AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಳುಸುತ್ತಿನ ಕೋಟೆ ವೀಕ್ಷಣೆಯ ಎಂಟ್ರಿ ಟಿಕೆಟ್ ಹೆಸರಲ್ಲಿ ಮೋಸದಾಟ, ಸಾರ್ವಜನಿಕರ ಆಕ್ರೋಶ

ಒಬ್ಬರಿಗೆ 25ರೂಪಾಯಿ ಟಿಕೆಟ್ ನೀಡುವಲ್ಲಿ ಗೋಲಾಮಾಲ್ ನಡೆಸುತ್ತಿದ್ದಾರೆ ಅನ್ನೋ ಆರೋಪವಿದೆ. ಆನ್​ಲೈನ್ ಟಿಕೆಟ್ ಸಿಗದೆ ಜನ ಪರದಾಡುವಂತಾಗಿದ್ದು ತಾಸುಗಟ್ಟಲೇ ಕಾದ ಜನ ಕೊನೆಗೆ ಸಿಬ್ಬಂದಿ ಕೇಳಿದಷ್ಟು ಹಣವನ್ನು ಕೈಗಿಟ್ಟು ಕೋಟೆ ವೀಕ್ಷಣೆಗೆ ತೆರಳುತ್ತಿದ್ದಾರೆ.

ಏಳುಸುತ್ತಿನ ಕೋಟೆ ವೀಕ್ಷಣೆಯ ಎಂಟ್ರಿ ಟಿಕೆಟ್ ಹೆಸರಲ್ಲಿ ಮೋಸದಾಟ, ಸಾರ್ವಜನಿಕರ ಆಕ್ರೋಶ
ಏಳುಸುತ್ತಿನ ಕೋಟೆ
ಪೃಥ್ವಿಶಂಕರ
|

Updated on: Nov 28, 2020 | 9:50 AM

Share

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಏಳುಸುತ್ತಿನ ಕೋಟೆ ವೀಕ್ಷಣೆಗೆ ನಿತ್ಯ ಸಾವಿರಾರು ‌ಜನ ಬರುತ್ತಾರೆ. ಆದರೆ, ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಕೋಟೆ ಅಭಿವೃದ್ಧಿ, ಜನರಿಗೆ ಸೌಕರ್ಯ ಕಲ್ಪಿಸುವ ಕಾರ್ಯ ಕೈಗೊಂಡಿಲ್ಲ. ಇದರ ಬದಲಾಗಿ ಕೋಟೆ ಪ್ರವೇಶ ಟಿಕೆಟ್​ನಲ್ಲಿ ಗೋಲ್​ಮಾಲ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಎಂಟ್ರಿ ಟಿಕೆಟ್ ಹೆಸರಲ್ಲಿ ನಡೆದಿದೆಯಾ ಮೋಸದಾಟ..? ಅಂದಹಾಗೆ ಐತಿಹಾಸಿಕ ಕೋಟೆ, ಒನಕೆ ಓಬವ್ವ ಕಿಟಕಿ, ಗಾಳಿ ಮಂಟಪ, ಮೂಲ ಮುರುಘಾಮಠ, ದೇಗುಲ ವೀಕ್ಷಿಸಲು‌ ನಿತ್ಯ ಸಾವಿರಾರು ಜನ ಬರುತ್ತಾರೆ. ಆದ್ರೆ,‌ ಪ್ರವಾಸಿಗರಿಗೆ ಕೋಟೆಯಲ್ಲಿ‌ ಸಮರ್ಪಕ ಮೂಲ ಸೌಲಭ್ಯಗಳೇ ಸಿಗುವುದಿಲ್ಲ. ಈ ಬಗ್ಗೆ ಕೇಳಿದರೆ ಪುರಾತತ್ವ ಇಲಾಖೆ ಅಧಿಕಾರಿಗಳು ಕೇಂದ್ರ ಸರ್ಕಾರದತ್ತ ಬೊಟ್ಟು ತೋರಿಸುತ್ತಾರೆ.

ಒಬ್ಬರಿಗೆ 25ರೂಪಾಯಿ ಟಿಕೆಟ್ ನೀಡುವಲ್ಲಿ ಗೋಲಾಮಾಲ್ ನಡೆಸುತ್ತಿದ್ದಾರೆ ಅನ್ನೋ ಆರೋಪವಿದೆ. ಆನ್​ಲೈನ್ ಟಿಕೆಟ್ ಸಿಗದೆ ಜನ ಪರದಾಡುವಂತಾಗಿದ್ದು ತಾಸುಗಟ್ಟಲೇ ಕಾದ ಜನ ಕೊನೆಗೆ ಸಿಬ್ಬಂದಿ ಕೇಳಿದಷ್ಟು ಹಣವನ್ನು ಕೈಗಿಟ್ಟು ಕೋಟೆ ವೀಕ್ಷಣೆಗೆ ತೆರಳುತ್ತಿದ್ದಾರೆ. ಕೋಟೆ ಸಿಬ್ಬಂದಿ ಮೂಲಕ ಅಧಿಕಾರಿಗಳು ಗೋಲ್​ಮಾಲ್ ಮಾಡ್ತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಗೋಲ್ ಮಾಲ್‌ ನಡೆಯುತ್ತಿದೆ ಎಂದ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ.. ಈಗಾಗ್ಲೇ ಈ ಬಗ್ಗೆ ಕೋಟೆ ವಿಹಾರಿಗಳು ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ‌ ನೀಡಿದ್ದಾರೆ. ಸರ್ಕಾರದ‌ ಹಣ ಜೇಬಿಗೇರಿಸಿಕೊಂಡು ಕೋಟೆ ಅಭಿವೃದ್ಧಿ ಕಡೆಗಣಿಸ್ತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಚಿತ್ರದುರ್ಗ ಬಿಜೆಪಿ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಅವ್ರನ್ನ ಕೇಳಿದ್ರೆ, ಕೋಟೆ ಪ್ರವೇಶ ಟಿಕೆಟ್​ನಲ್ಲಿ ಗೋಲ್ ಮಾಲ್‌ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು ಅಂತಿದ್ದಾರೆ.

ಒಟ್ನಲ್ಲಿ ಐತಿಹಾಸಕ ಕೋಟೆಯನ್ನು ರಕ್ಷಿಸಬೇಕಿದ್ದ ಅಧಿಕಾರಿಗಳ ವಿರುದ್ಧವೇ ಈ ರೀತಿಯ ಗಂಭೀರ ಆರೋಪ ಕೇಳಿಬರುತ್ತಿದೆ. ಟಿಕೆಟ್ ಹಂಚಿಕೆಯಲ್ಲೇ ಗೋಲ್​ಮಾಲ್ ನಡೆಯುತ್ತಿದ್ರೆ, ಇನ್ನು ಅಭಿವೃದ್ಧಿ ವಿಚಾರದಲ್ಲಿ ಏನೆಲ್ಲಾ ಆಟ ಆಡಿರಬಹುದು ಅಂತಾ ಸ್ಥಳೀಯರು ಗೊಣಗುತ್ತಿದ್ದಾರೆ. ಕೂಡಲೇ ಸರ್ಕಾರ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಗೆ ಮುಂದಾಗಬೇಕಿದೆ.