ಚಿನ್ನದ ವ್ಯಾಪಾರಿಯ ಮಗನ ಬರ್ಬರ ಕೊಲೆ: ಕೆಲಸಗಾರನ ಅಪಹರಣ
ಚಿನ್ನದ ವ್ಯಾಪಾರಿ ಮಗನಾದ ನರೇಂದ್ರ ಮತ್ತು ಕೆಲಸಗಾರ ಕಿಶೋರ್ ರೂಮಿನಲ್ಲಿ ಇದ್ದಾಗ ಘಟನೆ ನಡೆದಿದೆ. ಚಿನ್ನದ ಆಸೆಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೊಲೆಯಾದ ನರೇಂದ್ರ , ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ
ಯಾದಗಿರಿ: ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಚಿನ್ನದ ವ್ಯಾಪಾರಿಯ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿ, ಕೆಲಸಗಾರನನ್ನು ಅಪಹರಿಸಿದ ಘಟನೆ ಜಿಲ್ಲೆಯ ಹುಣಸಗಿ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ.
ಚಿನ್ನದ ವ್ಯಾಪಾರಿ ಮಗನಾದ ನರೇಂದ್ರ ಮತ್ತು ಕೆಲಸಗಾರ ಕಿಶೋರ್ ರೂಮಿನಲ್ಲಿ ಇದ್ದಾಗ ಘಟನೆ ನಡೆದಿದೆ. ಚಿನ್ನದ ಆಸೆಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಈ ಪ್ರಕರಣ ಹುಣಸಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
Published On - 12:00 pm, Thu, 14 January 21