AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sarala Subbarao Review: ಜೆನ್ ಜೀ ಕಾಲಕ್ಕೆ ರೆಟ್ರೋ ಪ್ರೀತಿ ಪರಿಚಯಿಸುವ ‘ಸರಳ ಸುಬ್ಬರಾವ್’

Sarala Subbarao Review: ಜೆನ್ ಜೀ ಕಾಲಕ್ಕೆ ರೆಟ್ರೋ ಪ್ರೀತಿ ಪರಿಚಯಿಸುವ ‘ಸರಳ ಸುಬ್ಬರಾವ್’
Sarala Subbarao Review
ಸರಳ ಸುಬ್ಬರಾವ್
UA
  • Time - 130 Minutes
  • Released - February 20, 2026
  • Language - Kannada
  • Genre - Drama, Family, Period, Romantic
Cast - ಅಜಯ್ ರಾವ್, ಮಿಶಾ ನಾರಂಗ್, ವಿಜಯ್ ಚಂಡೂರು, ರಘು ರಾಮನಕೊಪ್ಪ, ರಂಗಾಯಣ ರಘು, ಚಿತ್ಕಳಾ ಬಿರಾದರ್ ಮುಂತಾದವರು.
Director - ಮಂಜು ಸ್ವರಾಜ್
3
Critic's Rating
ಮದನ್​ ಕುಮಾರ್​
|

Updated on: Feb 23, 2026 | 8:56 PM

Share

ಒಂದು ಕಾಲದಲ್ಲಿ ಸಾಹಿತ್ಯ ಕೃತಿಗಳನ್ನು ಆಧರಿಸಿ ಹೆಚ್ಚು ಸಿನಿಮಾಗಳು ಮೂಡಿಬರುತ್ತಿದ್ದವು. ಕಾಲಕ್ರಮೇಣ ಅಂತಹ ಸಿನಿಮಾಗಳ ಸಂಖ್ಯೆ ಕಡಿಮೆ ಆಯಿತು. ಕನ್ನಡದ ಖ್ಯಾತ ಲೇಖಕಿ ತ್ರಿವೇಣಿ ಅವರ ಒಂದಷ್ಟು ಕಾದಂಬರಿಗಳು ಸಿನಿಮಾ ರೂಪ ಪಡೆದಿದ್ದವು. ಈಗ ಅದೇ ತ್ರಿವೇಣೆ ಅವರ ‘ವಸಂತಗಾನ’ ಕಾದಂಬರಿಯನ್ನು ಆಧರಿಸಿ ‘ಸರಳ ಸುಬ್ಬರಾವ್’ (Sarala Subbarao) ಸಿನಿಮಾ ಮಾಡಲಾಗಿದೆ. ಮಂಜು ಸ್ವರಾಜ್ ನಿರ್ದೇಶನ ಮಾಡಿದ ಈ ಚಿತ್ರಕ್ಕೆ ಲೋಹಿತ್ ನಂಜುಂಡಯ್ಯ ಅವರು ಬಂಡವಾಳ ಹೂಡಿದ್ದಾರೆ. ಅಜಯ್ ರಾವ್ (Ajay Rao), ಮಿಶಾ ನಾರಂಗ್ ಅವರು ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಸರಳ ಸುಬ್ಬರಾವ್ ಚಿತ್ರದ ವಿಮರ್ಶೆ ಇಲ್ಲಿದೆ..

1971ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ‘ಸರಳ ಸುಬ್ಬರಾವ್’ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ನಿಜಕ್ಕೂ ಸವಾಲಿನ ಕೆಲಸ. 50 ವರ್ಷಕ್ಕಿಂತಲೂ ಹಿಂದಿನ ಕಾಲಘಟ್ಟವನ್ನು 2026ರಲ್ಲಿ ಚಿತ್ರಿಸುವುದು ಎಂದರೆ ಸುಲಭದ ಮಾತಲ್ಲ. ಆ ಕೆಲಸವನ್ನು ‘ಸರಳ ಸುಬ್ಬರಾವ್’ ಸಿನಿಮಾ ಯಶಸ್ವಿಯಾಗಿ ಮಾಡಿದೆ. ಈ ಸಿನಿಮಾ ನೋಡುತ್ತಿದ್ದರೆ ನೇರವಾಗಿ 5 ದಶಕಗಳ ಹಿಂದಕ್ಕೆ ಹೋದಂತಹ ಅನುಭವ ಪ್ರೇಕ್ಷಕರಿಗೆ ಆಗುತ್ತದೆ.

ಆ ಕಾಲದಲ್ಲಿ ಪ್ರೀತಿ, ಪ್ರೇಮ ಹೇಗಿತ್ತು? ಮೊಬೈಲ್ ಇಲ್ಲದ ಆ ದಿನಗಳಲ್ಲಿ ಪ್ರೇಮಿಗಳ ಚಡಪಡಿಕೆ ಯಾವ ರೀತಿ ಇರುತ್ತಿತ್ತು? ಗಂಡ-ಹೆಂಡತಿ ಸಂಬಂಧ ಹೇಗಿತ್ತು ಎಂಬುದನ್ನು ಸುಂದರ ಕವಿತೆಯ ರೀತಿಯಲ್ಲಿ ‘ಸರಳ ಸುಬ್ಬರಾವ್’ ಸಿನಿಮಾ ಕಟ್ಟಿಕೊಟ್ಟಿದೆ. ಇಲ್ಲಿ ನಾಯಕಿಯ ಪಾತ್ರದ ಹೆಸರು ಸರಳ. ಅಷ್ಟೇ ಸರಳವಾಗಿ ಸಿನಿಮಾ ಮೂಡಿಬಂದಿದೆ. ಯಾವುದೇ ಆಡಂಬರ ಇಲ್ಲದೇ ನೈಜವಾಗಿ ಎಲ್ಲ ಪಾತ್ರಗಳನ್ನು ತೋರಿಸಲಾಗಿದೆ.

ಇಂಗ್ಲಿಷ್ ಪ್ರೊಫೆಸರ್ ಸುಬ್ಬರಾವ್ ಎಂಬ ಪಾತ್ರದಲ್ಲಿ ಅಜಯ್ ರಾವ್ ನಟಿಸಿದ್ದಾರೆ. ಗೃಹಿಣಿಯಾಗಿ ಮಿಶಾ ನಾರಂಗ್ ಅವರು ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಕಾಂಬಿನೇಷನ್ ಬಹಳ ಚೆನ್ನಾಗಿದೆ. ಹೊಸದಾಗಿ ಮದುವೆಯಾದ ದಂಪತಿಯ ಸಲ್ಲಾಪಗಳನ್ನು ಸುಂದರವಾಗಿ ತೋರಿಸಲಾಗಿದೆ. ಮೊದಲ ಬಾರಿ ಗರ್ಭಿಣಿ ಆದ ಮಹಿಳೆಯ ಬಯಕೆ, ತವಕ, ತಲ್ಲಣ, ಆಂತಕ ಇತ್ಯಾದಿ ಭಾವನೆಗಳನ್ನು ಈ ಸಿನಿಮಾ ಯಶಸ್ವಿಯಾಗಿ ಚಿತ್ರಿಸುತ್ತದೆ. ಆ ಎಲ್ಲ ದೃಶ್ಯಗಳಲ್ಲಿ ಮಿಶಾ ನಾರಂಗ್ ಅವರು ಉತ್ತಮವಾಗಿ ಅಭಿನಯಿಸಿದ್ದಾರೆ.

ರಂಗಾಯಣ ರಘು, ಚಿತ್ಕಳಾ ಬಿರಾದರ್ ಮುಂತಾದ ಹಿರಿಯ ಕಲಾವಿದರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಿಭಾಯಿಸಿರುವ ಪಾತ್ರಕ್ಕೆ ಈ ಸಿನಿಮಾದಲ್ಲಿ ತೂಕ ಇದೆ. ಅವರನ್ನು ಭಾವುಕ, ಗಂಭೀರ ಪಾತ್ರಗಳಲ್ಲಿ ನೋಡಬೇಕು ಎಂದು ಬಯಸುವ ಪ್ರೇಕ್ಷಕರಿಗೆ ‘ಸರಳ ಸುಬ್ಬರಾವ್’ ಸಿನಿಮಾ ಖುಷಿ ನೀಡುತ್ತದೆ. ವಿಜಯ್ ಚಂಡೂರು, ರಘು ರಾಮನಕೊಪ್ಪ ಅವರು ಪ್ರೇಕ್ಷಕರನ್ನು ನಗಿಸುತ್ತಾರೆ.

ಈ ಚಿತ್ರದ ಮೂಲಕ Gen Z ಕಾಲದ ಪ್ರೇಕ್ಷಕರಿಗೆ ಬೇರೆಯದೇ ಲೋಕವನ್ನು ಪರಿಚಯಿಸಲಾಗಿದೆ. ಇಂದಿನ ಸಿನಿಮಾ ಮೇಕಿಂಗ್ ಶೈಲಿ ಬದಲಾಗಿದೆ. ಹೊಸ ತಲೆಮಾರಿನವರ ಪ್ರೀತಿಯ ವ್ಯಾಖ್ಯಾನವೂ ಬದಲಾಗಿದೆ. ಆದರೆ ‘ಸರಳ ಸುಬ್ಬರಾವ್’ ಸಿನಿಮಾ ಆ ವಿಚಾರಗಳಲ್ಲಿ ರಾಜಿ ಆಗದೇ ಹಳೇ ಕಾಲಘಟ್ಟದ ಶೈಲಿಯಲ್ಲೇ ಕಥೆಯನ್ನು ಪ್ರೇಕ್ಷಕರ ಮುಂದಿರಿಸಿದೆ. ಹಾಗಾಗಿ ಈ ಸಿನಿಮಾ ಸಂಪೂರ್ಣವಾಗಿ ಬೇರೆಯದೇ ಫೀಲ್ ನೀಡುತ್ತದೆ.

30 ಸೆಕೆಂಡ್ ಅವಧಿಯ ರೀಲ್​ಗಳನ್ನು ಕೂಡ ಫಾಸ್ಟ್ ಫಾರ್ವರ್ಡ್ ಮಾಡಿಕೊಂಡು ನೋಡುವ ಮಂದಿಗೆ ‘ಸರಳ ಸುಬ್ಬರಾವ್’ ಸಿನಿಮಾ ರುಚಿಸದೇ ಇರಬಹುದು. ಒಟ್ಟಾರೆ ಕಥೆಯಲ್ಲಿ ರಣರೋಚಕ ಟ್ವಿಸ್ಟ್ ಕಾಣಿಸದೇ ಇರಬಹುದು. ಮಾಸ್ ಮಸಾಲೆ ಅಂಶಗಳು ಇಲ್ಲದ ಕಾರಣ ಆ ರೀತಿಯ ಪ್ರೇಕ್ಷಕರಿಗೆ ಮನರಂಜನೆ ಕಡಿಮೆ ಎನಿಸಬಹುದು. ಆದರೆ ಹಳೇ ಕಾಲದ ಪ್ರೀತಿಯನ್ನು ಫೀಲ್ ಮಾಡಬೇಕು ಎಂಬ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗುತ್ತದೆ.

ಇದನ್ನೂ ಓದಿ: ಸೆಕೆಂಡ್ ಕೇಸ್ ಆಫ್ ಸೀತಾರಾಮ್ ವಿಮರ್ಶೆ: ಕುತೂಹಲದ ಕಥೆ, ಕೊನೆವರೆಗೂ ರೋಚಕತೆ

ಕಲಾ ನಿರ್ದೇಶಕ ಅಮರ್ ಅವರ ಕೆಲಸ ಎದ್ದು ಕಾಣುತ್ತದೆ. 1970ರ ದಶಕವನ್ನು ತೋರಿಸಲು ಅವರು ಶ್ರಮಿಸಿದ್ದಾರೆ. ಪ್ರದೀಪ್ ಪದ್ಮ ಕುಮಾರ್ ಅವರ ಛಾಯಾಗ್ರಹಣ ಸೇರಿದಂತೆ ಇಡೀ ತಾಂತ್ರಿಕ ಬಳಗ ಅಚ್ಚುಕಟ್ಟಾಗಿ ಕೆಲಸ ಮಾಡಿದೆ. ಫೆಬ್ರವರಿ 20ರಂದು ಬಿಡುಗಡೆ ಆದ ಈ ಚಿತ್ರವು ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ