AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಕ್ಲೋನ್​ ಚಳಿ ತಾಳದೆ ಮನೆಯೊಳಗೆ ಬೆಂಕಿ ಹಾಕಿದರು: ಮಗಳು ಸ್ಥಳದಲ್ಲಿಯೆ ಸಾವು, ಉಳಿದವರು ಅಸ್ಪತ್ರೆ ಪಾಲು..

ಕೊಠಡಿಯಲ್ಲಿ ಗಾಳಿಯಾಡದ ಕಾರಣ ಹಾಗೂ ಕಾರ್ಬನ್ ಮೊನಾಕ್ಸೈಡ್ ತುಂಬಿ ಉಸಿರಾಡಲು ಆಗದೆ 15 ವರ್ಷ ಬಾಲಕಿ ಮೃತಪಟ್ಟು, ಆಕೆಯ ತಂದೆ, ತಾಯಿ, ತಂಗಿ ಅಸ್ವಸ್ಥರಾದ ಹೃದಯವಿದ್ರಾವಕ ಘಟನೆ ನಡೆದಿದೆ.

ಸೈಕ್ಲೋನ್​ ಚಳಿ ತಾಳದೆ ಮನೆಯೊಳಗೆ ಬೆಂಕಿ ಹಾಕಿದರು: ಮಗಳು ಸ್ಥಳದಲ್ಲಿಯೆ ಸಾವು, ಉಳಿದವರು ಅಸ್ಪತ್ರೆ ಪಾಲು..
ಅಸ್ವಸ್ಥ ಕುಟುಂಬಸ್ಥರು
ಪೃಥ್ವಿಶಂಕರ
|

Updated on:Nov 27, 2020 | 4:19 PM

Share

ಚಿಕ್ಕಬಳ್ಳಾಪುರ: ಚಂಡಮಾರುತದ ಚಳಿ ತಡೆಯಲಾಗದ ಬಡಪಾಯಿ ಕೂಲಿಕಾರ್ಮಿಕರು, ಮಲಗುವಾಗ ರಾತ್ರಿ ಕೊಠಡಿಯಲ್ಲೆ ಕಿಟಕಿ ಬಾಗಿಲು ಮುಚ್ಚಿ, ಕೊಠಡಿ ಬೆಚ್ಚಗೆ ಇರಲು ಟಿನ್ ಡಬ್ಬವೊಂದರಲ್ಲಿ ಸೌದೆ ಇದ್ದಿಲು ತುಂಬಿ ಬೆಂಕಿ ಹಾಕಿದ್ದರು. ಆದ್ರೆ ಕೊಠಡಿಯಲ್ಲಿ ಗಾಳಿಯಾಡದ ಕಾರಣ ಹಾಗೂ ಕಾರ್ಬನ್ ಮೊನಾಕ್ಸೈಡ್ ತುಂಬಿ ಉಸಿರಾಡಲು ಆಗದೆ 15 ವರ್ಷ ಬಾಲಕಿ ಮೃತಪಟ್ಟು, ಆಕೆಯ ತಂದೆ, ತಾಯಿ, ತಂಗಿ ಅಸ್ವಸ್ಥರಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮರಾಠಿಪಾಳ್ಯ ಗೇಟ್ ಬಳಿ ಇರುವ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ತುಮಕೂರು ಮೂಲಕ ಕಾರ್ಮಿಕರಾದ ವೀರಾಜಿನೆಯ ಹಾಗೂ ಶಾಂತಮ್ಮ ದಂಪತಿ ಬಂದಿದ್ದರು. ಜೊತೆಗೆ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕರೆ ತಂದಿದ್ರು. ಆದ್ರೆ ನಿನ್ನೆ ರಾತ್ರಿ ತೀವ್ರ ಚಳಿ ಇದ್ದ ಕಾರಣ ಕೊಠಡಿಯಲ್ಲಿ ಟಿನ್ ಡಬ್ಬದಲ್ಲಿ ಕೆಂಡ ತುಂಬಿ ಸೌದೆ ಹಾಕಿದ್ರು. ರಾತ್ರಿ ಊಟ ಮಾಡಿ ಎಂದಿನಂತೆ ನಾಲ್ಕು ಜನ ಮಲಗಿದ್ರು.

15 ವರ್ಷದ ಅರ್ಚನಾ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.. ಆದ್ರೆ ಮಧ್ಯೆ ರಾತ್ರಿ ದಂಪತಿಯ ಮಗಳು ಅರ್ಚನಾಗೆ ಉಸಿರಾಟ ತೊಂದರೆಯಾಗಿ ವಾಂತಿ ಮಾಡಿಕೊಂಡಿದ್ದಾಳೆ. ಮಗಳಿಗೆ ಏನಾಯಿತು ಅಂತ ದಂಪತಿ ನೋಡುವಷ್ಟರಲ್ಲಿ 15 ವರ್ಷದ ಅರ್ಚನಾ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ನಂತರ ವೀರಾಂಜಿನೆಯ್ಯ ಹಾಗೂ ಶಾಂತಮ್ಮ ಮತ್ತೆ ಅವರ ಮತ್ತೊರ್ವ ಮಗಳು (13) ಅಂಕಿತಾ ಸಹ ಅಸ್ವತ್ಥರಾಗಿದ್ದಾರೆ.

ಬಳಿಕ ಬಾಗಿಲು ತೆಗೆದು ರಾತ್ರಿಯಿಡಿ ಹೊರಗೆ ಕುಳಿತಿದ್ದಾರೆ. ಬೆಳಿಗ್ಗೆ ಕಾರ್ಖಾನೆಯ ಮಾಲೀಕ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಮಂಚೇನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಸ್ಥಳೀಯರು ಅಸ್ವತ್ಥರನ್ನು ಗೌರಿಬಿದನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

Published On - 4:12 pm, Fri, 27 November 20

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ