AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಗೆಲುವನ್ನ ಕಸಿದುಕೊಂಡ ಆನ್​ಫೀಲ್ಡ್ ಅಂಪೈರ್

ಕೊನೇ ಎಸೆತದವರೆಗೂ ರಣರೋಚಕತೆ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಡೆಲ್ಲಿ ಸೂಪರ್ ಓವರ್​ನಲ್ಲಿ ಪಂದ್ಯ ಗೆದ್ದು ಬೀಗಿತು. ಇಂಟ್ರಸ್ಟಿಂಗ್ ವಿಷ್ಯ ಅಂದ್ರೆ, ಇದೇ ಪಂದ್ಯದಲ್ಲಿ ಪಂಜಾಬ್ ಸೋಲೋದಕ್ಕೆ ಅಂಪೈರ್ ಮಾಡಿದ ಮಹಾ ಪ್ರಮಾದವೇ ಕಾರಣ. ಡೆಲ್ಲಿ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಅಂಪೈರ್ ಮಾಡಿದ ಮಹಾ ಎಡವಟ್ಟಿನಿಂದ, ಸೂಪರ್ ಓವರ್ ನಡೆಯೋ ಹಾಗಾಯ್ತು. ಪಂಜಾಬ್ ತಂಡ ಸೋಲೋ ಹಾಗಾಯ್ತು. ಒಂದು ವೇಳೆ ಆನ್​ಫೀಲ್ಡ್ ಅಂಪೈರ್ ಪ್ರಮಾದ ಮಾಡದೇ ಇದ್ದಿದ್ರೆ, ಪಂಜಾಬ್ ಗೆಲುವಿನ ಕೇಕೆ ಹಾಕ್ತಿತ್ತು. ಅಂಪೈರ್ ನಿತಿನ್ […]

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಗೆಲುವನ್ನ ಕಸಿದುಕೊಂಡ ಆನ್​ಫೀಲ್ಡ್ ಅಂಪೈರ್
ಆಯೇಷಾ ಬಾನು
|

Updated on: Sep 22, 2020 | 9:30 AM

Share

ಕೊನೇ ಎಸೆತದವರೆಗೂ ರಣರೋಚಕತೆ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಡೆಲ್ಲಿ ಸೂಪರ್ ಓವರ್​ನಲ್ಲಿ ಪಂದ್ಯ ಗೆದ್ದು ಬೀಗಿತು. ಇಂಟ್ರಸ್ಟಿಂಗ್ ವಿಷ್ಯ ಅಂದ್ರೆ, ಇದೇ ಪಂದ್ಯದಲ್ಲಿ ಪಂಜಾಬ್ ಸೋಲೋದಕ್ಕೆ ಅಂಪೈರ್ ಮಾಡಿದ ಮಹಾ ಪ್ರಮಾದವೇ ಕಾರಣ.

ಡೆಲ್ಲಿ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಅಂಪೈರ್ ಮಾಡಿದ ಮಹಾ ಎಡವಟ್ಟಿನಿಂದ, ಸೂಪರ್ ಓವರ್ ನಡೆಯೋ ಹಾಗಾಯ್ತು. ಪಂಜಾಬ್ ತಂಡ ಸೋಲೋ ಹಾಗಾಯ್ತು. ಒಂದು ವೇಳೆ ಆನ್​ಫೀಲ್ಡ್ ಅಂಪೈರ್ ಪ್ರಮಾದ ಮಾಡದೇ ಇದ್ದಿದ್ರೆ, ಪಂಜಾಬ್ ಗೆಲುವಿನ ಕೇಕೆ ಹಾಕ್ತಿತ್ತು.

ಅಂಪೈರ್ ನಿತಿನ್ ಮೆನನ್ ಎಡವಟ್ಟು.. ಪಂಜಾಬ್​ಗೆ ಸೋಲು! ಆರಂಭದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕಿಂಗ್ಸ್ ಇಲೆವೆನ್​ಗೆ, ಕನ್ನಡಿಗ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಮಾಡಿ, ಗೆಲುವಿನ ದಡಕ್ಕೆ ಕೊಂಡೊಯ್ದಿದ್ರು. ಕಗಿಸೋ ರಬಾಡರ 19ನೇ ಓವರ್​ನ 2ನೇ ಎಸೆತವನ್ನ ಮಯಾಂಕ್ ಬೌಂಡರಿ ಬಾರಿಸಿದ್ರು. 3ನೇ ಎಸೆತವನ್ನ ಎಕ್ಟ್ರಾ ಕವರ್​ನತ್ತ ಚೆಂಡನ್ನ ಡ್ರೈವ್ ಮಾಡಿದ್ದ ಮಯಾಂಕ್, ಎರಡು ರನ್ ಓಡಿದ್ರು.

ಇಲ್ಲೇ ನೋಡಿ.. ಅಂಪೈರ್ ನಿತಿನ್ ಮೆನನ್ ಮಾಡಿದ ಮಹಾ ಎಡವಟ್ಟು. ಮಯಾಂಕ್ ಅಗರ್ವಾಲ್, ಎರಡು ರನ್​ನ್ನ ಕಂಪ್ಲೀಟ್ ಆಗಿ ಓಡಿರ್ತಾರೆ. ಆದ್ರೆ, ಇನ್ನೊಂದು ಬದಿಯಲ್ಲಿದ್ದ ಕ್ರಿಸ್ ಜೋರ್ಡನ್, ಸರಿಯಾಗಿ ಗೆರೆ ಮುಟ್ಟಿಲ್ಲ ಅಂತ ಒಂದು ರನ್ ಕಡಿತಗೊಳಿಸಿದ್ರು.

ಕ್ರಿಕೆಟ್ ಆಡೋ ಪ್ರತಿಯೊಬ್ಬರಿಗೂ ಗೊತ್ತಾಗುತ್ತೆ ಜೋರ್ಡಾನ್ ಕ್ರೀಸ್ ಗೆರೆ ಮುಟ್ಟಿದ್ದಾರೆ ಅನ್ನೋದು. ಆದ್ರೆ, ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಆಗಿರೋ ನಿತಿನ್ ಮೆನನ್, ಜೋರ್ಡಾನ್ ಸರಿಯಾಗಿ ಗೆರೆ ಮುಟ್ಟಿಲ್ಲ. ಇದು ಶಾರ್ಟ್ ರನ್ ಅಂತ ಒಂದೇ ರನ್ ನೀಡಿಬಿಡ್ತಾರೆ.

ಅಂಪೈರ್ ಮೆನನ್ ವಿರುದ್ಧ ಸೆಹ್ವಾಗ್ ಕಿಡಿ! ಇನ್ನೂ ಅಂಪೈರ್ ಮೆನನ್ ಎಡವಟ್ಟಿನ ಬಗ್ಗೆ ಪಂಜಾಬ್ ತಂಡ, ಮ್ಯಾಚ್ ರೆಫ್ರಿಗೆ ವರದಿ ಸಲ್ಲಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮೆನನ್ ವಿರುದ್ಧ ಕೆಂಡಕಾರುತ್ತಿದ್ದಾರೆ. ಕಾಮೆಂಟೆರಿ ಮಾಡ್ತಿದ್ದ ಸುನಿಲ್ ಗವಾಸ್ಕರ್ ಕೂಡ, ಇದು ಸರಿಯಾದ ನಿರ್ಧಾರವಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಈ ಪಂದ್ಯದಲ್ಲಿ ಅಂಪೈರ್ ಮೆನನ್​ಗೆ ಮ್ಯಾಚ್ ಆಫ್ ದಿ ಮ್ಯಾಚ್ ಕೊಡ್ಬೇಕು ಅಂತ ಟೀಕೆ ಮಾಡಿದ್ದಾರೆ.

ಆನ್​ಫೀಲ್ಡ್ ಅಂಪೈರ್ ಇಂದ ಏನೋ ಮಿಸ್ಟೇಕ್ ಆಗಿದೆ ಅಂತಿಟ್ಕೊಳ್ಳೋಣ. ಆದ್ರೆ ಥರ್ಡ್ ಅಂಪೈರ್ ಹಾಗೂ ಸಾಕಷ್ಟು ಟೆಕ್ನಾಲಜಿ ಮುಂದುವರೆದಿದ್ರೂ, ಪಂಜಾಬ್ ತಂಡಕ್ಕೆ ಆನ್ ಫೀಲ್ಡ್ ಅಂಪೈರ್​ಗಳಿಂದ ಮೋಸವಾಗಿರೋದು ನಿಜಕ್ಕೂ ದುರಂತ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ