AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ತಿಂಗಳ ಹಿಂದೆ ಹೂತಿದ್ದ ಶವ ಅಮಾವಾಸ್ಯೆಯಂದೇ ಮಂಗಮಾಯ

ಬಾಗಲಕೋಟೆ: ಹೂತಿಟ್ಟಿದ್ದ ಶವವನ್ನು ದುಷ್ಕರ್ಮಿಗಳು ಹೊತ್ತೊಯ್ದಿರುವ ಘಟನೆ ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ನಡೆದಿದೆ. ಜುಲೈ 20ರಂದು ಈ ಘಟನೆ ನಡೆದಿದೆ. ಹೂತಿದ್ದ ಶವ ಏಕಾ ಏಕಿ ಮಾಯವಾಗಿದೆ. ದುಷ್ಕರ್ಮಿಗಳು ಶವವನ್ನು ಹೊತ್ತೊಯ್ದಿದ್ದಾರೆ. ವಾಮಾಚಾರ, ನಿಧಿಗಾಗಿ ಶವ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ. ರಾಮಣ್ಣ ತುಮ್ಮರಮಟ್ಟಿ ಐದು ತಿಂಗಳ ಹಿಂದೆ ಶಿವರಾತ್ರಿ ಶಿವಯೋಗದ ದಿನ ಕ್ಯಾನ್ಸರ್​ನಿಂದ ಮೃತಪಟ್ಟಿದ್ದರು. ಅಂದ್ರೆ ಫೆಬ್ರವರಿ 21ರಂದು ಅವರು ಮೃತಪಟ್ಟಿದ್ದರು. ನಂತರ ಮಾರನೆ ದಿನ ಅಂದ್ರೆ ಫೆಬ್ರವರಿ 22 ರಂದು ಅವರ ಹೊಲದಲ್ಲೇ ಅಂತ್ಯಸಂಸ್ಕಾರ […]

5 ತಿಂಗಳ ಹಿಂದೆ ಹೂತಿದ್ದ ಶವ ಅಮಾವಾಸ್ಯೆಯಂದೇ ಮಂಗಮಾಯ
ಆಯೇಷಾ ಬಾನು
| Edited By: |

Updated on:Jul 23, 2020 | 1:01 PM

Share

ಬಾಗಲಕೋಟೆ: ಹೂತಿಟ್ಟಿದ್ದ ಶವವನ್ನು ದುಷ್ಕರ್ಮಿಗಳು ಹೊತ್ತೊಯ್ದಿರುವ ಘಟನೆ ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ನಡೆದಿದೆ. ಜುಲೈ 20ರಂದು ಈ ಘಟನೆ ನಡೆದಿದೆ.

ಹೂತಿದ್ದ ಶವ ಏಕಾ ಏಕಿ ಮಾಯವಾಗಿದೆ. ದುಷ್ಕರ್ಮಿಗಳು ಶವವನ್ನು ಹೊತ್ತೊಯ್ದಿದ್ದಾರೆ. ವಾಮಾಚಾರ, ನಿಧಿಗಾಗಿ ಶವ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ. ರಾಮಣ್ಣ ತುಮ್ಮರಮಟ್ಟಿ ಐದು ತಿಂಗಳ ಹಿಂದೆ ಶಿವರಾತ್ರಿ ಶಿವಯೋಗದ ದಿನ ಕ್ಯಾನ್ಸರ್​ನಿಂದ ಮೃತಪಟ್ಟಿದ್ದರು. ಅಂದ್ರೆ ಫೆಬ್ರವರಿ 21ರಂದು ಅವರು ಮೃತಪಟ್ಟಿದ್ದರು. ನಂತರ ಮಾರನೆ ದಿನ ಅಂದ್ರೆ ಫೆಬ್ರವರಿ 22 ರಂದು ಅವರ ಹೊಲದಲ್ಲೇ ಅಂತ್ಯಸಂಸ್ಕಾರ ‌ಮಾಡಲಾಗಿತ್ತು. ಆದರೆ ಮೊನ್ನೆ ಅಂದ್ರೆ ನಾಗರ(ಭೀಮನ) ಅಮಾವಾಸ್ಯೆ ದಿನ ದುಷ್ಕರ್ಮಿಗಳು ಶವ ಹೊತ್ತೊಯ್ದಿದ್ದಾರೆ.

ಅಮಾವಾಸ್ಯೆ ಆದ ಕಾರಣ ರಾತ್ರೋರಾತ್ರಿ ಶವ ಹೊತ್ತೊಯ್ದಿದ್ದಾರೆ. ವಾಮಾಚಾರ ಅಥವಾ ನಿಧಿಗಾಗಿ ಈ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಸತ್ತು, ಮಣ್ಣಾಗಿ 5 ತಿಂಗಳಾಗಿರುವುದರಿಂದ ರಾಮಣ್ಣ ತುಮ್ಮರಮಟ್ಟಿ ಅವರ ದೇಹ ಅಸ್ಥಿಪಂಜರವಾಗಿರಬಹುದು. ಸದ್ಯ ರೂಗಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 9:43 am, Wed, 22 July 20

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!