ವಾರದ ಹಿಂದಷ್ಟೇ ಕೊರೊನಾ ಗೆದ್ದಿದ್ದ ಕೊಪ್ಪಳದ ಶತಾಯುಷಿ ಅಜ್ಜಿ ವಿಧಿವಶ

ಕೊಪ್ಪಳ: ಕೊರೊನಾ ಮಹಾಮಾರಿಯನ್ನೇ ಬಗ್ಗುಬಡಿದು ಗೆದ್ದಿದ್ದ ಶತಾಯುಷಿ ವೃದ್ಧೆಯೊಬ್ಬರು ಇಂದು ಕೊನೆಯುಸಿರೆಳೆದಿದ್ದಾರೆ. ಜಿಲ್ಲೆಯ ಕಾತರಕಿ-ಗುಡ್ಲಾನೂರ್ ಗ್ರಾಮದ ಶತಾಯುಷಿ ವೃದ್ಧೆ ಕಮಲಮ್ಮ ಹಿರೇಗೌಡ್ರು (105) ಇಂದು ಅಸುನೀಗಿದರು. ಕಳೆದ ವಾರವಷ್ಟೇ ಕೊರೊನಾದಿಂದ ಗುಣಮುಖವಾಗಿದ್ದ ಶತಾಯುಷಿ ಕಮಲಮ್ಮನವರಿಗೆ ಸಪ್ಟೆಂಬರ್ 4 ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ನಂತರ, ಸಪ್ಟೆಂಬರ್ 11ರಂದು ಕಮಲಮ್ಮರಿಗೆ ನೆಗಟಿವ್ ವರದಿಯಾಗಿತ್ತು. ಆದರೆ, ಕೊರೊನಾ ವರದಿ ನೆಗಟಿವ್ ಬಂದ 8 ದಿನಗಳಲ್ಲೇ ಕಮಲಮ್ಮ ನಿಧನ ಹೊಂದಿದ್ದಾರೆ.

ವಾರದ ಹಿಂದಷ್ಟೇ ಕೊರೊನಾ ಗೆದ್ದಿದ್ದ ಕೊಪ್ಪಳದ ಶತಾಯುಷಿ ಅಜ್ಜಿ ವಿಧಿವಶ
Updated By: ಸಾಧು ಶ್ರೀನಾಥ್​

Updated on: Sep 19, 2020 | 12:32 PM

ಕೊಪ್ಪಳ: ಕೊರೊನಾ ಮಹಾಮಾರಿಯನ್ನೇ ಬಗ್ಗುಬಡಿದು ಗೆದ್ದಿದ್ದ ಶತಾಯುಷಿ ವೃದ್ಧೆಯೊಬ್ಬರು ಇಂದು ಕೊನೆಯುಸಿರೆಳೆದಿದ್ದಾರೆ. ಜಿಲ್ಲೆಯ ಕಾತರಕಿ-ಗುಡ್ಲಾನೂರ್ ಗ್ರಾಮದ ಶತಾಯುಷಿ ವೃದ್ಧೆ ಕಮಲಮ್ಮ ಹಿರೇಗೌಡ್ರು (105) ಇಂದು ಅಸುನೀಗಿದರು.

ಕಳೆದ ವಾರವಷ್ಟೇ ಕೊರೊನಾದಿಂದ ಗುಣಮುಖವಾಗಿದ್ದ ಶತಾಯುಷಿ ಕಮಲಮ್ಮನವರಿಗೆ ಸಪ್ಟೆಂಬರ್ 4 ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ನಂತರ, ಸಪ್ಟೆಂಬರ್ 11ರಂದು ಕಮಲಮ್ಮರಿಗೆ ನೆಗಟಿವ್ ವರದಿಯಾಗಿತ್ತು. ಆದರೆ, ಕೊರೊನಾ ವರದಿ ನೆಗಟಿವ್ ಬಂದ 8 ದಿನಗಳಲ್ಲೇ ಕಮಲಮ್ಮ ನಿಧನ ಹೊಂದಿದ್ದಾರೆ.