AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವನಾಂಶ ಕೇಳಿದ್ದಕ್ಕೆ ಪತ್ನಿಯ ಜೀವ ತೆಗೆದ ಪತಿರಾಯ, ಈಗ ಅವನ ಪ್ರೇಯಸಿಯೂ ಅಂದರ್​

ಹಾಸನ: ಜಿಲ್ಲೆಯ ಚೀರನಹಳ್ಳಿ ಬಳಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಪತಿ ಹಾಗೂ ಪ್ರೇಯಸಿಯನ್ನು ಬಂಧಿಸಿದ್ದಾರೆ. ನಾಗರಾಜ್ ಹಾಗೂ ಆತನ ಪ್ರೇಯಸಿ ಶೈಲಾ ಬಂಧಿತ ಆರೋಪಿಗಳು. ಜೀವನಾಂಶ ನೀಡಲು ಕೇಸ್ ಹಾಕಿದ್ದಕ್ಕೆ ಕೊಲೆ ಅಂದ ಹಾಗೆ, ನವೆಂಬರ್​ 11ರಂದು ಚೀರನಹಳ್ಳಿ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಪೊಲೀಸರು ತನಿಖೆ ನಡೆಸಿದ ವೇಳೆ ಮೃತ ಮಹಿಳೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮದ ನಿವಾಸಿ ಸುಶ್ಮಿತಾ(26) ಎಂದು ತಿಳಿದುಬಂದಿತ್ತು. ಈ ಸುಳಿವನ್ನೇ […]

ಜೀವನಾಂಶ ಕೇಳಿದ್ದಕ್ಕೆ ಪತ್ನಿಯ ಜೀವ ತೆಗೆದ ಪತಿರಾಯ, ಈಗ ಅವನ ಪ್ರೇಯಸಿಯೂ ಅಂದರ್​
KUSHAL V
|

Updated on:Nov 23, 2020 | 5:23 PM

Share

ಹಾಸನ: ಜಿಲ್ಲೆಯ ಚೀರನಹಳ್ಳಿ ಬಳಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಪತಿ ಹಾಗೂ ಪ್ರೇಯಸಿಯನ್ನು ಬಂಧಿಸಿದ್ದಾರೆ. ನಾಗರಾಜ್ ಹಾಗೂ ಆತನ ಪ್ರೇಯಸಿ ಶೈಲಾ ಬಂಧಿತ ಆರೋಪಿಗಳು.

ಜೀವನಾಂಶ ನೀಡಲು ಕೇಸ್ ಹಾಕಿದ್ದಕ್ಕೆ ಕೊಲೆ ಅಂದ ಹಾಗೆ, ನವೆಂಬರ್​ 11ರಂದು ಚೀರನಹಳ್ಳಿ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಪೊಲೀಸರು ತನಿಖೆ ನಡೆಸಿದ ವೇಳೆ ಮೃತ ಮಹಿಳೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮದ ನಿವಾಸಿ ಸುಶ್ಮಿತಾ(26) ಎಂದು ತಿಳಿದುಬಂದಿತ್ತು. ಈ ಸುಳಿವನ್ನೇ ಬೆನ್ನತ್ತಿದ್ದ ಪೊಲೀಸರಿಗೆ ಇದೀಗ ಕೊಲೆಯ ಹಿಂದಿನ ಕಾರಣ ತಿಳಿದುಬಂದಿದೆ.

ಅಂದ ಹಾಗೆ, 6 ವರ್ಷದ ಹಿಂದೆ ಸುಶ್ಮಿತಾ ಹಾಗೂ ನಾಗರಾಜ್ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ  ವಿವಾಹವಾಗಿದ್ದರು. ಆದರೆ ನಾಗರಾಜ್, ಇತ್ತೀಚೆಗೆ ಶೈಲಾ ಎಂಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಮಾಹಿತಿ ಸಿಕ್ಕಿದೆ. ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಸುಶ್ಮಿತಾ ಆತನಿಂದ ದೂರವಾಗಿದ್ದಳು. ಇದಲ್ಲದೆ, ಗಂಡನಿಂದ ಜೀವನಾಂಶ ಪಡೆಯಲು ಕೇಸ್ ಸಹ ಹಾಕಿದ್ದಳು.

ಇದರಿಂದ ಹಾವಿನಂತೆ ಬುಸುಗುಟ್ಟಿದ ನಾಗರಾಜ್​ ನಿನ್ನ ಜೊತೆ ಕೇಸ್​ ಬಗ್ಗೆ ಮಾತನಾಡಬೇಕೆಂದು ನೆಪವೊಡ್ಡಿ ಅಕ್ಟೋಬರ್​ 29ರಂದು ಪತ್ನಿಯನ್ನು ಬೆಲಗೂರಿಗೆ ಕರೆಸಿಕೊಂಡಿದ್ದ. ಅಲ್ಲಿ ತನ್ನ ಪ್ರೇಯಸಿ ಶೈಲಾ ಜೊತೆ ಸೇರಿ ನಾಗರಾಜ್ ಸುಶ್ಮಿತಾಳನ್ನು ಕೊಂದಿದ್ದ.

ನಂತರ, ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಇಬ್ಬರು ಸೇರಿ ಸುಶ್ಮಿತಾಳ ಶವವನ್ನು ಕೆರೆಗೆ ಎಸೆದಿದ್ದರು. ಈ ನಡುವೆ, ಸುಶ್ಮಿತಾ ನಾಪತ್ತೆಯಾಗಿದ್ದಾಳೆ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ನವೆಂಬರ್​ 11ರಂದು ಕೆರೆಯಲ್ಲಿ ಆಕೆಯ ಶವ ಕೆರೆಯಲ್ಲಿ ತೇಲುತ್ತಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನು, ನಾಪತ್ತೆ ಕೇಸ್​ ತನಿಖೆ ಕೈಗೆತ್ತಿಕೊಂಡ ಖಾಕಿ ಪಡೆಗೆ ಸೀದಾ ಅನುಮಾನ ಬಂದಿದ್ದು ಸುಶ್ಮಿತಾ ಪತಿ ಮತ್ತು ಆತನ ಪ್ರೇಯಸಿ ಮೇಲೆ. ಇದೀಗ, ಕೊಲೆಯಲ್ಲಿ ಇಬ್ಬರ ಕೈವಾಡವಿರುವುದು ಕಂಡುಬಂದಿದ್ದು ಆರೋಪಿ ಪತಿ ನಾಗರಾಜ್(28), ಆತನ ಸಹೊದರ ಮೋಹನ್ ಹಾಗೂ ನಾಗರಾಜ್ ಗೆಳತಿ ಶೈಲಾರನ್ನು ಪೊಲೀಸರು ಬಂಧಿಸಿದ್ದಾರೆ.

Published On - 5:23 pm, Mon, 23 November 20

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ