ಚಿಕ್ಕಮಗಳೂರಿನಲ್ಲಿ ಜಮೀನು ವಿವಾದ; ಕಿಡಿಗೇಡಿಗಳಿಂದ ದಂಪತಿ ಮೇಲೆ ಮನಬಂದಂತೆ ಹಲ್ಲೆ

| Updated By: ಸಾಧು ಶ್ರೀನಾಥ್​

Updated on: Mar 04, 2021 | 4:48 PM

ಚಿಕ್ಕಮಗಳೂರಿನಲ್ಲಿ ಜಮೀನು ವಿವಾದ ವಿಚಾರವಾಗಿ ದಂಪತಿ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಚಿಕ್ಕಮಗಳೂರಿನಲ್ಲಿ ಜಮೀನು ವಿವಾದ; ಕಿಡಿಗೇಡಿಗಳಿಂದ ದಂಪತಿ ಮೇಲೆ ಮನಬಂದಂತೆ ಹಲ್ಲೆ
ಹಲ್ಲೆ ನಡೆಸಿ ಆರೋಪಿಗಳು ಪರಾರಿ
Follow us on

ಚಿಕ್ಕಮಗಳೂರು: ಜಮೀನು ವಿವಾದ ವಿಚಾರವಾಗಿ ದಂಪತಿ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಬಿಗ್ಗನಹಳ್ಳಿಯಲ್ಲಿ ಘಟನೆ ನಡೆದಿದ್ದು, ಮಂಜುನಾಥ ಹಾಗೂ ಪತ್ನಿ ಕಾವ್ಯ ಮೇಲೆ ಮನ ಬಂದಂತೆ ಹಲ್ಲೆ ಮಾಡಲಾಗಿದೆ. ಆರೋಪಿಗಳು ಹಲ್ಲೆ ನಡೆಸಿದ ಬಳಿಕ ಜಮೀನಿನ ಬೇಲಿ, ಕಾಫಿ ಗಿಡಗಳನ್ನು ನಾಶ ಮಾಡಿ ಪರಾರಿಯಾಗಿದ್ದಾರೆ. ಗಾಯಾಳು ಕಾವ್ಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ನೀಡಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೇತನ್, ಸಚಿನ್, ಗೋಪಾಲ ಸೇರಿ 6 ಜನರ ವಿರುದ್ಧ FIR ದಾಖಲಾಗಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ, ಬಳ್ಳಾರಿಯಲ್ಲಿ ಆಸ್ತಿ ವಿವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲೇ ವಕೀಲನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಕೋರ್ಟ್ ಆವರಣದಲ್ಲಿ ನಡೆದಿತ್ತು.ತಾರಿಹಳ್ಳಿ ನಿವಾಸಿ ವೆಂಕಟೇಶ್​ ಕೊಲೆಯಾದ ವಕೀಲರಾಗಿದ್ದು, ಆಸ್ತಿ ವಿವಾದ ಹಿನ್ನೆಲೆಯಲ್ಲಿ ವಕೀಲನನ್ನ ಕೊಂದಿರುವ ಶಂಕೆ ವ್ಯಕ್ತವಾಗಿತ್ತು. ವಕೀಲ ವೆಂಕಟೇಶ್​ನ ಸಂಬಂಧಿ ಯುವಕನಿಂದ ಈ ಕೃತ್ಯ ನಡೆದಿದ್ದು, ಲಾಂಗ್​ನಿಂದ ಮನಸೋ ಇಚ್ಛೆ ಕೊಚ್ಚಿ ಕೊಲ್ಲಲಾಗಿತ್ತು.ಘಟನಾ ಸ್ಥಳಕ್ಕೆ ಹೊಸಪೇಟೆ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ: ಆಸ್ತಿ ವಿವಾದ: ಕೋರ್ಟ್ ಆವರಣದಲ್ಲೇ ಸಂಬಂಧಿ ಯುವಕನಿಂದ ಭೀಕರವಾಗಿ ಕೊಲೆಯಾದ ವಕೀಲ

ಇದನ್ನೂ ಓದಿ: ಜಮೀನು ವಿವಾದ: ಮರ ಕಡಿಯುವ ಕೊಡಲಿಯಿಂದ ಮಗನನ್ನು ಕೊಂದ ತಂದೆ