AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರಿಗೆ ರಕ್ಷಣೆ ಇಲ್ಲ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟ ಭಕ್ತರು..!

15 ಅಡಿ ಎತ್ತರದ ಏಕ ಶಿಲಾ ಮೂರ್ತಿಯಾಗಿ ನಿಂತಿರುವ ಶ್ರೀ ವಿಷ್ಣುವಿನ ಅವರಾತ ವರದರಾಜಸ್ವಾಮಿಗೆ ಬರೋಬ್ಬರಿ 15 ವರ್ಷಗಳಿಂದ ರಕ್ಷಣೆಯೇ ಇಲ್ಲದಂತಾಗಿದೆ.

ದೇವರಿಗೆ ರಕ್ಷಣೆ ಇಲ್ಲ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟ ಭಕ್ತರು..!
ಶ್ರೀ ಲಕ್ಷ್ಮಿವರದರಾಜಸ್ವಾಮಿ ದೇವಾಲಯ, ಗರ್ಭಗುಡಿ
sandhya thejappa
| Edited By: |

Updated on: Jan 27, 2021 | 1:28 PM

Share

ಹಾಸನ: ಜಿಲ್ಲೆಯ ಬಾಹುಬಲಿ ಮೂರ್ತಿ ಬಿಟ್ಟರೆ ನಂತರ ಸ್ಥಾನ 15 ಅಡಿ ಎತ್ತರದ ಶ್ರೀ ಲಕ್ಷ್ಮಿವರದರಾಜಸ್ವಾಮಿ ದೇವರ ಮೂರ್ತಿಗೆ ಸಲ್ಲಬೇಕು. ಇಂತಹ ವಿಶಿಷ್ಟ ವಾಸ್ತುಶಿಲ್ಪದ ದೇಗುಲಕ್ಕೆ ಕನಿಷ್ಠ ಕಿಟಕಿ ಬಾಗಿಲುಗಳಿಲ್ಲ. ಜೀರ್ಣೋದ್ಧಾರಕ್ಕೆಂದು 15 ವರ್ಷಗಳ ಹಿಂದೆ ಕೆಡವಿದ ಕಟ್ಟಡ ಹಾಳು ಬಿದ್ದಿದೆ. ಸಕಲ ಜೀವರಾಶಿಗಳನ್ನು ಕಾಯುತ್ತಾನೆಂದು ನಂಬುವ ವಿಷ್ಣುವಿನ ಅವತಾರವಾದ ವರದರಾಜಸ್ವಾಮಿಗೇ ಇಲ್ಲಿ ರಕ್ಷಣೆ ಇಲ್ಲದಂತಾಗಿರುವ ಬಗ್ಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶೀಘ್ರವೇ ದೇಗುಲಕ್ಕೆ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ.

ಹಾಸನದಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿರುವ ಕೊಂಡಜ್ಜಿ ಗ್ರಾಮದ ಐತಿಹಾಸಿಕ ಹಾಗು ಬರೊಬ್ಬರಿ 900 ವರ್ಷಗಳಷ್ಟು ಪುರಾತನ ಹೊಯ್ಸಳರ ಕಾಲದ ದೇವಾಲಯದ ಗರ್ಭಗುಡಿ ಬಾಗಿಲಿನೊಳಗೆ 15 ಅಡಿ ಎತ್ತರದ ಏಕ ಶಿಲಾ ಮೂರ್ತಿಯಾಗಿ ನಿಂತಿರುವ ಶ್ರೀ ವಿಷ್ಣುವಿನ ಅವತಾರ ವರದರಾಜಸ್ವಾಮಿಗೆ ಬರೋಬ್ಬರಿ 15 ವರ್ಷಗಳಿಂದ ರಕ್ಷಣೆಯೇ ಇಲ್ಲದಂತಾಗಿದೆ.

₹25 ಲಕ್ಷ ಬಿಡುಗಡೆ ಜೀರ್ಣೋದ್ದಾರಕ್ಕಾಗಿ ಹಳೆ ದೇವಾಲಯ ಕೆಡವಿದ ಬಳಿಕ 2010ರಲ್ಲಿ ಸಿಎಂ ಯಡಿಯೂರಪ್ಪರವರು ₹25 ಲಕ್ಷ ಬಿಡುಗಡೆ ಮಾಡಿದ್ದರು. ಬಿಡುಗಡೆಯಾದ ಹಣದಲ್ಲಿ ನಡೆದ ಅರ್ಧಂಬರ್ಧ ಕಾಮಗಾರಿಯಿಂದ ದೇವಾಲಯಕ್ಕೆ ಕಿಟಕಿ, ಬಾಗಿಲುಗಳಿಲ್ಲ, ನೆಲಕ್ಕೆ ಪ್ಲಾಸ್ಟರಿಂಗ್ ಮಾಡಲಾಗಿಲ್ಲ, ದೇಗುಲದ ಗರ್ಭಗುಡಿ ಬಾಗಿಲೂ ಭದ್ರವಾಗಿಲ್ಲ. ಹತ್ತಾರು ವರ್ಷಗಳಿಂದ ಅಲೆದು ಸುಸ್ತಾಗಿ ಕೈಚೆಲ್ಲಿ ಕೂತಿದ್ದ ಭಕ್ತರು, ಕಳೆದ ಸಂಕ್ರಾಂತಿ ಹಬ್ಬದ ದಿನ ವಿಡಿಯೊವೊಂದನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದರು. ರಾಜ್ಯದ ಅತ್ಯಂತ ಪುರಾತನ ಕಾಲದ ದೇಗುಲದ ದುಸ್ಥಿತಿ ಬಗ್ಗೆ ಜನರು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗು ಸ್ಥಳೀಯ ಶಾಸಕರು ಪರಿಶೀಲನೆ ನಡೆಸಿದರು.

ಇತಿಹಾಸವೇನು? 900 ವರ್ಷಗಳ ಹಿಂದೆ ಬೇಲೂರಿನ ವಿಶ್ವ ವಿಖ್ಯಾತ ಚೆನ್ನಕೇಶವ ದೇವಾಲಯ ನಿರ್ಮಾಣ ಮಾಡಿ ಅಲ್ಲಿಗೆ ದೇವರ ವಿಗ್ರಹ ಪ್ರತಿಷ್ಠಾಪಿಸಲು ಕೃಷ್ಣ ಶಿಲೆಯ ಈ ಬೃಹತ್ ಮೂರ್ತಿಯನ್ನು ಇದೇ ಕೊಂಡಜ್ಜಿ ಮಾರ್ಗದಲ್ಲಿ ಸಾಗಿಸಲಾಗುತ್ತಿತ್ತಂತೆ. ದಾರಿ ಮಧ್ಯೆ ಈ ಗ್ರಾಮದಲ್ಲಿ ವಿಶ್ರಾಂತಿ ಪಡೆದು ಇನ್ನೇನು ಬೇಲೂರಿಗೆ ತೆರಳಬೇಕೆನ್ನುವ ವೇಳೆಗೆ ಅಲ್ಲಿ ಗರ್ಭಗುಡಿ ನಿರ್ಮಾಣವಾಗಿತ್ತು. ಜೊತೆಗೆ ನಿರ್ಮಾಣವಾದ ಆ ಗರ್ಭಗುಡಿಗೆ ಈ ವಿಗ್ರಹ ದೊಡ್ಡದಾಯಿತೆಂದು ಇದನ್ನು ಇಲ್ಲಿಯೇ ಬಿಟ್ಟು ಹೋಗಿದ್ದರಂತೆ. ಆಗ ಇಲ್ಲಿನ ಜನರು ಈ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿದರೆಂಬುದು ಐತಿಹ್ಯ.

ಭಕ್ತರು ಮಾಡಿದ್ದ ವಿಡಿಯೊ ನೋಡಿದ ರಾಜ್ಯದ ಬೇರೆ ಬೇರೆ ಸಚಿವರು, ಶಾಸಕರು ನನ್ನ ಗಮನಕ್ಕೆ ತಂದರು. ಆದರೆ ಮೂರು ತಿಂಗಳ ಹಿಂದೆಯೇ ನಾನು ಗ್ರಾಮಕ್ಕೆ ಭೇಟಿ ನೀಡಿ ಈ ದೇವಾಲಯ ಅಭಿವೃದ್ದಿ ಬಗ್ಗೆ ಚರ್ಚೆಮಾಡಿ ಹೋಗಿದ್ದೆ. ಈಗ ಭಕ್ತರ ಆಸಕ್ತಿ ನೋಡಿ ನನಗೂ ಖುಷಿಯಾಗಿದೆ. ಮುಂದಿನ ಗಣರಾಜ್ಯೋತ್ಸವದ ಒಳಗಾಗಿ ದೇಗುಲದ ಸಂಪೂರ್ಣ ಜೀರ್ಣೋದ್ಧಾರ ಪೂರೈಸಿ ಸಿಎಂ ಯಡಿಯೂರಪ್ಪನವರಿಂದಲೇ ದೇವಾಲಯ ಉದ್ಘಾಟನೆ ಮಾಡಿಸಲಾಗುತ್ತದೆ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.

Ram Temple Construction Fund ರಾಮ ಮಂದಿರ ನಿರ್ಮಾಣ ನಿಧಿ ಅಭಿಯಾನ: RSSಗೆ ಸಾಥ್ ನೀಡಿದ ಸುಮಲತಾ

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ