ಕಾಫಿನಾಡಿನಲ್ಲಿ ರಾಜಾ ರೋಷವಾಗಿ ಓಡಾಡುತ್ತಿರುವ ಗಜಪಡೆ, ಆತಂಕದಲ್ಲಿ ಗ್ರಾಮಸ್ಥರು

ಚಿಕ್ಕಮಗಳೂರು: ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಜನಸಾಮಾನ್ಯರ ಓಡಾಟ ತೀರಾ ಕಡಿಮೆಯಾಗಿದೆ. ಹಾಗಾಗಿ ಕಾಫಿನಾಡು ಚಿಕ್ಕಮಗಳೂರಲ್ಲಿ ಕಾಡಾನೆಗಳು ನಿರ್ಭೀತಿಯಿಂದ ಓಡಾಟ ನಡೆಸುತ್ತಿವೆ. ಮೂಡಿಗೆರೆ ತಾಲೂಕಿನ ಬಾನಹಳ್ಳಿ ಸುತ್ತಮುತ್ತ ರಾಜಾ ರೋಷವಾಗಿ ಗಜಪಡೆ ಓಡಾಡುತ್ತಿವೆ. ಬಾನಹಳ್ಳಿ, ಭಾರತಿಭೈಲ್, ಬೆಳಗೋಡು ಸುತ್ತಮುತ್ತ ಎಸ್ಟೇಟ್​ಗಳಲ್ಲಿ ಬೆಳೆದಿರುವ ಕಾಫಿ ಗಿಡಗಳನ್ನು ಕಾಡಾನೆಗಳು ನಾಶ ಮಾಡುತ್ತಿವೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.

ಕಾಫಿನಾಡಿನಲ್ಲಿ ರಾಜಾ ರೋಷವಾಗಿ ಓಡಾಡುತ್ತಿರುವ ಗಜಪಡೆ, ಆತಂಕದಲ್ಲಿ ಗ್ರಾಮಸ್ಥರು

Updated on: May 17, 2020 | 2:08 PM

ಚಿಕ್ಕಮಗಳೂರು: ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಜನಸಾಮಾನ್ಯರ ಓಡಾಟ ತೀರಾ ಕಡಿಮೆಯಾಗಿದೆ. ಹಾಗಾಗಿ ಕಾಫಿನಾಡು ಚಿಕ್ಕಮಗಳೂರಲ್ಲಿ ಕಾಡಾನೆಗಳು ನಿರ್ಭೀತಿಯಿಂದ ಓಡಾಟ ನಡೆಸುತ್ತಿವೆ. ಮೂಡಿಗೆರೆ ತಾಲೂಕಿನ ಬಾನಹಳ್ಳಿ ಸುತ್ತಮುತ್ತ ರಾಜಾ ರೋಷವಾಗಿ ಗಜಪಡೆ ಓಡಾಡುತ್ತಿವೆ.

ಬಾನಹಳ್ಳಿ, ಭಾರತಿಭೈಲ್, ಬೆಳಗೋಡು ಸುತ್ತಮುತ್ತ ಎಸ್ಟೇಟ್​ಗಳಲ್ಲಿ ಬೆಳೆದಿರುವ ಕಾಫಿ ಗಿಡಗಳನ್ನು ಕಾಡಾನೆಗಳು ನಾಶ ಮಾಡುತ್ತಿವೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.