AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಕಿವಿಯಲ್ಲಿ ಈ ಮುಸ್ಲಿಂ ವ್ಯಕ್ತಿ ಹೇಳಿದ್ದೇನು? ಕುತೂಹಲ ಸೃಷ್ಟಿಸಿದ ಫೋಟೋ.. ಓವೈಸಿ ಊಹೆಯೂ ಸುಳ್ಳಾಯ್ತ !

ಹೀಗೆ ಫೋಟೋಗಳು ತುಂಬ ವೈರಲ್ ಆದ ಬೆನ್ನಲ್ಲೇ, ರಾಷ್ಟ್ರೀಯ ಮಾಧ್ಯಮವೊಂದು ಪಶ್ಚಿಮ ಬಂಗಾಳದ ಜುಲ್ಫಿಕರ್​ ಅಲಿ ಅವರನ್ನು ಸಂಪರ್ಕಿಸಿತ್ತು. ಈ ವೇಳೆ ಅವರು ತಾವು ಮೋದಿಯವರ ಕಿವಿಯಲ್ಲಿ ಮಾತಾಡಿದ್ದೇನು ಎಂಬುದನ್ನು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಕಿವಿಯಲ್ಲಿ ಈ ಮುಸ್ಲಿಂ ವ್ಯಕ್ತಿ ಹೇಳಿದ್ದೇನು? ಕುತೂಹಲ ಸೃಷ್ಟಿಸಿದ ಫೋಟೋ.. ಓವೈಸಿ ಊಹೆಯೂ ಸುಳ್ಳಾಯ್ತ !
ಮುಸ್ಲಿಂ ವ್ಯಕ್ತಿ ನರೇಂದ್ರ ಮೋದಿಯವರ ಕಿವಿಯಲ್ಲಿ ಮಾತನಾಡುತ್ತಿರುವುದು
Lakshmi Hegde
|

Updated on: Apr 09, 2021 | 2:02 PM

Share

ಕೋಲ್ಕತ್ತ: ಪಶ್ಚಿಮ ಬಂಗಾಳದ ಜುಲ್ಫಿಕರ್​ ಅಲಿ ಎಂಬ ಮುಸ್ಲಿಂ ವ್ಯಕ್ತಿ ರಾತ್ರೋರಾತ್ರಿ ಇಂಟರ್​ನೆಟ್​​ನಲ್ಲಿ ಫೇಮಸ್ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಿವಿಯಲ್ಲಿ ಜುಲ್ಫಿಕರ್​ ಏನನ್ನೋ ಹೇಳುತ್ತಿರುವ ಫೋಟೋ ತುಂಬ ವೈರಲ್​ ಆಗಿದ್ದು, ಇವರೇನು ಹೇಳಿರಬಹುದು ಎಂಬ ಕುತೂಹಲವನ್ನೂ ಹುಟ್ಟಿಹಾಕಿದೆ. ತಮ್ಮ ಕಿವಿಯ ಬಳಿ ಬಂದು ಮಾತನಾಡುತ್ತಿರುವ ಜುಲ್ಫಿಕರ್​ರ ಎರಡೂ ಭುಜವನ್ನು ಪ್ರಧಾನಿ ನರೇಂದ್ರ ಮೋದಿಯವರು ಹಿಡಿದುಕೊಂಡಿರುವ ಫೋಟೋವನ್ನು ಹಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಈ ಫೋಟೋದ ಬಗ್ಗೆ AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕೂಡ ವ್ಯಂಗ್ಯವಾಡಿದ್ದರು. ಮೋದಿಯವರ ಕಿವಿಯಲ್ಲಿ ಮಾತನಾಡಿದ ಮುಸ್ಲಿಂ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಆದರೆ ಮಾಧ್ಯಮದವರು ನನ್ನ ಬಳಿ ಬಂದು, ಅವರು ಏನು ಮಾತನಾಡಿರಬಹುದು ಎಂದು ನಿಮಗೆ ಅನ್ನಿಸುತ್ತದೆ ಎಂದು ಪ್ರಶ್ನಿಸಿದರು. ಬಹುಶಃ ಆತ, ‘ಮೋದಿ ಜೀ, ನಾನು ಬಾಂಗ್ಲಾದೇಶಿಯಲ್ಲ, ನಾವು ಎನ್​ಆರ್​ಸಿ/ಎನ್​ಆರ್​ಪಿಗಾಗಿ ದಾಖಲೆಗಳನ್ನು ತೋರಿಸುವುದಿಲ್ಲ, ನಾವು ತ್ರಿವಳಿ ತಲಾಖ್​​ನ್ನು ಬೆಂಬಲಿಸುವುದಿಲ್ಲ. ನೀವು ನಮ್ಮಂತೆ ಯಾವಾಗ ಟೋಪಿ ಧರಿಸುತ್ತೀರಿ?’ ಎಂದು ಕೇಳಿರಬಹುದು ಎಂದು ಹಾಸ್ಯ ಮಾಡಿದ್ದರು. ಅಷ್ಟೇ ಅಲ್ಲ, ಇದೆಲ್ಲ ಬಿಜೆಪಿಯ ಗಿಮಿಕ್ ಎಂದೂ ಹೇಳಿದ್ದರು.

ಹೀಗೆ ಫೋಟೋಗಳು ತುಂಬ ವೈರಲ್ ಆದ ಬೆನ್ನಲ್ಲೇ, ರಾಷ್ಟ್ರೀಯ ಮಾಧ್ಯಮವೊಂದು ಪಶ್ಚಿಮ ಬಂಗಾಳದ ಜುಲ್ಫಿಕರ್​ ಅಲಿ ಅವರನ್ನು ಸಂಪರ್ಕಿಸಿತ್ತು. ಈ ವೇಳೆ ಅವರು ತಾವು ಮೋದಿಯವರ ಕಿವಿಯಲ್ಲಿ ಮಾತಾಡಿದ್ದೇನು ಎಂಬುದನ್ನು ತಿಳಿಸಿದ್ದಾರೆ. ನನಗೀಗ 40ವರ್ಷ. ಇಷ್ಟು ವರ್ಷಗಳಲ್ಲಿ ಮೋದಿಯವರ ಬಳಿ ಮಾತನಾಡಿದ ಈ 40 ಸೆಕೆಂಡ್​​ಗಳನ್ನು ಎಂದಿಗೂ ಮರೆಯುವುದಿಲ್ಲ. ಪ್ರಧಾನಿಯವರು ನನ್ನ ಬಳಿ ಹೆಸರು ಕೇಳಿದರು. ನಾನು ಜುಲ್ಫಿಕರ್​ ಅಲಿ ಎಂದು ಹೇಳಿದೆ. ನೀವು ಏನಾಗಬೇಕು ಎಂದು ಬಯಸುತ್ತೀರಿ ಎಂದು ಪ್ರಶ್ನಿಸಿದರು. ಅದಕ್ಕೆ ನಾನು, ನನಗೆ ಎಂಎಲ್​​ಎ, ಎಂಪಿ ಆಗಲು ಇಷ್ಟವಿಲ್ಲ. ದೇಶಕ್ಕಾಗಿ ಕೆಲಸ ಮಾಡಬೇಕು ಎಂಬುದು ನನ್ನ ಇಚ್ಛೆ ಎಂದು ಹೇಳಿದೆ. ಅಷ್ಟೇ ಅಲ್ಲ, ನಿಮ್ಮೊಂದಿಗೆ ಒಂದು ಫೋಟೋ ತೆಗೆದುಕೊಳ್ಳುವ ಆಸೆ ಎಂದೂ ಅವರಲ್ಲಿ ಮನವಿ ಮಾಡಿಕೊಂಡೆ ಎಂದು ಜುಲ್ಫಿಕರ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮಾತನಾಡು ಎಂದು ನನಗೆ ಯಾರೂ ಹೇಳಿರಲಿಲ್ಲ. ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಆಸೆಯಾಗಿ ನಾನೇ ಮಾತನಾಡಿಸಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ಲಸಿಕೆ ಪಡೆಯಲು ಹಿಂದೇಟು ಹಾಕಿದ ಜನ; ಮುಸ್ಲಿಂ ಧರ್ಮಗುರುಗಳಿಗೆ ಮನವೊಲಿಸಿ ಲಸಿಕೆ ನೀಡಿದ ಜಿಲ್ಲಾಡಳಿತ

Jasprit Bumrah IPL 2021 MI Team Player: ಮದುವೆ ಬಳಿಕ ಅಖಾಡಕ್ಕಿಳಿಯಲು ಸಜ್ಜಾದ ಯಾರ್ಕರ್​ ಕಿಂಗ್ ಬುಮ್ರಾ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!