ಕುತೂಹಲ ಕೆರಳಿಸಿದ ಸುದೀಪ್-ಇಂದ್ರಜಿತ್ ಸಿದ್ಧಗಂಗಾ ಮಠ ದಿಢೀರ್​ ಭೇಟಿ

ತುಮಕೂರು: CCB ವಿಚಾರಣೆ ಬಳಿಕ ಇಂದು ಸಿದ್ಧಗಂಗಾ ಮಠಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಭೇಟಿಕೊಟ್ಟಿದ್ದಾರೆ. ಜಿಲ್ಲೆಯಲ್ಲಿರುವ ಸಿದ್ಧಗಂಗಾ ಮಠಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆ ನಟ ಸುದೀಪ್​ ಸಹ ಭೇಟಿಕೊಟ್ಟಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಪೇಟ ತೋಡಿಸಿ ಹಾರ ಹಾಕಿ ಶ್ರೀಗಳ ಭಾವಚಿತ್ರಕ್ಕೆ ಗೌರವ ನೀಡಿದ ಇಂದ್ರಜೀತ್ ಲಂಕೇಶ್​ರಿಗೂ ಕೂಡ ಸನ್ಮಾನ ಮಾಡಲಾಯಿತು. ದರ್ಶನದ ಬಳಿಕ ಮಾತನಾಡಿದ ಸುದೀಪ್​ ತುಂಬಾ ದಿನಗಳ ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದೆ. ಸಿದ್ಧಗಂಗಾ ಮಠಕ್ಕೆ 4 ತಿಂಗಳಿಂದ ಭೇಟಿ ನೀಡಲು […]

ಕುತೂಹಲ ಕೆರಳಿಸಿದ ಸುದೀಪ್-ಇಂದ್ರಜಿತ್ ಸಿದ್ಧಗಂಗಾ ಮಠ ದಿಢೀರ್​ ಭೇಟಿ

Updated on: Sep 01, 2020 | 2:20 PM

ತುಮಕೂರು: CCB ವಿಚಾರಣೆ ಬಳಿಕ ಇಂದು ಸಿದ್ಧಗಂಗಾ ಮಠಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಭೇಟಿಕೊಟ್ಟಿದ್ದಾರೆ.

ಜಿಲ್ಲೆಯಲ್ಲಿರುವ ಸಿದ್ಧಗಂಗಾ ಮಠಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆ ನಟ ಸುದೀಪ್​ ಸಹ ಭೇಟಿಕೊಟ್ಟಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಪೇಟ ತೋಡಿಸಿ ಹಾರ ಹಾಕಿ ಶ್ರೀಗಳ ಭಾವಚಿತ್ರಕ್ಕೆ ಗೌರವ ನೀಡಿದ ಇಂದ್ರಜೀತ್ ಲಂಕೇಶ್​ರಿಗೂ ಕೂಡ ಸನ್ಮಾನ ಮಾಡಲಾಯಿತು.

ದರ್ಶನದ ಬಳಿಕ ಮಾತನಾಡಿದ ಸುದೀಪ್​ ತುಂಬಾ ದಿನಗಳ ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದೆ. ಸಿದ್ಧಗಂಗಾ ಮಠಕ್ಕೆ 4 ತಿಂಗಳಿಂದ ಭೇಟಿ ನೀಡಲು ಆಗಿರಲಿಲ್ಲ. ಜೊತೆಗೆ, ಸಿದ್ಧಗಂಗಾ ಮಠಕ್ಕೆ ದೇಣಿಗೆ ನೀಡಬೇಕಿತ್ತು. ಹಾಗಾಗಿ ಇಂದು ಭೇಟಿಕೊಟ್ಟೆ ಎಂದು ಸುದೀಪ್​ ತಿಳಿಸಿದ್ದಾರೆ. ನಾಳೆ ನನ್ನ ಹುಟ್ಟುಹಬ್ಬ ಇದೆ. ಆದರೆ, ಆ ಸಂಬಂಧವಾಗಿ ಇಂದು ದರ್ಶನ ಪಡೆದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ನಮಗೆ ರೈಸ್, ದಾಲ್​ ಗೊತ್ತು: ಆದರೆ ಅದರ ಬಗ್ಗೆ ಗೊತ್ತಿಲ್ಲ’

Published On - 1:09 pm, Tue, 1 September 20