2A ಮೀಸಲಾತಿ ಕೊಡಿಸಿದ್ರೆ ಕುಂದಾ ತಿನ್ನಿಸ್ತೇನೆ -ಸರ್ಕಾರಕ್ಕೆ ಹೆಬ್ಬಾಳ್ಕರ್ ಓಪನ್ ಚಾಲೆಂಜ್
ಬೆಳಗಾವಿ: ಪಂಚಮಸಾಲಿ ಸಮಾಜದವರಿಗೆ 2A ಮೀಸಲಾತಿ ಕೊಡಬೇಕು. ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಇದು ಪಕ್ಕಾ ಆಗುತ್ತೆ ಎಂದು ವೇದಿಕೆಯ ಮೇಲೆಯೇ ಇದ್ದ ಬಿಜೆಪಿ ಮುಖಂಡ ಮುರುಗೇಶ್ ನಿರಾಣಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಇಲ್ಲವಾದರೆ ನೀವು ನನಗೆ 4 ಬಂಗಾರದ ಬಳೆ ತಂದುಕೊಡಬೇಕು.. ಇದು ಸಹೋದರಿಯಿಂದ ಸಹೋದರನಿಗೆ ಸವಾಲು ಎಂದ ಲಕ್ಷ್ಮೀ, BSY ಸರ್ಕಾರದಲ್ಲಿ ಪಂಚಮಸಾಲಿ ಸಮಾಜದವರಿಗೆ 2ಎ ಮೀಸಲಾತಿ ಕೊಡಬೇಕು. ನಿಮ್ಮ ಅವಧಿಯಲ್ಲಿ ಕೊಡಿಸಿದರೆ ಕುಂದಾ ತಂದು ತಿನ್ನಿಸುತ್ತೇನೆ. ಇಲ್ಲವಾದರೆ ನೀವು […]

ಬೆಳಗಾವಿ: ಪಂಚಮಸಾಲಿ ಸಮಾಜದವರಿಗೆ 2A ಮೀಸಲಾತಿ ಕೊಡಬೇಕು. ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಇದು ಪಕ್ಕಾ ಆಗುತ್ತೆ ಎಂದು ವೇದಿಕೆಯ ಮೇಲೆಯೇ ಇದ್ದ ಬಿಜೆಪಿ ಮುಖಂಡ ಮುರುಗೇಶ್ ನಿರಾಣಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಇಲ್ಲವಾದರೆ ನೀವು ನನಗೆ 4 ಬಂಗಾರದ ಬಳೆ ತಂದುಕೊಡಬೇಕು..
ಇದು ಸಹೋದರಿಯಿಂದ ಸಹೋದರನಿಗೆ ಸವಾಲು ಎಂದ ಲಕ್ಷ್ಮೀ, BSY ಸರ್ಕಾರದಲ್ಲಿ ಪಂಚಮಸಾಲಿ ಸಮಾಜದವರಿಗೆ 2ಎ ಮೀಸಲಾತಿ ಕೊಡಬೇಕು. ನಿಮ್ಮ ಅವಧಿಯಲ್ಲಿ ಕೊಡಿಸಿದರೆ ಕುಂದಾ ತಂದು ತಿನ್ನಿಸುತ್ತೇನೆ. ಇಲ್ಲವಾದರೆ ನೀವು ನನಗೆ 4 ಬಂಗಾರದ ಬಳೆ ತಂದುಕೊಡಬೇಕು ಎಂದು ವೇದಿಕೆ ಮೇಲೆ ಮುರುಗೇಶ್ ನಿರಾಣಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಓಪನ್ ಚಾಲೆಂಜ್ ಹಾಕಿದರು.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಜಿಲ್ಲೆಯ ಸುವರ್ಣಸೌಧದ ಎದುರು ಉಪವಾಸ ಸತ್ಯಾಗ್ರಹ ನೆಡೆಯುತ್ತಿದೆ. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯುತ್ತಿದ್ದು ಸತ್ಯಾಗ್ರಹದ ವೇಳೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಿರಾಣಿಗೆ ಈ ಸವಾಲ್ ಎಸೆದರು.
Published On - 4:39 pm, Wed, 28 October 20