ರಾಯಚೂರು: ಬಸ್ ಓಡಿಸುವಾಗಲೇ ಚಾಲಕನಿಗೆ ಹೃದಯಾಘಾತ, ಸಾವು; ವಾಹನ ನೆಲಕ್ಕುರುಳಿ 14 ಜನರಿಗೆ ಗಾಯ
ಬಸ್ ಓಡಿಸುತ್ತಿದ್ದ ಚಾಲಕ ಶ್ರೀನಿವಾಸ್ ಕೈಯಲ್ಲಿ ಸ್ಟೀಯರಿಂಗ್ ಹಿಡಿದಿರುವಾಗಲೇ ಹೃದಯಾಘಾತಕ್ಕೊಳಗಾಗಿ ದುರದೃಷ್ಟವಶಾತ್ ಬಸ್ಸಿನಲ್ಲೇ ಮರಣಹೊಂದಿದ್ದಾರೆ.
ರಾಯಚೂರು: ಇದು ದುರಂತವಲ್ಲದೆ ಮತ್ತೇನೂ ಅಲ್ಲ. ರಾಯಚೂರಿನಿಂದ ಬೆಳಗಾವಿಗೆ (Belagavi) ಹೊರಟಿದ್ದ ರಾಜಹಂಸ ಬಸ್ಸೊಂದು ಲಿಂಗಸೂಗೂರಿನ ಚಿಕ್ಕಹೆಸರೂರು ಗ್ರಾಮದ ಬಳಿ ರಸ್ತೆ ಬದಿ ನೆಲಕ್ಕುರುಳಿರುವುದನ್ನು ಚಿತ್ರದಲ್ಲಿ ನೋಡಬಹುದು. ಬಸ್ ಪಲ್ಟಿ ಹೊಡೆದಿದ್ದು ಯಾಕೆ ಗೊತ್ತಾ? ಅದನ್ನು ಓಡಿಸುತ್ತಿದ್ದ ಚಾಲಕ ಶ್ರೀನಿವಾಸ್ (Srinivas) ಕೈಯಲ್ಲಿ ಸ್ಟೀಯರಿಂಗ್ ಹಿಡಿದಿರುವಾಗಲೇ ಹೃದಯಾಘಾತಕ್ಕೊಳಗಾಗಿ (heart attack) ದುರದೃಷ್ಟವಶಾತ್ ಬಸ್ಸಿನಲ್ಲೇ ಮರಣಹೊಂದಿದ್ದಾರೆ. ಬಸ್ ಅವರ ನಿಯಂತ್ರಣ ತಪ್ಪಿದ್ದರಿಂದ ರಸ್ತೆ ಬಿಟ್ಟು ಪಕ್ಕದ ಜಮೀನೊಂದಕ್ಕೆ ನುಗ್ಗಿ ಉರುಳಿಬಿದ್ದಿದೆ. ಬಸ್ಸಲ್ಲಿದ್ದ ಪ್ರಯಾಣಿಕರ ಪೈಕಿ 14 ಜನ ಗಾಯಗೊಂಡಿದ್ದು ಅವರನ್ನು ಲಿಂಗಸೂಗೂರು ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.
Published on: Oct 24, 2022 02:32 PM
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

