Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಲಸೆ ಕಾರ್ಮಿಕರ ಮೇಲೆ ದರ್ಪ ತೋರಿದ್ದ ಬೆಂಗಳೂರಿನ ASI ಅಮಾನತು

ಬೆಂಗಳೂರು: ವಲಸೆ ಕಾರ್ಮಿಕರ ಜೊತೆ ಅಸಭ್ಯ ವರ್ತನೆ ತೋರಿ ದರ್ಪ ಮೆರೆದಿದ್ದ ಕೆ.ಜಿ.‌ಹಳ್ಳಿ‌ ಪೊಲೀಸ್ ಠಾಣೆಯ ASI ರಾಜಾಸಾಬ್​ ಅಮಾನತಾಗಿದ್ದಾರೆ. ರಾಜಾಸಾಬ್​ರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆದೇಶಿಸಿದ್ದಾರೆ. ಲಾಕ್​ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ವಲಸೆ ಕಾರ್ಮಿಕರನ್ನು ಹೊರ ರಾಜ್ಯಕ್ಕೆ ಮತ್ತು ಹೊರ‌ ಜಿಲ್ಲೆಗಳಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿತ್ತು. ತಮ್ಮ ರಾಜ್ಯಕ್ಕೆ ತೆರಳು ವಲಸೆ ಕಾರ್ಮಿಕರು ಕೆ.ಜಿ.‌ಹಳ್ಳಿ‌ ಪೊಲೀಸ್ ಠಾಣೆಗೆ ಬಂದಿದ್ದರು. ಇಲ್ಲಿ ನೋಂದಣಿ ಮಾಡುವುದಿಲ್ಲ ಹೋಗಿ ಎಂದು ವಲಸೆ ಕಾರ್ಮಿಕರ […]

ವಲಸೆ ಕಾರ್ಮಿಕರ ಮೇಲೆ ದರ್ಪ ತೋರಿದ್ದ ಬೆಂಗಳೂರಿನ ASI ಅಮಾನತು
Follow us
ಸಾಧು ಶ್ರೀನಾಥ್​
|

Updated on:May 12, 2020 | 12:37 PM

ಬೆಂಗಳೂರು: ವಲಸೆ ಕಾರ್ಮಿಕರ ಜೊತೆ ಅಸಭ್ಯ ವರ್ತನೆ ತೋರಿ ದರ್ಪ ಮೆರೆದಿದ್ದ ಕೆ.ಜಿ.‌ಹಳ್ಳಿ‌ ಪೊಲೀಸ್ ಠಾಣೆಯ ASI ರಾಜಾಸಾಬ್​ ಅಮಾನತಾಗಿದ್ದಾರೆ. ರಾಜಾಸಾಬ್​ರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆದೇಶಿಸಿದ್ದಾರೆ.

ಲಾಕ್​ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ವಲಸೆ ಕಾರ್ಮಿಕರನ್ನು ಹೊರ ರಾಜ್ಯಕ್ಕೆ ಮತ್ತು ಹೊರ‌ ಜಿಲ್ಲೆಗಳಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿತ್ತು. ತಮ್ಮ ರಾಜ್ಯಕ್ಕೆ ತೆರಳು ವಲಸೆ ಕಾರ್ಮಿಕರು ಕೆ.ಜಿ.‌ಹಳ್ಳಿ‌ ಪೊಲೀಸ್ ಠಾಣೆಗೆ ಬಂದಿದ್ದರು. ಇಲ್ಲಿ ನೋಂದಣಿ ಮಾಡುವುದಿಲ್ಲ ಹೋಗಿ ಎಂದು ವಲಸೆ ಕಾರ್ಮಿಕರ ಜತೆ ಅಸಭ್ಯವಾಗಿ ವರ್ತಿಸಿ, ಥಳಿಸಿದ್ದರು.

ಅಲ್ಲದೆ ಕಾರ್ಮಿಕನ ಮೇಲೆ ಕೈಮಾಡಿ, ಬೂಟುಗಾಲಿನಿಂದ ಎಎಸ್​ಐ ರಾಜಾಸಾಬ್ ಒದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಾಗಾಗಿ ರಾಜಾಸಾಬ್​ರನ್ನು ಡಿಸಿಪಿ ಶರಣಪ್ಪ ಅಮಾನತು ಮಾಡಿದ್ದಾರೆ.

Published On - 7:51 pm, Mon, 11 May 20