ತಾಯಿ ಮಕ್ಕಳ ದುಃಸ್ಥಿತಿ, ಮಾನವೀಯತೆ ತೋರಿದ ಗದಗ ಪೊಲೀಸರು

ಗದಗ: ಮಾಹಾಮಾರಿ ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಹಿನ್ನೆಲೆ ಗದಗ ನಗರದಲ್ಲಿ ತಾಯಿ ಮಕ್ಕಳು ಅನ್ನಾಹಾರವಿಲ್ಲದೆ ಪರದಾಡುತ್ತಿದ್ದ ಮನಕಲಕುವ ಘಟನೆ ನಡೆದಿದೆ. ಆಶ್ರಯ, ಅನ್ನ, ನೀರಲ್ಲದೇ ತಾಯಿ, ಮಕ್ಕಳು ಬೀದಿಯಲ್ಲಿ ಪರದಾಡುತ್ತಿದ್ದರು. ಗದಗ ನಗರದ ಮುಳಗುಂದ ನಾಕಾ ಬೀದಿಯಲ್ಲೇ ಮಕ್ಕಳೊಂದಿಗೆ ಈ ಮಹಿಳೆ ನಾಲ್ಕು ದಿನ‌ ಕಳೆದಿದ್ದಾರೆ. ಈ ಸಂದರ್ಭದಲ್ಲಿ ಮಾನವೀಯತೆ ಮೆರೆದ ಗದಗ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಪೊಲೀಸರು ಬೀದಿಯಲ್ಲಿ ಪರದಾಡುತ್ತಿರೋ ತಾಯಿ, ಮಕ್ಕಳಿಗೆ ಆಶ್ರಯ ಕಲ್ಪಿಸಿದ್ದಾರೆ. ಊಟ, […]

ತಾಯಿ ಮಕ್ಕಳ ದುಃಸ್ಥಿತಿ, ಮಾನವೀಯತೆ ತೋರಿದ ಗದಗ ಪೊಲೀಸರು
ಸಾಧು ಶ್ರೀನಾಥ್​

Updated on: Apr 22, 2020 | 11:19 AM

ಗದಗ: ಮಾಹಾಮಾರಿ ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಹಿನ್ನೆಲೆ ಗದಗ ನಗರದಲ್ಲಿ ತಾಯಿ ಮಕ್ಕಳು ಅನ್ನಾಹಾರವಿಲ್ಲದೆ ಪರದಾಡುತ್ತಿದ್ದ ಮನಕಲಕುವ ಘಟನೆ ನಡೆದಿದೆ. ಆಶ್ರಯ, ಅನ್ನ, ನೀರಲ್ಲದೇ ತಾಯಿ, ಮಕ್ಕಳು ಬೀದಿಯಲ್ಲಿ ಪರದಾಡುತ್ತಿದ್ದರು. ಗದಗ ನಗರದ ಮುಳಗುಂದ ನಾಕಾ ಬೀದಿಯಲ್ಲೇ ಮಕ್ಕಳೊಂದಿಗೆ ಈ ಮಹಿಳೆ ನಾಲ್ಕು ದಿನ‌ ಕಳೆದಿದ್ದಾರೆ.

ಈ ಸಂದರ್ಭದಲ್ಲಿ ಮಾನವೀಯತೆ ಮೆರೆದ ಗದಗ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಪೊಲೀಸರು ಬೀದಿಯಲ್ಲಿ ಪರದಾಡುತ್ತಿರೋ ತಾಯಿ, ಮಕ್ಕಳಿಗೆ ಆಶ್ರಯ ಕಲ್ಪಿಸಿದ್ದಾರೆ. ಊಟ, ನೀರು, ಮಾಸ್ಕ್, ಹಣ್ಣು ನೀಡಿ ಖಾಕಿ‌ ಪಡೆ ಮಾನವೀಯತೆ ತೋರಿದೆ. ಬಳಿಕ ಆ ನಾಲ್ವರಿಗೂ ವಾಲ್ಮೀಕಿ ಭವನದಲ್ಲಿ ಆಶ್ರಯಕ್ಕೆ ವ್ಯವಸ್ಥೆ ಮಾಡಿ, ಪೊಲೀಸ್ ವಾಹನದಲ್ಲಿ ಭವನಕ್ಕೆ ತಲುಪಿಸಿದ್ದಾರೆ.

ಗದಗ ತಾಲೂಕಿನ ಹುಲಕೋಟಿ ಗ್ರಾಮದ ಪತಿ ಫಲೀರಪ್ಪ ಮನೆಯಿಂದ ಹೊರ ಹಾಕಿದ್ದಕ್ಕೆ ಮಹಿಳೆ ಮಕ್ಕಳೊಂದಿಗೆ ಬೀದಿಯಲ್ಲಿ ಬದುಕು ಸಾಗಿಸುವಂತಾಗಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ‌ ಮೂಲದ ಮಹಿಳೆ ಅನಂತಮ್ಮ ಈ ದುರವಸ್ಥೆ ಎದುರಿಸುತ್ತಿರುವ ಮಹಿಳೆ.

 


Published On - 11:17 am, Wed, 22 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us