ವರ್ಕ್​ ಫ್ರಂ ಹೋಮ್​​ ಪರಿಣಾಮ: ಕಚೇರಿ ಕೆಲಸ ಮತ್ತು ವೈಯಕ್ತಿಕ ಜೀವನ ನಿಭಾಯಿಸುವಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಒತ್ತಡ

ಸದರಿ ಅಧ್ಯಯನ ಹೇಳುವಂತೆ ಕೊರೊನಾ ಲಾಕ್​ಡೌನ್​ ಪುರುಷರಿಗಿಂತ ಹೆಚ್ಚು ಮಹಿಳೆಯರ ಮೇಲೆ ಅಡ್ಡ ಪರಿಣಾಮ ಬೀರಿದೆ. ಅಧ್ಯಯನದಲ್ಲಿ ಪಾಲ್ಗೊಂಡ ಮಹಿಳೆಯರ ಪೈಕಿ ಶೇ.85ಕ್ಕೂ ಹೆಚ್ಚು ಮಂದಿ ವರ್ಕ್​ ಫ್ರಂ ಹೋಮ್​ ನಮಗೆ ಸವಾಲಾಗಿದೆ ಎಂದು ಒಪ್ಪಿಕೊಂಡಿದ್ದು, ಶೇ.81 ಮಂದಿ ಕಚೇರಿ ಕೆಲಸ ಮತ್ತು ವೈಯಕ್ತಿಕ ಕೆಲಸದ ಮಧ್ಯೆ ನಮಗೆ ವ್ಯತ್ಯಾಸ ಕಂಡುಕೊಳ್ಳುವುದೇ ಕಷ್ಟವಾಯಿತು ಎಂದಿದ್ದಾರೆ.

ವರ್ಕ್​ ಫ್ರಂ ಹೋಮ್​​ ಪರಿಣಾಮ: ಕಚೇರಿ ಕೆಲಸ ಮತ್ತು ವೈಯಕ್ತಿಕ ಜೀವನ ನಿಭಾಯಿಸುವಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಒತ್ತಡ
ಸಾಂದರ್ಭಿಕ ಚಿತ್ರ
Follow us
| Updated By: ರಾಜೇಶ್ ದುಗ್ಗುಮನೆ

Updated on: Mar 11, 2021 | 9:29 PM

ಇತ್ತೀಚೆಗೆ ನಡೆಸಲಾಗಿರುವ ಒಂದು ಅಧ್ಯಯನದ ಪ್ರಕಾರ ಮನೆಯಲ್ಲೇ ಕುಳಿತು ಕಚೇರಿ ಕೆಲಸ ನಿರ್ವಹಿಸುವ ಮಂದಿ ಪೈಕಿ ಉದ್ಯೋಗ ಮತ್ತು ವೈಯಕ್ತಿಕ ಕೆಲಸ ಎರಡನ್ನೂ ಏಕಕಾಲಕ್ಕೆ ನಿಭಾಯಿಸಲು ಪುರುಷರಿಗಿಂತ ಮಹಿಳೆಯರೇ ಹೆಚ್ಚು ಒತ್ತಡ ಎದುರಿಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ ಶೇ.61ಕ್ಕೂ ಹೆಚ್ಚು ಮಹಿಳೆಯರು ಲಾಕ್​ಡೌನ್​ ಅವಧಿಯಲ್ಲಿ ಮನೆಯಲ್ಲಿ ಕುಳಿತು ಕೆಲಸ ಮಾಡುವಾಗ ತಮ್ಮ ಪುರುಷ ಸಂಗಾತಿಗಿಂತಲೂ ಹೆಚ್ಚಿನ ಒತ್ತಡ ಅನುಭವಿಸಿದ್ದಾರಂತೆ. ಈ ಬಗ್ಗೆ SCIKEY Market Network ವರದಿ ತಯಾರಿಸಿದ್ದು, ಅಧ್ಯಯನದಲ್ಲಿ ಬಯಲಾದ ಅಂಶ ಅಚ್ಚರಿಗೆ ಕಾರಣವಾಗಿದೆ.

ಸದರಿ ಅಧ್ಯಯನ ಹೇಳುವಂತೆ ಕೊರೊನಾ ಲಾಕ್​ಡೌನ್​ ಪುರುಷರಿಗಿಂತ ಹೆಚ್ಚು ಮಹಿಳೆಯರ ಮೇಲೆ ಅಡ್ಡ ಪರಿಣಾಮ ಬೀರಿದೆ. ಅಧ್ಯಯನದಲ್ಲಿ ಪಾಲ್ಗೊಂಡ ಮಹಿಳೆಯರ ಪೈಕಿ ಶೇ.85ಕ್ಕೂ ಹೆಚ್ಚು ಮಂದಿ ವರ್ಕ್​ ಫ್ರಂ ಹೋಮ್​ ನಮಗೆ ಸವಾಲಾಗಿದೆ ಎಂದು ಒಪ್ಪಿಕೊಂಡಿದ್ದು, ಶೇ.81 ಮಂದಿ ಕಚೇರಿ ಕೆಲಸ ಮತ್ತು ವೈಯಕ್ತಿಕ ಕೆಲಸದ ಮಧ್ಯೆ ನಮಗೆ ವ್ಯತ್ಯಾಸ ಕಂಡುಕೊಳ್ಳುವುದೇ ಕಷ್ಟವಾಯಿತು ಎಂದಿದ್ದಾರೆ. ಅಧ್ಯಯನದಲ್ಲಿ 2,500 ಕ್ಕೂ ಅಧಿಕ ಮಹಿಳಾ ಉದ್ಯೋಗಿಗಳು ಪಾಲ್ಗೊಂಡಿದ್ದು, ಐಟಿ, ಆರೋಗ್ಯ, ಮಾಧ್ಯಮ, ಹಣಕಾಸು, ಮನರಂಜನೆ, ಶಿಕ್ಷಣ, ತಂತ್ರಜ್ಞಾನ, ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಇನ್ನು ಇದೇ ಅಧ್ಯಯನದಲ್ಲಿ ಶೇ.24ರಷ್ಟು ಮಹಿಳೆಯರು ಕಚೇರಿ ಕೆಲಸದ ಒತ್ತಡದ ಮಧ್ಯೆಯೂ ತಮ್ಮ ವೈಯಕ್ತಿಕ ಕೆಲಸಕ್ಕೆ ಸಮಯ ಹುಡುಕಿಕೊಳ್ಳುವುದು ಸಾಧ್ಯವಾಗಿತ್ತು ಎಂದಿದ್ದಾರೆ. ಶೇ.21ರಷ್ಟು ಮಹಿಳೆಯರಂತೂ ವರ್ಕ್​ ಫ್ರಂ ಹೋಮ್ ಹೀಗೇ ಮುಂದುವರೆಯಲಿ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿಕೊಂಡರೆ, ಶೇ.48ರಷ್ಟು ಮಂದಿ ಕಚೇರಿ ಕೆಲಸಕ್ಕೂ ಅವಕಾಶ ಇರಬೇಕು ಎಂದು ಬಯಸಿದ್ದಾರೆ. ಒಟ್ಟಾರೆ ಅಧ್ಯಯನದಲ್ಲಿ ಶೇ.61ರಷ್ಟು ಮಹಿಳೆಯರು ತಮಗೆ ಉದ್ಯೋಗ ಮತ್ತು ವೈಯಕ್ತಿಕ ಕೆಲಸದ ಅವಶ್ಯಕತೆಗಳನ್ನು ಪೂರೈಸುವುದು ಸವಾಲಾಯಿತು. ಕುಟುಂಬ ಮತ್ತು ಕಚೇರಿಗೆ ಎಷ್ಟು ಸಮಯ ಕೊಡಬೇಕು, ಏನು ಮಾಡಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವೆನಿಸಿತು ಎಂದು ಹೇಳಿಕೊಂಡಿದ್ದಾರೆ.

ಅಂತೆಯೇ, ಮನೆಯಿಂದ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಸಂಸ್ಥೆಗಳು ಹೇಗೆ ಸಹಕರಿಸಿದವು ಎಂಬ ಪ್ರಶ್ನೆಗೆ ಶೇ.36ರಷ್ಟು ಮಹಿಳೆಯರು ಸಂಸ್ಥೆಯ ಸಹಕಾರ ಅತ್ಯುತ್ತಮವಾಗಿತ್ತು ಎಂದರೆ, ಶೇ.21 ಮಂದಿ ಬೇಸರ ಹೊರಹಾಕಿದ್ದಾರೆ. ಇನ್ನೊಂದೆಡೆ ಮನೆಯಿಂದ ಕೆಲಸ ಮಾಡಲು ಸಂಸ್ಥೆ ಒದಗಿಸಿದ ಸೌಲಭ್ಯದ ಬಗ್ಗೆ ಶೇ.21ಮಂದಿ ಸಂತಸ ವ್ಯಕ್ತಪಡಿಸಿದರೆ, ಶೇ.8 ಮಂದಿ ಉಪಕರಣಗಳ ಹೊರತಾಗಿ ಇಂಟರ್​ನೆಟ್​ ಸೌಲಭ್ಯವನ್ನು ತಾವೇ ಭರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಈ ಅಧ್ಯಯನದಲ್ಲಿ ಶೇ.65ರಷ್ಟು ಮಹಿಳೆಯರು ಕೆಲಸದ ಅವಧಿ ಇಳಿಸಬೇಕು ಅಥವಾ ಕೆಲಸದ ಅವಧಿ ಬದಲಾಯಿಸಿಕೊಳ್ಳಲು ಅವಕಾಶ ಬೇಕು ಎಂದೂ ಬಯಸಿದ್ದಾರೆ. ವರ್ಕ್​ ಫ್ರಂ ಹೋಮ್​ನಿಂದಾಗಿ ಮಾನಸಿಕ ಒತ್ತಡವೂ ಹೆಚ್ಚಾಗಿದ್ದು, ಅದನ್ನು ನಿಭಾಯಿಸಲು ಸಂಸ್ಥೆ ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿದ್ದಾಗಿ ಶೇ.12ರಷ್ಟು ಜನ ಹೇಳಿದ್ದು, ಶೇ.6ರಷ್ಟು ಜನ ಮಾನಸಿಕ ನೆಮ್ಮದಿಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಸಂಸ್ಥೆ ಮಾಹಿತಿ ಒದಗಿಸಿತ್ತೆಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಸದರಿ ವರದಿಯು ಹೊಸ ಅಂಶವೊಂದನ್ನು ಬಯಲು ಮಾಡಿದ್ದು, ಲಾಕ್​ಡೌನ್​ ಅವಧಿಯಲ್ಲಿ ಉದ್ಯೋಗಸ್ಥ ಮಹಿಳೆಯರು ಎದುರಿಸಿದ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಬೆಳಕು ಚೆಲ್ಲಲು ಸಹಕರಿಸಿದೆ.

ಇದನ್ನೂ ಓದಿ: Women in road accidents: ಮಹಿಳೆಯರು ಚಿಕ್ಕಗಾತ್ರದ ಕಾರುಗಳನ್ನು ಓಡಿಸುವುದರಿಂದಲೇ ಹೆಚ್ಚು ಆಪಘಾತಕ್ಕೀಡಾಗುತ್ತಾರೆ: ಸಂಶೋಧನೆ

Self Love: ನಿಮ್ಮನ್ನು ನೀವು ಅಗಾಧವಾಗಿ ಪ್ರೀತಿಸಿಕೊಂಡರೆ ಮಾತ್ರ ಈ ಜಗತ್ತನ್ನು ಪ್ರೀತಿಸುವುದು ಸುಲಭ

PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು ಎಂದ ಮೋದಿ
PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು ಎಂದ ಮೋದಿ
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ