AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷವಾದ್ರೂ ಸಿಕ್ಕಿಲ್ಲ ಪರಿಹಾರ, ಮುರಿದು ಬಿದ್ದಿರುವ ಮನೆಯಲ್ಲೇ ಜೀವನ ಮಾಡ್ತಿದಾರೆ

ಬೆಳಗಾವಿ: ಎಲೆಕ್ಷನ್ ಬಂತು ಅಂದಾಗ ಮಾತ್ರ ಮನೆ ಬಳಿ ಬರುವ ರಾಜಕಾರಣಿಗಳು ಪ್ರವಾಹ ಬಂದು ಮನೆ ಬಿದ್ದಿದೆ ಅಂದ್ರೂ ಕೂಡ ತಲೆ ಕೆಡಿಸಿಕೊಳ್ಳೋದಿಲ್ಲ. ಕಳೆದೊಂದು ವರ್ಷದಿಂದ ಮುರಿದು ಬಿದ್ದಿರುವ ಮನೆಯಲ್ಲೇ ಇದೆ ಈ ರೈತ ಕುಟುಂಬ. ಆದ್ರೆ ಇದುವರೆಗೂ ಸರ್ಕಾರ ಇವರ ಬಗ್ಗೆ ಕನಿಕರವನ್ನೂ ತೋರಿಸಿಲ್ಲ. ಮಲಪ್ರಭಾ ನದಿ ಪ್ರವಾಹಕ್ಕೆ ಮನೆ ಕಳೆದುಕೊಂಡ್ರೂ ಇನ್ನೂ ಸರ್ಕಾರದಿಂದ ಬರಬೇಕಿದ್ದ ಪರಿಹಾರ ಬಂದಿಲ್ಲ. ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದ ನೆರೆ ಸಂತ್ರಸ್ತೆ ಬಸವ್ವಾ ಕುರಿ ಮನೆ ಕಟ್ಟಿಸಿಕೊಡಿ ಎಂದು ಕಣ್ಣೀರು‌ […]

ವರ್ಷವಾದ್ರೂ ಸಿಕ್ಕಿಲ್ಲ ಪರಿಹಾರ, ಮುರಿದು ಬಿದ್ದಿರುವ ಮನೆಯಲ್ಲೇ ಜೀವನ ಮಾಡ್ತಿದಾರೆ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Aug 31, 2020 | 10:23 AM

Share

ಬೆಳಗಾವಿ: ಎಲೆಕ್ಷನ್ ಬಂತು ಅಂದಾಗ ಮಾತ್ರ ಮನೆ ಬಳಿ ಬರುವ ರಾಜಕಾರಣಿಗಳು ಪ್ರವಾಹ ಬಂದು ಮನೆ ಬಿದ್ದಿದೆ ಅಂದ್ರೂ ಕೂಡ ತಲೆ ಕೆಡಿಸಿಕೊಳ್ಳೋದಿಲ್ಲ. ಕಳೆದೊಂದು ವರ್ಷದಿಂದ ಮುರಿದು ಬಿದ್ದಿರುವ ಮನೆಯಲ್ಲೇ ಇದೆ ಈ ರೈತ ಕುಟುಂಬ. ಆದ್ರೆ ಇದುವರೆಗೂ ಸರ್ಕಾರ ಇವರ ಬಗ್ಗೆ ಕನಿಕರವನ್ನೂ ತೋರಿಸಿಲ್ಲ.

ಮಲಪ್ರಭಾ ನದಿ ಪ್ರವಾಹಕ್ಕೆ ಮನೆ ಕಳೆದುಕೊಂಡ್ರೂ ಇನ್ನೂ ಸರ್ಕಾರದಿಂದ ಬರಬೇಕಿದ್ದ ಪರಿಹಾರ ಬಂದಿಲ್ಲ. ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದ ನೆರೆ ಸಂತ್ರಸ್ತೆ ಬಸವ್ವಾ ಕುರಿ ಮನೆ ಕಟ್ಟಿಸಿಕೊಡಿ ಎಂದು ಕಣ್ಣೀರು‌ ಹಾಕಿದ್ದಾರೆ. ಕಳೆದ ವರ್ಷ ಬಂದ ನೆರೆ ಪ್ರವಾಹದಲ್ಲಿ ಭಾಗಶಃ ಮನೆ ಬಿದಿದೆ. ಆದ್ರೆ ಇಲ್ಲಿಯ ವರೆಗೂ ಪರಿಹಾರ ಮಾತ್ರ ಕೈಗೆ ಬಂದಿಲ್ಲ. ದಂಪತಿ ಮತ್ತು ಓರ್ವ ವೃದ್ಧೆ ಬಿದ್ದ ಮನೆಯಲ್ಲೇ ಜೀವನ ಮಾಡುತ್ತಿದ್ದಾರೆ.

ಸಾಲ ಮಾಡಿ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಕೂಡ ನೀರು ಪಾಲಾಗಿದೆ. ತುತ್ತು ಅನ್ನಕ್ಕೂ ಪರಿತಪ್ಪಿಸುವಂತಾಗಿದೆ. ಬಸವ್ವಾ ಕುರಿ ಒಂದು ಎತ್ತು ಮಾರಿ ಮನೆ ನಿಭಾಯಿಸುತ್ತಿದ್ದಾರೆ. ಪರಿಹಾರಕ್ಕಾಗಿ ಕಳೆದೊಂದು ವರ್ಷದಿಂದ ಕಚೇರಿ ಅಲೆದೂ ಅಲೆದೂ ಬಳಲಿ ಬೆಂಡಾಗಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಕುಟುಂಬ ಕಣ್ಣೀರಿನಲ್ಲೇ ಕೈತೊಳೆಯುವಂತಾಗಿದೆ. ಬದುಕುವುದೇ ಭಾರವಾಗಿದೆ ಎಂಬಂತೆ ಪ್ರತಿ ದಿನ ಕಷ್ಟದಲ್ಲೇ ಜೀವ ಬಿಗಿದಿಡಿದು ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ಸರ್ಕಾರ ಈಗಲಾದ್ರೂ ಪರಿಹಾರ ನೀಡಿ ಕೈಹಿಡಿಯಬೇಕಿದೆ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!