆ ಸೂಕ್ತ ಕಾರಣವೂ ತಿಳಿಸದೆ ಸಂಪರ್ಕದಿಂದ ದೂರ ಉಳಿದಿದ್ದಾರೆ. ಹಾಗಾಗಿ BMTC ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಿದೆ.

ಸಂಪರ್ಕಕ್ಕೆ ಸಿಗುತ್ತಿಲ್ಲ 2 ಸಾವಿರ BMTC ಸಿಬ್ಬಂದಿ.. ಶಿಸ್ತು ಕ್ರಮ ಕೈಗೊಳ್ಳಲು ನಿಗಮಾ ನಿರ್ಧಾರ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು

Updated on: Feb 05, 2021 | 8:09 AM

ಬೆಂಗಳೂರು: ಮಹಾಮಾರಿ ಕೊರೊನಾ ಬಳಿಕ BMTCಯಲ್ಲಿ ಸುಮಾರು 2 ಸಾವಿರ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಇಲಾಖೆಗೆ ಮಾಹಿತಿ ನೀಡದೆ ರಜೆಗೆ ಸೂಕ್ತ ಕಾರಣವೂ ತಿಳಿಸದೆ ಸಂಪರ್ಕದಿಂದ ದೂರ ಉಳಿದಿದ್ದಾರೆ. ಹಾಗಾಗಿ BMTC ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಿದೆ. ಇಲಾಖೆ ನಿರ್ಧಾರಕ್ಕೆ ಸಿಬ್ಬಂದಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. KSRTCಕೊವಿಡ್ ವೇಳೆ ರಜೆ ಕೊಡುವ ಪದ್ಧತಿಯನ್ನ ತಂದಿತ್ತು. ರಜೆ ಬಯಸುವ ಸಿಬ್ಬಂದಿ ವೇತನ ರಹಿತ ರಜೆ ಪಡೆಯಬಹುದು ಎಂದು ಕೊರೊನಾ ಸಮಯದಲ್ಲಿ ನಿಯಮವೊಂದನ್ನು ಜಾರಿಗೆ ತಂದಿತ್ತು. ಆದ್ರೆ ಬಿಎಂಟಿಸಿಯಲ್ಲಿ ಈ ರೀತಿಯ ಯಾವುದೇ ನಿಯಮ ಇಲ್ಲ. ಆದರೂ ಕಾರಣ ನೀಡದೆ 2 ಸಾವಿರ ಸಿಬ್ಬಂದಿ ರಜೆ ಹಾಕಿದ್ದಾರೆ.

ಇಷ್ಟು ದಿನ ರಜೆಯಲ್ಲಿರುವ ಸಿಬ್ಬಂದಿಗೆ BMTC ಕಾದು ನೋಡಿತ್ತು. ಆದ್ರೆ ಅವರ ಸುಳಿವು ಇಲ್ಲದ ಕಾರಣ ಈಗ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಕೊವಿಡ್ ಬಳಿಕ ಬಿಎಂಟಿಸಿಯ 6500 ಬಸ್‌ಗಳ ಪೈಕಿ ಕೇವಲ 4500ಸಾವಿರ ಬಸ್‌ಗಳು ಸಂಚಾರ ಆರಂಭಿಸಿದ್ವು. ಈಗ ಬಸ್‌ಗಳ ಸಂಚಾರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಸಂಪರ್ಕಿಸಲು ಬಿಬಿಎಂಪಿಯಿಂದ ನಿರಂತರ ಪ್ರಯತ್ನ ನಡೆಯುತ್ತಿದೆ.

ಕೆಲವರು ಸಂಪರ್ಕಕ್ಕೆ ಸಿಗುತ್ತಿಲ್ಲ
ಇದರಲ್ಲಿ ಕೆಲವು ಸಿಬ್ಬಂದಿ ಇನ್ನೂ ಬಿಎಂಟಿಸಿಯ ಸಂಪರ್ಕಕ್ಕೆ ಸಿಗುತ್ತಿಲ್ಲ. ರಜೆ ಹಾಕುತ್ತಿರುವುದಕ್ಕೆ ಸೂಕ್ತ ಕಾರಣವನ್ನೂ ನೀಡಿಲ್ಲ. ಹೀಗಾಗಿ ನಿಗಮ, ಅವರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ. ಆದ್ರೆ ಬಿಎಂಟಿಸಿ ನಿರ್ಧಾರವನ್ನು ಸಿಬ್ಬಂದಿ ತೀವ್ರವಾಗಿ ಖಂಡಿಸಿದ್ದಾರೆ. ಈಗಾಗಲೇ ಕೆಲಸಕ್ಕೆ ಹಾಜರಾಗುತ್ತಿರುವವರಿಗೆ ಡ್ಯೂಟಿ ಸಿಗುತ್ತಿಲ್ಲ. ಸಿಬ್ಬಂದಿ ರಜೆ ಕಟ್ ಮಾಡಿಕೊಂಡು ವೇತನವಿಲ್ಲದೆ ಕಳಿಸ್ತಿದ್ದಾರೆ. ಈಗಾಗಲೇ ಬಿಎಂಟಿಸಿ ನೌಕರರ ಎಲ್ಲ ರಜೆಗಳು ಖಾಲಿಯಾಗಿವೆ. ಇಂದು ಬಿಎಂಟಿಸಿ ಅಧಃಪತನವೆಂದು ಸಾರಿಗೆ ಮುಖಂಡರು ಕಿಡಿ ಕಾರಿದ್ದಾರೆ.

ನೌಕರರ ಸಂಬಳಕ್ಕಾಗಿ ಸಾಲಮಾಡಲು ಹೊರಟಿರುವ BMTC; 643 ಹೊಸ ಬಸ್ ಖರೀದಿಗೆ ಟೆಂಡರ್

Loading...
Unable to load recommendations.
Follow Us