Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳು ನಟಿ ಚಿತ್ರಾ ಸಾವಿನ ಸೀಕ್ರೆಟ್ ರಿವೀಲ್‌.. ಕಾರಣ ಏನು ಗೊತ್ತಾ?

ಆಕೆ ತಮಿಳಿನ ನಟಿ. ಕಿರು ತೆರೆ ಮೇಲೆ ನಟಿಸಿ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ಲು.ಆದ್ರೆ ಆಕೆ ಕೆಲ ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ಲು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ರು. ಈಗ ತನಿಖೆಯಲ್ಲಿ ಕೊಲೆ ಮಾಡಿದ್ದು ಯಾರು, ಕೊಲೆಗೆ ಕಾರಣವೇನು ಅನ್ನೋದು ರಿವೀಲ್ ಆಗಿದೆ.

ತಮಿಳು ನಟಿ ಚಿತ್ರಾ ಸಾವಿನ ಸೀಕ್ರೆಟ್ ರಿವೀಲ್‌.. ಕಾರಣ ಏನು ಗೊತ್ತಾ?
ತಮಿಳು ನಟಿ ಚಿತ್ರಾ
Follow us
ಆಯೇಷಾ ಬಾನು
|

Updated on: Dec 20, 2020 | 6:56 AM

ಹೈದರಾಬಾದ್‌: ನೋಡೋಕೆ ಸುಂದರಿ.. ನಟನೆಯಲ್ಲಿ ಎತ್ತಿದ ಕೈ.. ತನ್ನ ನಗುವಿನ ಮೂಲಕವೇ ಅದೆಷ್ಟೋ ಅಭಿಮಾನಿಗಳ ಮನಸ್ಸು ಕದ್ದ ಚೆಲುವೆ. ಸಾಧನೆ ಮಾಡ್ಬೇಕು, ಎಲ್ಲರಂತೆ ನಾನು ದೊಡ್ಡ ನಟಿ ಆಗ್ಬೇಕು ಅನ್ನೋ ಕನಸು ಕಂಡಿದ್ದ ನಟಿ..

ಜೀವವನ್ನೇ ತೆಗೆದ ಸೀರಿಯಲ್‌ ಕಿಸ್ಸಿಂಗ್ ಸೀನ್‌: ಈಕೆಯ ಹೆಸರು ಚಿತ್ರಾ.. 28 ವರ್ಷ. ಚನ್ನೈನಲ್ಲಿ ವಾಸಿಸುತ್ತಿದ್ದ ಈಕೆ ತಮಿಳು ಚಿತ್ರೋದ್ಯಮದ ಉದಯೋನ್ಮುಖ ನಟಿ. ಸಿನಿಮಾ ಹಾಗೂ ಕಿರುತೆರೆಯಲ್ಲಿ ತನ್ನ ಅಭಿನಯದಿಂದ ಒಳ್ಳೆಯ ಹೆಸರು ಪಡೆದಿದ್ದ ನಟಿ. ಆದ್ರೆ ಇದೇ ತಿಂಗಳ 9ರಂದು ಚನ್ನೈನ ಹೊರ ವಲಯದ ಖಾಸಗಿ ಹೋಟೆಲ್​ವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ಲು.

ಈಕೆಯ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಚಿತ್ರಾಳ ಕುಟುಂಬಸ್ಥರು ಇದನ್ನು ಕೊಲೆ ಎಂದು ಆರೋಪಿಸಿದ್ದು ಪತಿ ಹೇಮಂತ್ ಕೊಲೆ ಮಾಡಿದ್ದಾಗಿ ಆರೋಪಿಸಿದ್ದರು. ಈ ಬಗ್ಗೆ ಪೊಲೀಸರಿಗೆ ಸಹ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಚನ್ನೈನ ಪೊಲೀಸರು ಪತಿ ಹೇಮಂತನನ್ನು ಬಂಧಿಸಿದ್ದರು. ನಂತರ ನ್ಯಾಯಾಂಗ ಬಂಧನಕ್ಕೆ ಸಹ ಒಳಪಡಿಸಿದ್ದರು.

ಸದ್ಯ ನಟಿ ಚಿತ್ರ ಸಾವಿಗೆ ಮುಖ್ಯವಾದ ಕಾರಣ ಏನು ಅನ್ನೋದು ಈಗ ಬಯಲಾಗಿದೆ. ನಟಿ ಸಾವಿನ ಮುಂಚೆ ನಟಿಸಿದ ಹೊಸ ಧಾರವಾಹಿಯೊಂದರಲ್ಲಿ ಕಿಸ್ಸಿಂಗ್ ಸೀನ್‌ನಲ್ಲಿ ನಟಿಸಿದ್ದು ಈಕೆಯ ಸಾವಿಗೆ ಕಾರಣ ಎಂದು ಬಯಲಾಗಿದೆ. ಪಾಂಡಿಯನ್ ಸ್ಟೋರ್ಸ್ ಅನ್ನೋ ಧಾರವಾಹಿಯಲ್ಲಿ ಕಿಸ್ಸಿಂಗ್ ಸೀನ್​ನಲ್ಲಿ ನಟಿ ಚಿತ್ರಾ ನಟಿಸಿದ್ದಳು. ಆದ್ರೆ, ಇದಕ್ಕೆ ಪತಿ ಹೇಮಂತ್ ವಿರೋಧಿಸಿದ್ದ. ಹೀಗಾಗಿ ಆತ ಈ ವಿಷಯ ಹಿಡಿದುಕೊಂಡು ನಟಿ ಚಿತ್ರಾಳಿಗೆ ತೀವ್ರವಾಗಿ ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಧಾರವಾಹಿಯ ಕಿಸ್ಸಿಂಗ್ ಸೀನ್​ನಲ್ಲಿ ನಟಿಸುವಾಗ ಶೂಟಿಂಗ್ ಸ್ಪಾಟ್​ಗೆ ಹೋಗಿದ್ದ ಪತಿ ಹೇಮಂತ್ ಚಿತ್ರೀಕರಣವನ್ನ ವೀಕ್ಷಿಸಿದ್ದ.

ನಂತರದಲ್ಲಿ ಹೋಟೆಲ್​ಗೆ ವಾಪಸ್ಸು ಬಂದ ಮೇಲೆ ಕಿಸ್ಸಿಂಗ್ ದೃಶ್ಯದ ಬಗ್ಗೆ ವಿರೋಧಿಸಿದ್ದ. ನಟಿ ಚಿತ್ರಾಳ ಕ್ಯಾರೆಕ್ಟರ್ ಮೇಲೆ ಸಾಕಷ್ಟು ಆರೋಪ ಮಾಡಿದ್ದ ಎನ್ನಲಾಗಿದೆ. ಚಿತ್ರಾ ಪತಿಗೆ ಕೇವಲ ಪಾತ್ರದ ಭಾಗವಾಗಿ ರೋಮ್ಯಾನ್ಸ್‌ ಸೀನ್​ನಲ್ಲಿ ನಟಿಸಿದ್ದಾಗಿ, ಅದು ಬಿಟ್ಟು ಬೇರೆ ಉದ್ದೇಶ ಇಲ್ಲ ಎಂದು ಉತ್ತರ ನೀಡಿದ್ಲು. ಈ ವೇಳೆ ಇಬ್ಬರ ಜಗಳ ತಾರಕಕ್ಕೇರಿದೆ. ನಂತರದಲ್ಲಿ ಮರುದಿನ ಬೆಳಗ್ಗೆ ಚಿತ್ರಾಳ ಶವ ಅನುಮಾನಾಸ್ಪದ ರೀತಿಯಲ್ಲಿ ಸಿಕ್ಕಿತ್ತು.

ಧಾರವಾಹಿಯಲ್ಲಿ ಕಿಸ್ಸಿಂಗ್ ಸೀನ್‌ನಲ್ಲಿ ನಟಿಸಿದ್ದಕ್ಕೆ ಹೇಮಂತ್‌ ಚಿತ್ರಾಳನ್ನ ಕೊಂದಿದ್ದಾನೆ ಅನ್ನೋದು ತನಿಖೆಯಿಂದ ಗೊತ್ತಾಗಿದೆ. ಕೇವಲ ನಟನೆ ಮಾಡಿದ್ದಕ್ಕೆ ಹೇಮಂತ್‌ ನಟಿ ಚಿತ್ರಾಳನ್ನ ಕೊಂದಿದ್ದು ನಿಜಕ್ಕೂ ವಿಪರ್ಯಾಸ.

ನಟಿ ಚಿತ್ರಾ ಆತ್ಮಹತ್ಯೆಗೆ ಹೊಸ ತಿರುವು: 6 ದಿನಗಳ ವಿಚಾರಣೆ ಬಳಿಕ ಪತಿ ಹೇಮಂತ್ ಅರೆಸ್ಟ್

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು