AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವನಾಂಶ ಕೇಳಿದ್ದಕ್ಕೆ ಪತ್ನಿಯ ಜೀವ ತೆಗೆದ ಪತಿರಾಯ, ಈಗ ಅವನ ಪ್ರೇಯಸಿಯೂ ಅಂದರ್​

ಹಾಸನ: ಜಿಲ್ಲೆಯ ಚೀರನಹಳ್ಳಿ ಬಳಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಪತಿ ಹಾಗೂ ಪ್ರೇಯಸಿಯನ್ನು ಬಂಧಿಸಿದ್ದಾರೆ. ನಾಗರಾಜ್ ಹಾಗೂ ಆತನ ಪ್ರೇಯಸಿ ಶೈಲಾ ಬಂಧಿತ ಆರೋಪಿಗಳು. ಜೀವನಾಂಶ ನೀಡಲು ಕೇಸ್ ಹಾಕಿದ್ದಕ್ಕೆ ಕೊಲೆ ಅಂದ ಹಾಗೆ, ನವೆಂಬರ್​ 11ರಂದು ಚೀರನಹಳ್ಳಿ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಪೊಲೀಸರು ತನಿಖೆ ನಡೆಸಿದ ವೇಳೆ ಮೃತ ಮಹಿಳೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮದ ನಿವಾಸಿ ಸುಶ್ಮಿತಾ(26) ಎಂದು ತಿಳಿದುಬಂದಿತ್ತು. ಈ ಸುಳಿವನ್ನೇ […]

ಜೀವನಾಂಶ ಕೇಳಿದ್ದಕ್ಕೆ ಪತ್ನಿಯ ಜೀವ ತೆಗೆದ ಪತಿರಾಯ, ಈಗ ಅವನ ಪ್ರೇಯಸಿಯೂ ಅಂದರ್​
KUSHAL V
|

Updated on:Nov 23, 2020 | 5:23 PM

Share

ಹಾಸನ: ಜಿಲ್ಲೆಯ ಚೀರನಹಳ್ಳಿ ಬಳಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಪತಿ ಹಾಗೂ ಪ್ರೇಯಸಿಯನ್ನು ಬಂಧಿಸಿದ್ದಾರೆ. ನಾಗರಾಜ್ ಹಾಗೂ ಆತನ ಪ್ರೇಯಸಿ ಶೈಲಾ ಬಂಧಿತ ಆರೋಪಿಗಳು.

ಜೀವನಾಂಶ ನೀಡಲು ಕೇಸ್ ಹಾಕಿದ್ದಕ್ಕೆ ಕೊಲೆ ಅಂದ ಹಾಗೆ, ನವೆಂಬರ್​ 11ರಂದು ಚೀರನಹಳ್ಳಿ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಪೊಲೀಸರು ತನಿಖೆ ನಡೆಸಿದ ವೇಳೆ ಮೃತ ಮಹಿಳೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮದ ನಿವಾಸಿ ಸುಶ್ಮಿತಾ(26) ಎಂದು ತಿಳಿದುಬಂದಿತ್ತು. ಈ ಸುಳಿವನ್ನೇ ಬೆನ್ನತ್ತಿದ್ದ ಪೊಲೀಸರಿಗೆ ಇದೀಗ ಕೊಲೆಯ ಹಿಂದಿನ ಕಾರಣ ತಿಳಿದುಬಂದಿದೆ.

ಅಂದ ಹಾಗೆ, 6 ವರ್ಷದ ಹಿಂದೆ ಸುಶ್ಮಿತಾ ಹಾಗೂ ನಾಗರಾಜ್ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ  ವಿವಾಹವಾಗಿದ್ದರು. ಆದರೆ ನಾಗರಾಜ್, ಇತ್ತೀಚೆಗೆ ಶೈಲಾ ಎಂಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಮಾಹಿತಿ ಸಿಕ್ಕಿದೆ. ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಸುಶ್ಮಿತಾ ಆತನಿಂದ ದೂರವಾಗಿದ್ದಳು. ಇದಲ್ಲದೆ, ಗಂಡನಿಂದ ಜೀವನಾಂಶ ಪಡೆಯಲು ಕೇಸ್ ಸಹ ಹಾಕಿದ್ದಳು.

ಇದರಿಂದ ಹಾವಿನಂತೆ ಬುಸುಗುಟ್ಟಿದ ನಾಗರಾಜ್​ ನಿನ್ನ ಜೊತೆ ಕೇಸ್​ ಬಗ್ಗೆ ಮಾತನಾಡಬೇಕೆಂದು ನೆಪವೊಡ್ಡಿ ಅಕ್ಟೋಬರ್​ 29ರಂದು ಪತ್ನಿಯನ್ನು ಬೆಲಗೂರಿಗೆ ಕರೆಸಿಕೊಂಡಿದ್ದ. ಅಲ್ಲಿ ತನ್ನ ಪ್ರೇಯಸಿ ಶೈಲಾ ಜೊತೆ ಸೇರಿ ನಾಗರಾಜ್ ಸುಶ್ಮಿತಾಳನ್ನು ಕೊಂದಿದ್ದ.

ನಂತರ, ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಇಬ್ಬರು ಸೇರಿ ಸುಶ್ಮಿತಾಳ ಶವವನ್ನು ಕೆರೆಗೆ ಎಸೆದಿದ್ದರು. ಈ ನಡುವೆ, ಸುಶ್ಮಿತಾ ನಾಪತ್ತೆಯಾಗಿದ್ದಾಳೆ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ನವೆಂಬರ್​ 11ರಂದು ಕೆರೆಯಲ್ಲಿ ಆಕೆಯ ಶವ ಕೆರೆಯಲ್ಲಿ ತೇಲುತ್ತಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನು, ನಾಪತ್ತೆ ಕೇಸ್​ ತನಿಖೆ ಕೈಗೆತ್ತಿಕೊಂಡ ಖಾಕಿ ಪಡೆಗೆ ಸೀದಾ ಅನುಮಾನ ಬಂದಿದ್ದು ಸುಶ್ಮಿತಾ ಪತಿ ಮತ್ತು ಆತನ ಪ್ರೇಯಸಿ ಮೇಲೆ. ಇದೀಗ, ಕೊಲೆಯಲ್ಲಿ ಇಬ್ಬರ ಕೈವಾಡವಿರುವುದು ಕಂಡುಬಂದಿದ್ದು ಆರೋಪಿ ಪತಿ ನಾಗರಾಜ್(28), ಆತನ ಸಹೊದರ ಮೋಹನ್ ಹಾಗೂ ನಾಗರಾಜ್ ಗೆಳತಿ ಶೈಲಾರನ್ನು ಪೊಲೀಸರು ಬಂಧಿಸಿದ್ದಾರೆ.

Published On - 5:23 pm, Mon, 23 November 20

Follow Us
ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಅಕ್ಸಾ
ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಅಕ್ಸಾ
ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಬಳಸಿ ಪೋಸ್ಟ್​: ಓರ್ವನ ಬಂಧನ
ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಬಳಸಿ ಪೋಸ್ಟ್​: ಓರ್ವನ ಬಂಧನ
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'