AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೊಮ್ಯಾಟೋ ವಿವಾದದಲ್ಲಿ ಯಾರು ಯಾರಿಗೆ ಹೊಡೆದರು? ನೆಟ್ಟಿಗರು ಹರಿಬಿಟ್ಟ ತಮಾಷೆ ವಿಡಿಯೋ

ಈ ಪ್ರಕರಣದಲ್ಲಿ ಯಾರು ಸರಿ? ಯಾರು ತಪ್ಪು? ಎಂಬ ಚರ್ಚೆಗೆ ತಾರ್ಕಿಕ ಅಂತ್ಯ ಸಿಗುವ ಮೊದಲೇ ಹೀಗೊಂದು ವಿಡಂಬನಾತ್ಮಕ ವಿಡಿಯೋ ಹರಿಬಿಟ್ಟು ಈ ಸಮಾಜ ಯಾವೆಲ್ಲಾ ರೀತಿಯಲ್ಲಿ ಯೋಚಿಸುತ್ತದೆ, ಒಂದು ಘಟನೆಗೆ ಎಷ್ಟೆಲ್ಲಾ ಆಯಾಮ ಇರಬಹುದು ಎಂಬುದನ್ನು ತಮಾಷೆಯಾಗಿಯೇ ತೋರಿಸಿದ್ದಾರೆ.

ಜೊಮ್ಯಾಟೋ ವಿವಾದದಲ್ಲಿ ಯಾರು ಯಾರಿಗೆ ಹೊಡೆದರು? ನೆಟ್ಟಿಗರು ಹರಿಬಿಟ್ಟ ತಮಾಷೆ ವಿಡಿಯೋ
ವೈರಲ್​​ ವಿಡಿಯೋ
Skanda
| Updated By: ganapathi bhat|

Updated on:Mar 17, 2021 | 7:18 PM

Share

ಬೆಂಗಳೂರು: ಜೊಮ್ಯಾಟೋ ಡೆಲಿವರಿ ಬಾಯ್​ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಹಿತೇಶಾ ಚಂದ್ರಾಣಿ ಎಂಬ ಯುವತಿ ಮಾಡಿದ್ದ ಆರೋಪ ಇದೀಗ ಬೇರೆ ಬೇರೆ ರೂಪ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಟ್ರೋಲ್ ಪೇಜ್​ಗಳು ತರಹೇವಾರಿ ರೀತಿಯಲ್ಲಿ ಬಣ್ಣಿಸುತ್ತಿದ್ದು, ಈ ಘಟನೆ ಹೇಗಾಗಿರಬಹುದು? ಇದಕ್ಕೆ ಯಾವೆಲ್ಲಾ ಆಯಾಮಗಳಿರಬಹುದು? ಎಂದು ತಮಾಷೆಯ ವಿಡಿಯೋ ಮಾಡಿ ಹರಿಬಿಟ್ಟಿವೆ.

ಜೊಮ್ಯಾಟೋ ಹುಡುಗನೇ ಹುಡುಗಿಗೆ ಹಲ್ಲೆ ಮಾಡಿದನಾ? ಹುಡುಗಿಯೇ ಆತನ ಮೇಲೆ ಮೊದಲು ಕೈ ಮಾಡಿದಳಾ? ಹುಡುಗ ಬೇಕಂತಲೇ ಆಕೆಯ ಕೈಯಿಂದ ಹೊಡೆಸಿಕೊಂಡನಾ? ಅಥವಾ ಆಕೆಯೇ ಹಾಗೆ ತಂತ್ರ ಉಪಯೋಗಿಸಿದಳಾ? ಎಂಬಲ್ಲಿಂದ ಹಿಡಿದು ಒಂದು ಘಟನೆಯ ಬಗ್ಗೆ ಮೂಡಬಹುದಾದ ಅನುಮಾನದ ಎಲ್ಲಾ ಆಯಾಮಗಳನ್ನಿಟ್ಟುಕೊಂಡು ವಿಡಿಯೋ ಮಾಡಲಾಗಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಪ್ರಕರಣದ ಗಂಭೀರತೆ ಮಾಯವಾಗಿ ತಮಾಷೆಯಾಗಿ ಪರಿವರ್ತನೆಗೊಂಡಿದೆ. ಈ ಹಿಂದೆಯೂ ಎಷ್ಟೋ ಗಂಭೀರ ಘಟನೆಗಳನ್ನು ಟ್ರೋಲ್​ ಪೇಜ್​ಗಳು ಅಥವಾ ಕೆಲವೊಂದಷ್ಟು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹಾಸ್ಯಾಸ್ಪದ ಮಾಡಿದ ನಿದರ್ಶನಗಳಿವೆ. ಹೀಗಾಗಿಯೇ ಕೆಲವರು ಭಾರತೀಯರಿಗೆ ಎಂತಹ ಗಂಭೀರ ವಿಷಯ ಸಿಕ್ಕರೂ ಅದಕ್ಕೆ ಹಾಸ್ಯ ಲೇಪಿಸುವ ಚಾಕಚಕ್ಯತೆ ಹೊಂದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಪ್ರಕರಣದಲ್ಲಿ ಯಾರು ಸರಿ? ಯಾರು ತಪ್ಪು? ಎಂಬ ಚರ್ಚೆಗೆ ತಾರ್ಕಿಕ ಅಂತ್ಯ ಸಿಗುವ ಮೊದಲೇ ಹೀಗೊಂದು ವಿಡಂಬನಾತ್ಮಕ ವಿಡಿಯೋ ಹರಿಬಿಟ್ಟು ಈ ಸಮಾಜ ಯಾವೆಲ್ಲಾ ರೀತಿಯಲ್ಲಿ ಯೋಚಿಸುತ್ತದೆ, ಒಂದು ಘಟನೆಗೆ ಎಷ್ಟೆಲ್ಲಾ ಆಯಾಮ ಇರಬಹುದು ಎಂಬುದನ್ನು ತಮಾಷೆಯಾಗಿಯೇ ತೋರಿಸಿದ್ದಾರೆ. ಇನ್​ಸ್ಟಾಗ್ರಾಂ, ಫೇಸ್​ಬುಕ್​ ಸೇರಿದಂತೆ ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ತರಹೇವಾರಿ ಕಮೆಂಟ್​ ಮಾಡಿದ್ದಾರೆ. ಅಂದಹಾಗೆ ನೀವಿನ್ನೂ ವಿಡಿಯೋ ನೋಡಿಲ್ಲವಾದರೆ, ಒಮ್ಮೆ ಇಲ್ಲಿ ಕಣ್ಣು ಹಾಯಿಸುವುದನ್ನು ಮರೆಯಬೇಡಿ.

View this post on Instagram

A post shared by Chudarshan (@chudarshan)

ಇದನ್ನೂ ಓದಿ: ಅವರೇ, ಇವರಾ? ಜೊಮ್ಯಾಟೋ ಪ್ರಕರಣದಲ್ಲಿ ಸದ್ದು ಮಾಡಿದ ಯುವತಿ ನಿಜ ಜೀವನದಲ್ಲಿ ಹೀಗಿದ್ದಾರಾ? 

ಊಟ ಕೊಡ್ರಪ್ಪಾ, ಹೊಡೀಬೇಡಿ: ಜೊಮ್ಯಾಟೋಗೆ ಪಾಠ ಹೇಳಿದ ನೆಟ್ಟಿಗರು

Published On - 6:51 pm, Wed, 17 March 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ