ಕೇವಲ 58 ನಿಮಿಷದಲ್ಲಿ 46 ವಿಧದ ಭಕ್ಷ್ಯಗಳ ತಯಾರಿಸಿ, ವಿಶ್ವ ದಾಖಲೆ ಸೃಷ್ಟಿಸಿದ ತಮಿಳುನಾಡಿನ ಬಾಲಕಿ!

58 ನಿಮಿಷಗಳಲ್ಲಿ 46 ವಿಧದ ಅಡುಗೆಯನ್ನು ಮಾಡಿ ವಿಶ್ವ ದಾಖಲೆ ಸೃಷ್ಟಿಸಿದ ತಮಿಳುನಾಡಿನ ಯುವತಿ ಲಕ್ಷ್ಮಿ

ಕೇವಲ 58 ನಿಮಿಷದಲ್ಲಿ 46 ವಿಧದ ಭಕ್ಷ್ಯಗಳ ತಯಾರಿಸಿ, ವಿಶ್ವ ದಾಖಲೆ ಸೃಷ್ಟಿಸಿದ ತಮಿಳುನಾಡಿನ ಬಾಲಕಿ!
ಕುವರಿ ಲಕ್ಷ್ಮಿ
Follow us
| Updated By: ಸಾಧು ಶ್ರೀನಾಥ್​

Updated on:Dec 16, 2020 | 4:34 PM

ಚೆನ್ನೈ: ತಮಿಳುನಾಡಿನ ಎಸ್.​ಎನ್. ಲಕ್ಷ್ಮಿ ಸಾಯಿ ಶ್ರೀ ಎಂಬ ಬಾಲಕಿ 58 ನಿಮಿಷದಲ್ಲಿ 46 ವಿಧದ ಅಡುಗೆಯನ್ನು ಮಾಡಿ ಯುನಿಕೋ ಬುಕ್ ಆಫ್ ವರ್ಲ್ಡ್​​ ರೆಕಾರ್ಡ್​ನಲ್ಲಿ(UNICO) ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.

‘ನಾನು ಅಡುಗೆ ಕಲಿತಿದ್ದು ನನ್ನ ಅಮ್ಮನಿಂದ. ಅಡುಗೆಯ ಬಗ್ಗೆ ಆಸಕ್ತಿ ಹುಟ್ಟಲು ಕಾರಣರಾದದ್ದು ನನ್ನ ಅಮ್ಮ. ಈ ಸಾಧನೆಯಿಂದ ನನಗೆ ತುಂಬಾ ಖುಷಿಯಿದೆ ’ ಎಂದು ಬಾಲಕಿ ಲಕ್ಷ್ಮಿ ಹೇಳಿದ್ದಾಳೆ.

‘ಲಕ್ಷ್ಮಿ ಲಾಕ್​ಡೌನ್ ಸಮಯದಲ್ಲಿ ಅಡುಗೆ ಮಾಡಲು ಪ್ರಾರಂಭಿಸಿದಳು. ನಾನು ತಮಿಳುನಾಡಿದ ವಿವಿಧ ಅಡುಗೆಗಳನ್ನು ಮಾಡುತ್ತಿದ್ದೆ. ಲಾಕ್​ಡೌನ್ ಸಮಯವಾದ್ದರಿಂದ ಅಡುಗೆ ಮನೆಯಲ್ಲಿ ನನ್ನೊಡನೆ ಮಗಳು ಲಕ್ಷ್ಮಿ ಕೈ ಜೋಡಿಸುತ್ತಿದ್ದಳು. ನಾನು ನನ್ನ ಪತಿಯೊಡನೆ ಮಗಳ ಇಷ್ಟಗಳನ್ನು ಹಂಚಿಕೊಳ್ಳುತ್ತಿದ್ದೆ. ಈ ಸ್ಪರ್ಧೆಗೆ ಭಾಗವಹಿಸಲು ನನ್ನ ಪತಿ ಸಲಹೆ ನೀಡಿದರು’ ಎಂದು ಲಕ್ಷ್ಮಿ ತಾಯಿ ಎನ್. ಕಲೈಮಗಳ್ ಹೇಳಿದ್ದಾರೆ.

ಲಕ್ಷ್ಮಿ ಕೆಲಸದಲ್ಲಿ ನಿಪುಣಳು. ಅವಳ ತಂದೆ ವಿಶ್ವ ದಾಖಲೆಗೆ ಸ್ಪರ್ಧಿಸಲು ಸಲಹೆ ನೀಡಿದರು. ಏಕೆಂದರೆ, ಕೇರಳದ 10 ವರ್ಷದ ಕುವರಿ ಸಾನ್ವಿ ಎಂಬುವವಳು 30 ವಿಧದ ಅಡುಗೆಗಳನ್ನು ಮಾಡಿ ವಿಶ್ವ ದಾಖಲೆ ಪಡೆದಿದ್ದಳು. ಇವಳನ್ನು ಮೀರಿಸುವ ಸ್ಪರ್ಧೆಯನ್ನು ನೀನು ದಾಖಲಿಸಬೇಕು ಎಂದು ಲಕ್ಷ್ಮಿಗೆ ಅವರ ತಂದೆ ಪ್ರೊತ್ಸಾಹಿಸಿದ್ದರು ಎಂದು ಹೇಳಿದ್ದಾರೆ.

Published On - 2:54 pm, Wed, 16 December 20

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ