ಗುಬ್ಬಚ್ಚಿ-ನಾಯಿಯ ಈ ಮೂಕ ಒಡನಾಟ ಕಂಡು ಮನೆಯವರಷ್ಟೇ ಅಲ್ಲ ಎಲ್ರೂ ಮೂಕವಿಸ್ಮಿತ!

ಮಂಡ್ಯ: ಶ್ವಾನವೊಂದು ಗುಬ್ಬಚ್ಚಿ ಮರಿಯ ಜೊತೆ ಆಟವಾಡಿ ಕಾಲ ಕಳೆಯುತ್ತಿರುವ ವಿಶಿಷ್ಟ ಪ್ರಸಂಗ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್​ನಲ್ಲಿ ನಡೆದಿದೆ. ಮೂಕ ತುಂಟಾಟ/ಒಡನಾಟ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್​ ನಿವಾಸಿಯಾಗಿರುವ ಜಯರಾಂ ಎಂಬುವರ ಮನೆಯಲ್ಲಿ ಹಲವು ದಿನಗಳಿಂದಲೂ ಗುಬ್ಬಚ್ಚಿ ಹಾಗೂ ಶ್ವಾನದ ನಡುವಿನ ತುಂಟಾಟ/ಒಡನಾಟವು ಮನೆಯವರಿಗೆ ಅಚ್ಚರಿ ಮೂಡಿಸಿವೆ. ಈಗ ಈ ಎರಡು ಮೂಕ ಜೀವಿಗಳು ತಮ್ಮ ತುಂಟಾಟದಿಂದ ಮನೆಯವರೊಂದಿಗೆ ಸಂಪೂರ್ಣ ಬೆರೆತು ಹೋಗಿವೆ. ಆಕಸ್ಮಿಕವಾಗಿ ಕೆಳಗೆ ಬಿದ್ದ ಗುಬ್ಬಚ್ಚಿ ಮರಿಯನ್ನು ಜಯರಾಂ ಕುಟುಂಬಸ್ಥರು ರಕ್ಷಿಸಿ ಪೋಷಣೆ […]

ಗುಬ್ಬಚ್ಚಿ-ನಾಯಿಯ ಈ ಮೂಕ ಒಡನಾಟ ಕಂಡು ಮನೆಯವರಷ್ಟೇ ಅಲ್ಲ ಎಲ್ರೂ ಮೂಕವಿಸ್ಮಿತ!
ಸಾಧು ಶ್ರೀನಾಥ್​

Updated on: Aug 31, 2020 | 11:34 AM

ಮಂಡ್ಯ: ಶ್ವಾನವೊಂದು ಗುಬ್ಬಚ್ಚಿ ಮರಿಯ ಜೊತೆ ಆಟವಾಡಿ ಕಾಲ ಕಳೆಯುತ್ತಿರುವ ವಿಶಿಷ್ಟ ಪ್ರಸಂಗ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್​ನಲ್ಲಿ ನಡೆದಿದೆ.

ಮೂಕ ತುಂಟಾಟ/ಒಡನಾಟ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್​ ನಿವಾಸಿಯಾಗಿರುವ ಜಯರಾಂ ಎಂಬುವರ ಮನೆಯಲ್ಲಿ ಹಲವು ದಿನಗಳಿಂದಲೂ ಗುಬ್ಬಚ್ಚಿ ಹಾಗೂ ಶ್ವಾನದ ನಡುವಿನ ತುಂಟಾಟ/ಒಡನಾಟವು ಮನೆಯವರಿಗೆ ಅಚ್ಚರಿ ಮೂಡಿಸಿವೆ. ಈಗ ಈ ಎರಡು ಮೂಕ ಜೀವಿಗಳು ತಮ್ಮ ತುಂಟಾಟದಿಂದ ಮನೆಯವರೊಂದಿಗೆ ಸಂಪೂರ್ಣ ಬೆರೆತು ಹೋಗಿವೆ.

ಆಕಸ್ಮಿಕವಾಗಿ ಕೆಳಗೆ ಬಿದ್ದ ಗುಬ್ಬಚ್ಚಿ ಮರಿಯನ್ನು ಜಯರಾಂ ಕುಟುಂಬಸ್ಥರು ರಕ್ಷಿಸಿ ಪೋಷಣೆ ಮಾಡಿದ್ದಾರೆ. ಈಗ ಆ ಗುಬ್ಬಚ್ಚಿ ಮರಿ ಮನೆಯವರೊಂದಿಗೆ, ಕುಟುಂಬ ಸದಸ್ಯನಂತೆ ಬೆರೆತಿದ್ದು, ಜಯರಾಂ ಮನೆಯಲ್ಲಿರುವ ಶ್ವಾನದೊಂದಿಗೆ ಸೇರಿ ತುಂಟಾಟವಾಡುತ್ತಿದೆ. ಈ ಎರಡೂ ಪ್ರಾಣಿಗಳ ಒಡನಾಟಕ್ಕೆ ಮನೆಯವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.


sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us