AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರ್ವಜನಿಕ ಪುಟಗಳಿಂದ ಲೈಕ್ ಬಟನ್ ತೆಗೆದುಹಾಕಿದ ಫೇಸ್​ಬುಕ್

ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ತಮ್ಮ ಹಿಂಬಾಲಕರು ಹಾಗೂ ಅಭಿಮಾನಿಗಳನ್ನು ತಲುಪಲು  ಫೇಸ್​ಬುಕ್ ಬಳಕೆ ಮಾಡುತ್ತಿದ್ದಾರೆ. ಫೇಸ್​ಬುಕ್​ ಪೇಜ್​ನಲ್ಲಿ ಈ ಮೊದಲು ಲೈಕ್  ಹಾಗೂ  ಫಾಲೋವಿಂಗ್​ ಆಯ್ಕೆ ಇತ್ತು. ಈಗ ಲೈಕ್​ ಬಟನ್​ ತೆಗೆಯಲು ಫೇಸ್​ಬುಕ್​ ನಿರ್ಧರಿಸಿದೆ. 

ಸಾರ್ವಜನಿಕ ಪುಟಗಳಿಂದ ಲೈಕ್ ಬಟನ್ ತೆಗೆದುಹಾಕಿದ ಫೇಸ್​ಬುಕ್
ಪ್ರಾತಿನಿಧಿಕ ಚಿತ್ರ
preethi shettigar
| Edited By: |

Updated on:Jan 08, 2021 | 5:56 PM

Share

 ಫೇಸ್​ಬುಕ್ ಸಾರ್ವಜನಿಕ ಪುಟಗಳನ್ನು (Public Pages) ಮರುವಿನ್ಯಾಸಗೊಳಿಸಿದೆ. ಇನ್ನು ಮುಂದೆ ಫೇಸ್​ಬುಕ್​ನ ಸಾರ್ವಜನಿಕ ಪುಟಗಳಲ್ಲಿ ಲೈಕ್ ಬಟನ್​ ಇರುವುದಿಲ್ಲ ಎಂದು ಫೇಸ್​ಬುಕ್​   ಬುಧವಾರ ತಿಳಿಸಿದೆ.

ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ತಮ್ಮ ಹಿಂಬಾಲಕರು ಹಾಗೂ ಅಭಿಮಾನಿಗಳನ್ನು ತಲುಪಲು  ಫೇಸ್​ಬುಕ್ ಬಳಕೆ ಮಾಡುತ್ತಿದ್ದಾರೆ. ಫೇಸ್​ಬುಕ್​ ಪೇಜ್​ನಲ್ಲಿ ಈ ಮೊದಲು ಲೈಕ್  ಹಾಗೂ  ಫಾಲೋವಿಂಗ್​ ಆಯ್ಕೆ ಇತ್ತು. ಈಗ ಲೈಕ್​ ಬಟನ್​ ತೆಗೆಯಲು ಫೇಸ್​ಬುಕ್​ ನಿರ್ಧರಿಸಿದೆ.  ಜನವರಿ 6ರಿಂದಲೇ ಈ ಹೊಸ ವಿನ್ಯಾಸ ಚಾಲ್ತಿಯಲ್ಲಿದೆ.

ತಮ್ಮ ಇಷ್ಟದ ಪೇಜ್ ಗಳನ್ನು ಜನರು ಸುಲಭವಾಗಿ ಸಂಪರ್ಕಿಸಲು  ನಾವು ಲೈಕ್ಸ್​ನ್ನು ತೆಗೆದುಹಾಕಿದ್ದು, ಫಾಲೋವರ್​ಗಳ ಬಗ್ಗೆ ಮಾತ್ರ ಕೇಂದ್ರೀಕರಿಸಿದ್ದೇವೆ ಎಂದು ಫೇಸ್ ಬುಕ್ ಹೇಳಿದೆ.

ಕೃಪೆ ಫೇಸ್​ಬುಕ್

ಇನ್ನುಮುಂದೆ ವೈಯಕ್ತಿಕ ಖಾತೆ ಹಾಗೂ ಪೇಜ್​ಗಳನ್ನು ಸುಲಭವಾಗಿ ಹುಡುಕಬಹುದು. ಹೊಸ ಅಡ್ಮಿನ್​ ಕಂಟ್ರೋಲ್​ ಮೂಲಕ ವಿಶ್ವಾಸಾರ್ಹ ಪುಟ ನಿರ್ವಹಣಾಕಾರರಿಗೆ ಸಂಪೂರ್ಣ ನಿಯಂತ್ರಣ ಅಥವಾ ಭಾಗಶಃ ನಿಯಂತ್ರಣ ಕೊಡಬಹುದು. ಇನ್​ಸೈಟ್​, ಜಾಹೀರಾತುಗಳು, ಸಮುದಾಯ ಚಟುವಟಿಕೆ ಮತ್ತು ಸಂದೇಶಗಳು ಸೇರಿದಂತೆ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಲು ವಿವಿಧ ಹಂತದ ಆ್ಯಕ್ಸೆಸ್​ ನೀಡಲು ಈಗ ನಿಮಗೆ ಸಾಧ್ಯವಾಗುತ್ತದೆ.

Facebook.. ಇನ್ನು ಹೊಸ ಅವತಾರದಲ್ಲಿ.. ಅತಿ ಶೀಘ್ರದಲ್ಲಿ!

Published On - 5:35 pm, Fri, 8 January 21

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್