AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿನಾಡಲ್ಲಿ ಪಕ್ಷಿ ಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಬೆಳ್ಳಕ್ಕಿಗಳ ವೈಯ್ಯಾರ..!

ಚಳಿಗಾಲದಲ್ಲಿ ಬೆಳ್ಳಕ್ಕಿಗಳಿಗೆ ಕಾಫಿನಾಡು ಒಂಥರಾ ಹಾಟ್‌ ಫೇವರಿಟ್ ಸ್ಫಾಟ್‌.. ಅದ್ರಲ್ಲೂ ಭದ್ರಾ ನದಿ ತೀರದ ಕೆಲವೊಂದು ಸ್ಥಳಗಳಲ್ಲಿ ಬೆಳ್ಳಕ್ಕಿಗಳು ವಾಸಿಸುತ್ತಾ ಪಕ್ಷಿಪ್ರಿಯರಿಗೆ ಸಖತ್‌ ಮನರಂಜನೆ ನೀಡ್ತಿವೆ.

ಕಾಫಿನಾಡಲ್ಲಿ ಪಕ್ಷಿ ಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಬೆಳ್ಳಕ್ಕಿಗಳ ವೈಯ್ಯಾರ..!
ಬೆಳ್ಳಕ್ಕಿಗಳ ವೈಯ್ಯಾರ
ಪೃಥ್ವಿಶಂಕರ
|

Updated on:Jan 31, 2021 | 7:48 AM

Share

ಚಿಕ್ಕಮಗಳೂರು: ಹಕ್ಕಿಗಳನ್ನ ನೋಡಿದ್ರೆ ಯಾರಿಗೆ ತಾನೆ ಖುಷಿಯಾಗಲ್ಲ ಹೇಳಿ.. ಹಕ್ಕಿಗಳ ಹಾಗೆ ಸ್ವಚ್ಛಂದವಾಗಿ ಹಾರಾಡಬೇಕು ಅಂತ ಎಷ್ಟೋ ಬಾರಿ ಅಂದುಕೊಂಡಿರುತ್ತೇವೆ. ಆದ್ರೆ ವಾಸ್ತವವಾಗಿ ಅದು ಸಾಧ್ಯವಾಗಲ್ಲ ಆದ್ರೂ ಕೂಡ ಮನಸ್ಸಿನಲ್ಲಿ ಆ ರೀತಿಯ ಒಂದು ಯೋಜನೆ ಬರದೇ ಇರದು. ಯೆಸ್.. ಸದ್ಯ ಕಾಫಿನಾಡಿನಲ್ಲಿ ಬೆಳ್ಳಕ್ಕಿಗಳು ಸೃಷ್ಟಿಸಿರೋ ವೈಯ್ಯಾರ ನಿಜಕ್ಕೂ ಪಕ್ಷಿ ಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಹೌದು.. ಸದ್ಯ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇದೀಗ ಹಕ್ಕಿಗಳ ಚಿಲಿಪಿಲಿಗಳದ್ದೇ ಸದ್ದು.. ಚಳಿಗಾಲದಲ್ಲಿ ಬೆಳ್ಳಕ್ಕಿಗಳಿಗೆ ಕಾಫಿನಾಡು ಒಂಥರಾ ಹಾಟ್‌ ಫೇವರಿಟ್ ಸ್ಫಾಟ್‌.. ಅದ್ರಲ್ಲೂ ಭದ್ರಾ ನದಿ ತೀರದ ಕೆಲವೊಂದು ಸ್ಥಳಗಳಲ್ಲಿ ಬೆಳ್ಳಕ್ಕಿಗಳು ವಾಸಿಸುತ್ತಾ ಪಕ್ಷಿಪ್ರಿಯರಿಗೆ ಸಖತ್‌ ಮನರಂಜನೆ ನೀಡ್ತಿವೆ. ಇದು ಚಿಕ್ಕಮಗಳೂರು ತಾಲೂಕಿನ ಖಾಂಡ್ಯಾ ಸಮೀಪದ ಭದ್ರಾ ನದಿಯಲ್ಲಿ ಕಂಡು ಬರ್ತಿರೋ ನಯನಮನೋಹರ ದೃಶ್ಯ. ಚಳಿಗಾಲದ ಸಮಯಕ್ಕೆ ಈ ಸ್ಥಳಗಳಿಗೆ ಆಗಮಿಸೋ ಹಕ್ಕಿಗಳು.. ಕ್ರಮೇಣ ಬೇಸಿಗೆ ಕಾಲ ಬರೋ ಸಮಯಕ್ಕೆ ಬೇರೆ ಕಡೆ ವಲಸೆ ಹೋಗಿರುತ್ವೆ.

ಸಂಜೆಯಾಗುತ್ತಲೇ ಮರಗಳ ಮೇಲೇರುತ್ತವೆ.. ಹಸಿರ ಕಾನನದಲ್ಲಿ ಬಿಳಿ ಚುಕ್ಕಿ ಇಟ್ಟಂತೆ ಬಾಸವಾಗ್ತಿರೋ ಬೆಳ್ಳಕ್ಕಿಗಳ ನೋಟ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸುತ್ತಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ಸುತ್ತಮುತ್ತಲ ಭತ್ತದಗದ್ದೆ, ಹಳ್ಳ ಕೊಳ್ಳಗಳಲ್ಲಿ ಮೀನು, ಸಣ್ಣ ಪುಟ್ಟ ಕೀಟಗಳನ್ನ ತಿಂದು ಸಂಜೆಯಾಗುತ್ತಲೇ ಮರಗಳ ಮೇಲೇರಿ ಸಾವಿರಾರು ಬೆಳ್ಳಕ್ಕಿಗಳು ಆಶ್ರಯ ಪಡೆಯುತ್ತಿವೆ.

ಇನ್ನು ಮುಸ್ಸಂಜೆಯಲ್ಲಿ ರವಿ ಮೆಲ್ಲಗೆ ಮರೆಯಾಗ್ತಿದ್ದಂತೆ ಬೆಳ್ಳಕ್ಕಿಗಳ ಬಳಗ ಎಲ್ಲೇ ಇದ್ರೂ ಇದೇ ಮರಗಳನ್ನ ಹುಡುಕಿಕೊಂಡು ಬರೋದು ವಿಶೇಷ. ಒಮ್ಮಲೆ ಸಾವಿರಾರು ಬೆಳ್ಳಕ್ಕಿಗಳು ಕಣ್ಣಿಗೆ ಹಬ್ಬದೂಟ ಬಡಿಸುತ್ತವೆ. ಒಟ್ನಲ್ಲಿ ಚಳಿಗಾಲದ ಸಂದರ್ಭದಲ್ಲಿ ಭದ್ರಾ ನದಿ ತೀರದಲ್ಲಿ ಬೆಳ್ಳಕ್ಕಿಗಳ ಸಾಲು.. ಮರಗಳ ಕೊಂಬೆಗಳ ಮೇಲೆ ಕುಳಿತು ಅವುಗಳು ರಿಲಾಕ್ಸ್ ಮಾಡೋ ಪರಿ ನಿಜಕ್ಕೂ ಕಣ್ಣಿಗೆ ಹಬ್ಬವೇ ಸರಿ.

ನಾಗರಹೊಳೆಯಲ್ಲಿ 6 ಹೊಸ ಜಾತಿಯ ಪಕ್ಷಿಗಳು ಪತ್ತೆ!

Published On - 7:47 am, Sun, 31 January 21

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್