ನೈಟ್​ ಶಿಫ್ಟ್​ ಮಾಡ್ತೀರಾ? ಹಾಗಿದ್ರೆ ಈ ತೊಂದರೆಗಳನ್ನು ಎದುರಿಸೋಕೆ ಮಾನಸಿಕವಾಗಿ ಸಿದ್ಧರಾಗಿ 

ವಾಷಿಂಗ್ಟನ್​​ ವಿಶ್ವವಿದ್ಯಾಲಯವು ರಾತ್ರಿ ಪಾಳಿಯಿಂದ ಉಂಟಾಗುವ ತೊಂದರೆಗಳು ಏನು ಎನ್ನುವುದನ್ನು ಪಟ್ಟಿ ಮಾಡಿದೆ ಮತ್ತು ಅದಕ್ಕೆ ಕಾರಣವನ್ನೂ ನೀಡಿದೆ.

ನೈಟ್​ ಶಿಫ್ಟ್​ ಮಾಡ್ತೀರಾ? ಹಾಗಿದ್ರೆ ಈ ತೊಂದರೆಗಳನ್ನು ಎದುರಿಸೋಕೆ ಮಾನಸಿಕವಾಗಿ ಸಿದ್ಧರಾಗಿ 
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Mar 12, 2021 | 6:46 AM

ಜಾಬ್​ಗೆ ಸೇರಿದ ಮೇಲೆ ಜೀವನವೇ ಮುಗಿಯಿತು ಎಂಬುದು ಅನೇಕರ ಭಾವನೆ. ಕೆಲವರ ಪಾಲಿಗೆ ಇದು ನಿಜವೂ ಹೌದು. ಏಕೆಂದರೆ, ಕೆಲಸಕ್ಕೆ ಸೇರಿದ ಮೇಲೆ ಬಾಸ್​ ಹೇಳಿದಂತೆ ಕೇಳಬೇಕು. ರಾತ್ರಿ ಪಾಳಿಗೆ ಬರುವಂತೆ ಹೇಳಿದರೆ ಮರುಮಾತನಾಡದೆ ಬರಬೇಕು. ಆದರೆ, ಇನ್ನುಮುಂದೆ ನೈಟ್​ ಶಿಫ್ಟ್​ಗೆ ಓಕೆ ಎನ್ನುವ ಮೊದಲು ಸಾಕಷ್ಟು ಬಾರಿ ಯೋಚನೆ ಮಾಡಿ. ಏಕೆಂದರೆ, ನಿರಂತರ ರಾತ್ರಿ ಪಾಳಿಯಿಂದ ನಿಮ್ಮ ಆರೋಗ್ಯ ಸಂಪೂರ್ಣವಾಗಿ ಹದಗೆಡಬಹುದಂತೆ! ಹೀಗೊಂದು ಎಚ್ಚರಿಕೆಯನ್ನು ಹೊಸ ಅಧ್ಯಯನ ನೀಡಿದೆ. ವಾಷಿಂಗ್ಟನ್​​ ವಿಶ್ವವಿದ್ಯಾಲಯ ಈ ಆತಂಕಕಾರಿ ಮಾಹಿತಿ ಹೊರ ಹಾಕಿದೆ. ಅಷ್ಟೇ ಅಲ್ಲ, ರಾತ್ರಿ ಪಾಳಿಯಿಂದ ಉಂಟಾಗುವ ತೊಂದರೆಗಳು ಏನು ಎನ್ನುವುದನ್ನು ಪಟ್ಟಿ ಮಾಡಿ,  ಅದಕ್ಕೆ ಕಾರಣವನ್ನೂ ನೀಡಿದೆ. ಈ ಅಧ್ಯಯನ ಹೇಳುವ ಪ್ರಕಾರ ದೀರ್ಘಕಾಲ ರಾತ್ರಿ ಪಾಳಿ ಮಾಡಿದರೆ ಕ್ಯಾನ್ಸರ್​ ವಕ್ಕರಿಸಬಹುದಂತೆ!

ಪ್ರತಿ ವ್ಯಕ್ತಿ ರಾತ್ರಿ ಹೊತ್ತು ನಿದ್ರಿಸಬೇಕು ಮತ್ತು ಮುಂಜಾನೆ ಏಳಬೇಕು. ಆದರೆ, ರಾತ್ರಿ ಪಾಳಿಯಿಂದ ಇದು ತಲೆಕೆಳಗಾಗುತ್ತದೆ. ನೈಟ್​ ಶಿಫ್ಟ್​ ಮಾಡುವ ವ್ಯಕ್ತಿ ಹಗಲು ನಿದ್ರಿಸಿ ರಾತ್ರಿ ಎಚ್ಚರ ಇರುತ್ತಾನೆ. ಇದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇನ್ನು, ಈ ಪದ್ಧತಿ ರೂಢಿಸಿಕೊಳ್ಳುವುದರಿಂದ ಡಿಎನ್​ಎ ಕೂಡ ಹಾನಿಗೆ ತುತ್ತಾಗುತ್ತದೆ. ಇದು ಕ್ಯಾನ್ಸರ್​​ಗೆ ಎಡೆಮಾಡಿಕೊಡಬಹುದು ಎನ್ನುತ್ತಿದೆ ಅಧ್ಯಯನ.

ಈ ರೀತಿ ರಾತ್ರಿ ಪಾಳಿ ಮಾಡುವವರನ್ನು ತಜ್ಞರ ತಂಡ ಪರೀಕ್ಷೆಗೆ ಒಳಪಡಿಸಿತ್ತು. ಈ ವೇಳೆ ಅವರಲ್ಲಿ ಕ್ಯಾನ್ಸರ್​ ಕಾಣಿಸಿಕೊಂಡವರ ಪ್ರಮಾಣ ಹೆಚ್ಚಿದೆಯಂತೆ. ನಿದ್ರೆಯ ಅಸಮತೋಲನವೇ ಇದಕ್ಕೆ ನೇರ ಕಾರಣ ಎಂದು ಅಧ್ಯಯನ ತಿಳಿಸಿದೆ. ಇದರ ಜತೆಗೆ ಇನ್ನೂ ಅನೇಕ ಅಸಮತೋಲನಗಳು ನೈಟ್​ಶಿಫ್ಟ್​ನಿಂದ ಉಂಟಾಗಬಹುದು ಎಂದು ಅಧ್ಯಯನ ತಿಳಿಸಿದೆ.

ಹಗಲು ನಿದ್ರೆ ಮಾಡುವುದರಿಂದ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದಿಲ್ಲ. ಹೀಗಾದಾಗ, ವಿಟಮಿನ್​ ಕೊರತೆ ಕೂಡ ಉಂಟಾಗಲಿದ್ದು, ಇದರಿಂದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಎದುರಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ವರ್ಕ್​ ಫ್ರಂ ಹೋಮ್​​ ಪರಿಣಾಮ: ಕಚೇರಿ ಕೆಲಸ ಮತ್ತು ವೈಯಕ್ತಿಕ ಜೀವನ ನಿಭಾಯಿಸುವಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಒತ್ತಡ

ಬೆಳಗೆದ್ದು ಗ್ರೀನ್​ ಟೀ ಅಥವಾ ಬ್ಲಾಕ್​ ಟೀ ಕುಡಿತೀರಾ? ಹಾಗಿದ್ರೆ ಈ ರೋಗಗಳು ನಿಮ್ಮ ಬಳಿ ಸುಳಿಯಲ್ಲ

PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು ಎಂದ ಮೋದಿ
PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು ಎಂದ ಮೋದಿ
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ