AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ವರದಿ ಬರುವ ಮುನ್ನವೇ 600 ಜನರ ಬಿಡುಗಡೆ, ಹೆಚ್ಚಾದ ಆತಂಕ

ಬೆಳಗಾವಿ: ಸರ್ಕಾರದ ಆದೇಶದ ನೆಪ ಹೇಳಿ ಕೊವಿಡ್ ವರದಿ ಬರುವ ಮುನ್ನವೇ 600ಜನರನ್ನ ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಮುಂಬೈ ಸೇರಿದಂತೆ ಹೊರ ರಾಜ್ಯದಿಂದ ಬಂದಿದ್ದ 600ಕ್ಕೂ ಅಧಿಕ ಜನರನ್ನ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಬೆಳಗಾವಿ ಜಿಲ್ಲಾಡಳಿತ, ಸರ್ಕಾರದ ಆದೇಶ ಇದೆ ಎಂದು ವರದಿ ಬರುವ ಮುನ್ನವೇ ಬಿಡುಗಡೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಹಾಸ್ಟೆಲ್ ಮತ್ತು ಲಾಡ್ಜ್​ಗಳಲ್ಲಿ ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಮೊದಲೇ ಅಥಣಿಯಲ್ಲಿ ಇದೇ ರೀತಿ ಕೊರೊನಾ ವರದಿ […]

ಕೊವಿಡ್ ವರದಿ ಬರುವ ಮುನ್ನವೇ 600 ಜನರ ಬಿಡುಗಡೆ, ಹೆಚ್ಚಾದ ಆತಂಕ
ಆಯೇಷಾ ಬಾನು
|

Updated on:May 31, 2020 | 2:21 PM

Share

ಬೆಳಗಾವಿ: ಸರ್ಕಾರದ ಆದೇಶದ ನೆಪ ಹೇಳಿ ಕೊವಿಡ್ ವರದಿ ಬರುವ ಮುನ್ನವೇ 600ಜನರನ್ನ ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಮುಂಬೈ ಸೇರಿದಂತೆ ಹೊರ ರಾಜ್ಯದಿಂದ ಬಂದಿದ್ದ 600ಕ್ಕೂ ಅಧಿಕ ಜನರನ್ನ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಬೆಳಗಾವಿ ಜಿಲ್ಲಾಡಳಿತ, ಸರ್ಕಾರದ ಆದೇಶ ಇದೆ ಎಂದು ವರದಿ ಬರುವ ಮುನ್ನವೇ ಬಿಡುಗಡೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯಾದ್ಯಂತ ಹಾಸ್ಟೆಲ್ ಮತ್ತು ಲಾಡ್ಜ್​ಗಳಲ್ಲಿ ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಮೊದಲೇ ಅಥಣಿಯಲ್ಲಿ ಇದೇ ರೀತಿ ಕೊರೊನಾ ವರದಿ ಮುನ್ನವೇ ವಲಸಿಗರನ್ನ ಬಿಟ್ಟು ಕಳುಹಿಸಿ ಎಡವಟ್ಟು ಮಾಡಿಕೊಂಡಿದ್ರು. ಹೀಗೆ ಕ್ವಾರಂಟೈನ್​ನಿಂದ ವರದಿ ಬರುವ ಮುನ್ನ ಹೋದ 13ಜನರಿಗೆ ಮೊನ್ನೆಯಷ್ಟೇ ಸೋಂಕಿರುವುದು ದೃಢ ಪಟ್ಟಿತ್ತು.

ಅದನ್ನು ನೋಡಿಯೂ ಬೆಳಗಾವಿ ಜಿಲ್ಲಾಡಳಿತ ಬುದ್ದಿ ಕಲಿತಿಲ್ಲ. ಇನ್ನೂ 600 ಜನರ ವರದಿ ಬರುವ ಮುನ್ನ ಬಿಟ್ಟಿದ್ದಕ್ಕೆ ಕ್ವಾರಂಟೈನ್ ನಲ್ಲಿದ್ದವರು ಆಕ್ರೋಶ ಹೊರಹಾಕಿದ್ದಾರೆ. ವರದಿ ಬಂದ ಮೇಲೆ ಹೋಗ್ತೀವಿ ಅಂದ್ರೂ ಅಧಿಕಾರಿಗಳು ಒತ್ತಾಯದಿಂದ ಕ್ವಾರಂಟೈನ್​ನಲ್ಲಿದ್ದವರನ್ನು ಹೊರ ಹಾಕಿದ್ದಾರೆ. ಜಿಲ್ಲಾಡಳಿತದ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 9:55 am, Sun, 31 May 20