ಕರ್ನಾಟಕದಿಂದ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಅನೇಕ ಶಾಸಕರು ಮತ್ತು ಸಚಿವರುಗಳ ನಿಕಟ ಸಂಬಂಧಿಕರು ಸ್ಪರ್ಧೆಗೆ ಇಳಿದಿದ್ದಾರೆ. ಹಾಲಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಗಾಗಿ ಭಾರೀ ಕಿತ್ತಾಟ ನಡೆದಿದ್ದು, ಭಾರತೀಯ ಜನತಾ ಪಕ್ಷದ ವರಿಷ್ಠರಿಗೆ ಟಿಕೆಟ್ ಹಂಚಿಕೆ ಇನ್ನೂ ಕಾಡತೊಡಗಿತ್ತಿದೆ. ಆದರೆ ಅದೇ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ವಿಭಿನ್ನ ರೀತಿಯ ಸಮಸ್ಯೆ ಎದುರಿಸುತ್ತಿರುವಂತೆ ಕಂಡುಬಂದಿದೆ. ಸಾಮಾನ್ಯ ಅಭ್ಯರ್ಥಿಗಳು ಯಾರೂ ಟಿಕೆಟ್ ಕೇಳಿಕೊಂಡು ಮುಂದೆಬಂದಿಲ್ಲ. ಸೋಲುವ ಯುದ್ಧದಲ್ಲಿ ಬಡಿದಾಡುವುದುರ ಫಲವೇನು ಎಂಬ ಲೆಕ್ಕಾಚಾರ ಹಾಕಿ ಕಣಕ್ಕೆ ಇಳಿಯದೆ, ದೂರ ಸರಿದಿದ್ದಾರೆ. ಆ ಒಂದು ಮೇಲ್ವರ್ಗ ಅಂದರೆ ಶಾಸಕರು ಮತ್ತು ಸಚಿವರುಗಳ ನಿಕಟ ಸಂಬಂಧಿಕರು ಅದಮ್ಯ ಉತ್ಸಾಹದಿಂದ ಟಿಕೆಟ್ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಬಹುಶಃ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬಾಂಧವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರಬೇಕು. ಅಂದರೆ ಕರ್ನಾಟಕದಿಂದ ಕಾಂಗ್ರೆಸ್ನ ಅಭ್ಯರ್ಥಿಗಳ ಪಟ್ಟಿಯು ರಾಜ್ಯ ಸಚಿವರು ಮತ್ತು ಶಾಸಕರ ಸಂಬಂಧಿಕರ ಹೆಸರನ್ನು ಒಳಗೊಂಡಿದೆ. ಇವರಲ್ಲಿ ಪುತ್ರರು, ಪುತ್ರಿಯರು, ಪತ್ನಿಯರು ಮತ್ತು ಸಮೀಪದ ಸಂಬಂಧಿಕರು ಇದ್ದಾರೆ. ಸುಮಾರು 20 ಮಂದಿ ‘ಕೌಟುಂಬಿಕ ಅಭ್ಯರ್ಥಿಗಳು’ 2024 ರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಸಕ್ರಿಯವಾಗಿರುವ, ಪ್ರಭಾವಿಯಾಗಿರುವ ಯಾವುದೇ ನಾಯಕರೊಂದಿಗೆ ಕೌಟುಂಬಿಕ ಸಂಪರ್ಕವನ್ನು ಹೊಂದಿದ್ದಾರೆ. ಇದರರ್ಥ ಕರ್ನಾಟಕದ 28 ಲೋಕಸಭಾ ಅಭ್ಯರ್ಥಿಗಳ ಪೈಕಿ 18 ಅಭ್ಯರ್ಥಿಗಳು ಸ್ವಜನಪಕ್ಷಪಾತದ ಸಂಕೋಲೆಯೊಳಗೆ ಬಂಧಿಯಾಗಿ ಟಿಕೆಟ್ ಪಡೆದ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಆರೋಪವು ಈಗಾಗಲೇ ಕಾಂಗ್ರೆಸ್ನ ಇಮೇಜ್ ಅನ್ನು ಕಳಂಕಗೊಳಿಸಿದೆ. ಹಾಲಿ ಶಾಸಕರು ಮತ್ತು ಸಚಿವರು ಯಾರೂ ಕಣಕ್ಕೆ ಇಳಿದು ತಮ್ಮ ಶಾಸಕ ಸ್ಥಾನಗಳನ್ನು ಬಿಟ್ಟುಕೊಡಲು ಅಥವಾ...