AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ತ ವಿವಾಹ, ಇತ್ತ ವೃತ್ತಿ: ಧಾರೆ ಸೀರೆಯಲ್ಲೇ ಪರೀಕ್ಷೆಗೆ ಹಾಜರಾದ ಮದುಮಗಳು!

ಕೊಡಗು: ಪರೀಕ್ಷೆ ಹತ್ತಿರ ಬಂತು ಅಂದ್ರೆ ಕಣ್ಣಿಗೆ ಎಣ್ಣೆ ಬಿಟ್ಕೊಂಡು, ಊಟ, ನಿದ್ದೆ ತೊರೆದು ಎಕ್ಸಾಂಗೆ ತಯಾರಾಗೋರೇ ಜಾಸ್ತಿ. ಮನೆಯಲ್ಲಿ ಫಂಕ್ಷನ್ ಇತ್ತು ಅಂದ್ರೆ ಡಿಸ್ಟರ್ಬ್​ ಆಗುತ್ತೆ ಅಂತಾ ಹಾಸ್ಟಲ್, ಪಿಜಿ ಅಥವಾ ಫ್ರೆಂಡ್ಸ್ ರೂಮ್ ಅಂತಾ ಹೋಗಿ ಓದೋ ವಿದ್ಯಾರ್ಥಿಗಳನ್ನೂ ಸಹ ನೋಡಿರ್ತೀರಿ. ಆದರೆ, ಯುವತಿಯೊಬ್ಬಳು ತನ್ನ ವಿವಾಹ ದಿನದಂದೇ ಧಾರೆ ಸೀರೆಯಲ್ಲೇ ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಜಿಲ್ಲೆಯ ಮಡಿಕೇರಿ ಪಟ್ಟಣದ ಅಶೋಕಪುರ ಬಡವಾಣೆಯ ನಿವಾಸಿ ಸ್ವಾತಿ ತನ್ನ ಮದುವೆ ಮುಗಿಸಿಕೊಂಡು […]

ಅತ್ತ ವಿವಾಹ, ಇತ್ತ ವೃತ್ತಿ: ಧಾರೆ ಸೀರೆಯಲ್ಲೇ ಪರೀಕ್ಷೆಗೆ ಹಾಜರಾದ ಮದುಮಗಳು!
KUSHAL V
|

Updated on: Nov 22, 2020 | 3:36 PM

Share

ಕೊಡಗು: ಪರೀಕ್ಷೆ ಹತ್ತಿರ ಬಂತು ಅಂದ್ರೆ ಕಣ್ಣಿಗೆ ಎಣ್ಣೆ ಬಿಟ್ಕೊಂಡು, ಊಟ, ನಿದ್ದೆ ತೊರೆದು ಎಕ್ಸಾಂಗೆ ತಯಾರಾಗೋರೇ ಜಾಸ್ತಿ. ಮನೆಯಲ್ಲಿ ಫಂಕ್ಷನ್ ಇತ್ತು ಅಂದ್ರೆ ಡಿಸ್ಟರ್ಬ್​ ಆಗುತ್ತೆ ಅಂತಾ ಹಾಸ್ಟಲ್, ಪಿಜಿ ಅಥವಾ ಫ್ರೆಂಡ್ಸ್ ರೂಮ್ ಅಂತಾ ಹೋಗಿ ಓದೋ ವಿದ್ಯಾರ್ಥಿಗಳನ್ನೂ ಸಹ ನೋಡಿರ್ತೀರಿ. ಆದರೆ, ಯುವತಿಯೊಬ್ಬಳು ತನ್ನ ವಿವಾಹ ದಿನದಂದೇ ಧಾರೆ ಸೀರೆಯಲ್ಲೇ ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಜಿಲ್ಲೆಯ ಮಡಿಕೇರಿ ಪಟ್ಟಣದ ಅಶೋಕಪುರ ಬಡವಾಣೆಯ ನಿವಾಸಿ ಸ್ವಾತಿ ತನ್ನ ಮದುವೆ ಮುಗಿಸಿಕೊಂಡು ಸೀದಾ ಹಾಜರಾಗಿದ್ದು ತನ್ನ ಪರೀಕ್ಷಾ ಕೊಠಡಿಗೆ. ನವವಧು ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಹ್ವಾನಿಸಿದ್ದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆಕೆಯ ವಿವಾಹದ ದಿನದಂದೇ ಪರೀಕ್ಷೆಯೂ ನಿಗದಿಯಾಗಿತ್ತು. ಅತ್ತ ಮದುವೆಯನ್ನ ಮುಂದಕ್ಕೆ ಹಾಕುವಂತಿಲ್ಲ, ಇತ್ತ ಪರೀಕ್ಷೆಯನ್ನೂ ಬಿಡುವಂತಿಲ್ಲ ಎಂಬ ಪರಿಸ್ಥಿತಿ ಸ್ವಾತಿಗೆ ಎದುರಾಯ್ತು. ಆದರೂ, ಯುವತಿ ಧೃತಿಗೆಡದೆ ಎರಡನ್ನೂ ಯಾವುದೇ ಪ್ರಯಾಸವಿಲ್ಲದೆ ನಿಭಾಯಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ನಿವಾಸಿ ಸುರೇಶ್ ಎಂಬುವವರನ್ನು ವರಿಸಿರುವ ಸ್ವಾತಿ ಮದುವೆಯ ದಿನ ಮುಂಜಾನೆ 6 ರಿಂದ 9 ಗಂಟೆಯ ಒಳಗೆ ಮದುವೆ ಶಾಸ್ತ್ರಗಳನ್ನು ಮುಗಿಸಿಕೊಂಡಿದ್ದಾರೆ. ನಂತರ ಮಡಿಕೇರಿ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಧಾರೆ ಸೀರೆಯಲ್ಲೇ ಆಗಮಿಸಿ ಪರೀಕ್ಷೆ ಬರೆದಿದ್ದಾರೆ. ಸ್ವಾತಿಯ ಶ್ರದ್ಧೆಯನ್ನು ನೋಡಿದ ಸ್ಥಳೀಯರು ಭೇಷ್ ಎಂದಿದ್ದು ಯುವತಿ ದಾಂಪತ್ಯ ಜೀವನ ಹಾಗೂ ವೃತ್ತಿ ಜೀವನ ಎರಡರಲ್ಲೂ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ