AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಕ್ಲೋನ್​ ಚಳಿ ತಾಳದೆ ಮನೆಯೊಳಗೆ ಬೆಂಕಿ ಹಾಕಿದರು: ಮಗಳು ಸ್ಥಳದಲ್ಲಿಯೆ ಸಾವು, ಉಳಿದವರು ಅಸ್ಪತ್ರೆ ಪಾಲು..

ಕೊಠಡಿಯಲ್ಲಿ ಗಾಳಿಯಾಡದ ಕಾರಣ ಹಾಗೂ ಕಾರ್ಬನ್ ಮೊನಾಕ್ಸೈಡ್ ತುಂಬಿ ಉಸಿರಾಡಲು ಆಗದೆ 15 ವರ್ಷ ಬಾಲಕಿ ಮೃತಪಟ್ಟು, ಆಕೆಯ ತಂದೆ, ತಾಯಿ, ತಂಗಿ ಅಸ್ವಸ್ಥರಾದ ಹೃದಯವಿದ್ರಾವಕ ಘಟನೆ ನಡೆದಿದೆ.

ಸೈಕ್ಲೋನ್​ ಚಳಿ ತಾಳದೆ ಮನೆಯೊಳಗೆ ಬೆಂಕಿ ಹಾಕಿದರು: ಮಗಳು ಸ್ಥಳದಲ್ಲಿಯೆ ಸಾವು, ಉಳಿದವರು ಅಸ್ಪತ್ರೆ ಪಾಲು..
ಅಸ್ವಸ್ಥ ಕುಟುಂಬಸ್ಥರು
ಪೃಥ್ವಿಶಂಕರ
|

Updated on:Nov 27, 2020 | 4:19 PM

Share

ಚಿಕ್ಕಬಳ್ಳಾಪುರ: ಚಂಡಮಾರುತದ ಚಳಿ ತಡೆಯಲಾಗದ ಬಡಪಾಯಿ ಕೂಲಿಕಾರ್ಮಿಕರು, ಮಲಗುವಾಗ ರಾತ್ರಿ ಕೊಠಡಿಯಲ್ಲೆ ಕಿಟಕಿ ಬಾಗಿಲು ಮುಚ್ಚಿ, ಕೊಠಡಿ ಬೆಚ್ಚಗೆ ಇರಲು ಟಿನ್ ಡಬ್ಬವೊಂದರಲ್ಲಿ ಸೌದೆ ಇದ್ದಿಲು ತುಂಬಿ ಬೆಂಕಿ ಹಾಕಿದ್ದರು. ಆದ್ರೆ ಕೊಠಡಿಯಲ್ಲಿ ಗಾಳಿಯಾಡದ ಕಾರಣ ಹಾಗೂ ಕಾರ್ಬನ್ ಮೊನಾಕ್ಸೈಡ್ ತುಂಬಿ ಉಸಿರಾಡಲು ಆಗದೆ 15 ವರ್ಷ ಬಾಲಕಿ ಮೃತಪಟ್ಟು, ಆಕೆಯ ತಂದೆ, ತಾಯಿ, ತಂಗಿ ಅಸ್ವಸ್ಥರಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮರಾಠಿಪಾಳ್ಯ ಗೇಟ್ ಬಳಿ ಇರುವ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ತುಮಕೂರು ಮೂಲಕ ಕಾರ್ಮಿಕರಾದ ವೀರಾಜಿನೆಯ ಹಾಗೂ ಶಾಂತಮ್ಮ ದಂಪತಿ ಬಂದಿದ್ದರು. ಜೊತೆಗೆ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕರೆ ತಂದಿದ್ರು. ಆದ್ರೆ ನಿನ್ನೆ ರಾತ್ರಿ ತೀವ್ರ ಚಳಿ ಇದ್ದ ಕಾರಣ ಕೊಠಡಿಯಲ್ಲಿ ಟಿನ್ ಡಬ್ಬದಲ್ಲಿ ಕೆಂಡ ತುಂಬಿ ಸೌದೆ ಹಾಕಿದ್ರು. ರಾತ್ರಿ ಊಟ ಮಾಡಿ ಎಂದಿನಂತೆ ನಾಲ್ಕು ಜನ ಮಲಗಿದ್ರು.

15 ವರ್ಷದ ಅರ್ಚನಾ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.. ಆದ್ರೆ ಮಧ್ಯೆ ರಾತ್ರಿ ದಂಪತಿಯ ಮಗಳು ಅರ್ಚನಾಗೆ ಉಸಿರಾಟ ತೊಂದರೆಯಾಗಿ ವಾಂತಿ ಮಾಡಿಕೊಂಡಿದ್ದಾಳೆ. ಮಗಳಿಗೆ ಏನಾಯಿತು ಅಂತ ದಂಪತಿ ನೋಡುವಷ್ಟರಲ್ಲಿ 15 ವರ್ಷದ ಅರ್ಚನಾ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ನಂತರ ವೀರಾಂಜಿನೆಯ್ಯ ಹಾಗೂ ಶಾಂತಮ್ಮ ಮತ್ತೆ ಅವರ ಮತ್ತೊರ್ವ ಮಗಳು (13) ಅಂಕಿತಾ ಸಹ ಅಸ್ವತ್ಥರಾಗಿದ್ದಾರೆ.

ಬಳಿಕ ಬಾಗಿಲು ತೆಗೆದು ರಾತ್ರಿಯಿಡಿ ಹೊರಗೆ ಕುಳಿತಿದ್ದಾರೆ. ಬೆಳಿಗ್ಗೆ ಕಾರ್ಖಾನೆಯ ಮಾಲೀಕ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಮಂಚೇನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಸ್ಥಳೀಯರು ಅಸ್ವತ್ಥರನ್ನು ಗೌರಿಬಿದನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

Published On - 4:12 pm, Fri, 27 November 20

Follow Us
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ