ಮತ್ತಿಗೋಡು ಆನೆ ಶಿಬಿರದಲ್ಲಿ ಕಾಡಾನೆ ದಾಳಿಗೆ ಸಾಕಾನೆ ರಾಜೇಂದ್ರ ಬಲಿ
ಕೊಡಗು: ಮತ್ತಿಗೋಡು ಆನೆ ಶಿಬಿರದಲ್ಲಿ ಕಾಡಾನೆ ದಾಳಿಗೆ ಸಾಕಾನೆ ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಕ್ಯಾಂಪ್ನ ಸಾಕಾನೆ ರಾಜೇಂದ್ರ ಕಾಳಗದಲ್ಲಿ ಸಾವನ್ನಪ್ಪಿದೆ. ರಾತ್ರಿ ಆಹಾರ ನೀಡಿ ರಾಜೇಂದ್ರನನ್ನು ಅರಣ್ಯಕ್ಕೆ ಮೇಯಲು ಬಿಡಲಾಗಿತ್ತು. ಈ ವೇಳೆ ಕಾಡಾನೆ ಜೊತೆ ಸಾಕಾನೆ ರಾಜೇಂದ್ರ ಕಾದಾಟ ನಡೆಸಿದೆ ಎಂದು ಹೇಳಲಾಗಿದೆ. ರಾಜೇಂದ್ರನ ಹೊಟ್ಟೆ ಭಾಗಕ್ಕೆ ಕಾಡಾನೆ ತಿವಿದಿರುವ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ. ರಾಜೇಂದ್ರನನ್ನು 2006ರಲ್ಲಿ ಶಿಬಿರಕ್ಕೆ ಕರೆತರಲಾಗಿತ್ತು.

ಕೊಡಗು: ಮತ್ತಿಗೋಡು ಆನೆ ಶಿಬಿರದಲ್ಲಿ ಕಾಡಾನೆ ದಾಳಿಗೆ ಸಾಕಾನೆ ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಕ್ಯಾಂಪ್ನ ಸಾಕಾನೆ ರಾಜೇಂದ್ರ ಕಾಳಗದಲ್ಲಿ ಸಾವನ್ನಪ್ಪಿದೆ.
ರಾತ್ರಿ ಆಹಾರ ನೀಡಿ ರಾಜೇಂದ್ರನನ್ನು ಅರಣ್ಯಕ್ಕೆ ಮೇಯಲು ಬಿಡಲಾಗಿತ್ತು. ಈ ವೇಳೆ ಕಾಡಾನೆ ಜೊತೆ ಸಾಕಾನೆ ರಾಜೇಂದ್ರ ಕಾದಾಟ ನಡೆಸಿದೆ ಎಂದು ಹೇಳಲಾಗಿದೆ. ರಾಜೇಂದ್ರನ ಹೊಟ್ಟೆ ಭಾಗಕ್ಕೆ ಕಾಡಾನೆ ತಿವಿದಿರುವ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ. ರಾಜೇಂದ್ರನನ್ನು 2006ರಲ್ಲಿ ಶಿಬಿರಕ್ಕೆ ಕರೆತರಲಾಗಿತ್ತು.